ನಗರದ ರಸ್ತೆಗಳು ಮಾದರಿಯಾಗಲಿ
Team Udayavani, Dec 2, 2018, 12:57 PM IST
ರಾಜ್ಯದ ಇತರ ನಗರಗಳಿಗೆ ತುಲನೆ ಮಾಡಿದರೆ (ಬೆಂಗಳೂರು ಬಿಟ್ಟು) ನಮ್ಮ ನಗರದಲ್ಲಿ ಹೆಚ್ಚಿನ ಕಾಂಕ್ರೀಟ್ ರಸ್ತೆಗಳನ್ನು ಕಾಣಲು ಸಾಧ್ಯ ಎಂಬುವುದು ನನ್ನ ಅನಿಸಿಕೆ. ಸದ್ಯಕ್ಕೆ ಲೇಡಿಹಿಲ್-ಪಿವಿಎಸ್ ರಸ್ತೆಯನ್ನು ಮೆಲ್ದರ್ಜೆಗೇರಿಸುವ ಕೆಲಸವು ಅಲ್ಲಲ್ಲಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕೆಲವೊಂದು ಸೂಕ್ತ ಕ್ರಮಗಳನ್ನು ಅನುಸರಿಸಿದರೆ ನಗರವನ್ನು ಇನ್ನೂ ಸುಂದರಗೊಳಿಸಬಹುದು.
. ರಸ್ತೆಗಳನ್ನು ಮೆಲ್ದರ್ಜೆಗೇರಿಸುವ ಸಂದರ್ಭಗಳಲ್ಲಿ, ಕಾಲುದಾರಿಗೆ ಅವಕಾಶರಲಿ.
. ರಸ್ತೆ ಮತ್ತು ಕಾಲುದಾರಿಯ ನಡುವೆ ಅಂತರದ್ದರೆ, ಆ ಪ್ರದೇಶಕ್ಕೂ ಕಾಂಕ್ರೀಟ್ ಇಲ್ಲವೆ, ಡಾಮರು ಹಾಕುವಂತಾಗಲಿ.
. ವಿದ್ಯುತ್ ಕಂಬಗಳನ್ನು ರಸ್ತೆಯ ಅಂಚಿನಲ್ಲಿ, ಅಂದರೆ, ಕಾಲು ದಾರಿ ಪ್ರಾರಂಭವಾಗುವಲ್ಲಿ ಅಳವಡಿಸಬೇಕು. ವಿದ್ಯುತ್ ತಂತಿಗಳನ್ನು ಭೂಗತಗೊಳಿಸಿದರೆ ಬಲು ಉತ್ತಮ.
. ಕಾಲುದಾರಿಯಲ್ಲಿ ಅಂಗಡಿ ಇಲ್ಲವೇ ಕಚೇರಿಗಳ ಫಲಕಗಳನ್ನು ಹಾಕುವಂತಿಲ್ಲ. ಮಾರ್ಗಸೂಚಿ ಅಥವಾ ರಸ್ತೆಗೆ ಸಂಬಂಧಿಸಿದ ಫಲಕಗಳಿದ್ದಲ್ಲಿ, ಅದನ್ನು ರಸ್ತೆಯ ಅಂಚಿಗೆ ಹಾಕಿದರೆ ಉತ್ತಮ.
. ಕಾಲುದಾರಿ ಪ್ರದೇಶದಲ್ಲಿ ಬಸ್ ನಿಲುಗಡೆ ತಾಣಗಳನ್ನು ನಿರ್ಮಿಸುವುದಾದಲ್ಲಿ, ಬಸ್ ನಿಲುಗಡೆ ತಾಣದ ಮುಂದೆ ಅಥವಾ ಹಿಂದೆ ಪಾದಚಾರಿಗಳಿಗೆ ಅವಕಾಶ ಮಾಡಿದರೆ ಉತ್ತಮ.
. ರಸ್ತೆಯಲ್ಲಿ ಯಾರೂ ಉಗುಳುವಂತಿಲ್ಲ ಅಥವಾ ಕಸ ಬಿಸಾಡುವಂತಿಲ್ಲ. ರಸ್ತೆಯಲ್ಲಿ ನೂರು ಮೀಟರಿಗೆ ಒಂದರಂತೆ ಪೆಟ್ಟಿಗೆ(ವೇಸ್ಟ್ ಬಾಕ್ಸ್) ಗಳಲ್ಲಿ ಅಳವಡಿಸಿ, ಜನರು ಅದರ ಉಪಯೋಗವನ್ನು ಪಡೆಯುವಂತಿರಬಹುದು.
. ಯಾವುದೇ ಸಂದರ್ಭದಲ್ಲಿ ಕಾಲುದಾರಿಯು ಪಾದಚಾರಿಗಳ ಉಪಯೋಗಕ್ಕೆ ಸಿಗುವಂತಿರಬೇಕು. ಕಾಲುದಾರಿಯು ಅಗಲದ್ದಲ್ಲಿ/ಜಾಗವಿದ್ದಲ್ಲಿ ಮಾತ್ರ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಕೊಡಬಹುದು. ಅದಕ್ಕಾಗಿ ಸಂಬಂಧಪಟ್ಟವರು ಸರಿಯಾದ ಜಾಗದಲ್ಲಿ ಸರಿಯಾಗಿ ಗುರುತು ಮಾಡಿದರೆ ಒಳ್ಳೆಯದು.
. ವಾಹನಗಳ ಒತ್ತಡ ಜಾಸ್ತಿ ಇರುವಲ್ಲಿ, ಮೂರು ಮೂರು ಸಾಲುಗಳ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ಮಾಡಬೇಕು. ಅದು ಸಾಧ್ಯವಿಲ್ಲವಾದರೆ, ಅಗತ್ಯವಿರುವಲ್ಲಿ ಮೇಲ್ಸೆತುವೆ ಮಾಡುವ ಬಗ್ಗೆ ಚಿಂತನೆ ನಡೆಸಿದರೆ ಒಳ್ಳೆಯದು. ಒಂದು ವೇಳೆ ಇದೂ ಸಾಧ್ಯವಿಲ್ಲವೆಂದಾದರೆ, ಕೆಲವು ರಸ್ತೆಗಳನ್ನು ಏಕಪಥದ ರಸ್ತೆಗಳಾಗಿ ಪರಿವರ್ತಿಸಬಹುದು.
ವಿಶ್ವನಾಥ್ ಕೋಟೆಕಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು
H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ