ಡಿ. 9- 16 ಟೂರ್‌ ಆಫ್ ನೀಲಗಿರೀಸ್‌: ವಿಶ್ವದ 110 ಮಂದಿ ಭಾಗಿ


Team Udayavani, Dec 7, 2018, 12:17 PM IST

7-december-6.gif

ಮಡಿಕೇರಿ: ರೈಡ್‌ ಎ ಸೈಕಲ್‌ ಪ್ರತಿಷ್ಠಾನದ ವತಿಯಿಂದ ಆಯೋಜಿತ 11ನೇ ಆವೃತ್ತಿಯ ಟೂರ್‌ ಆಫ್ ನೀಲಗಿರೀಸ್‌ ನಲ್ಲಿ ಈ ಬಾರಿ ಸೈಕ್ಲಿಸ್‌ rಗಳು ಕುಶಾಲಗರ ಮೂಲಕ ಕೊಡಗು ಪ್ರವೇಶಿಸಲಿದ್ದು, 950 ಕಿಲೋ ಮೀಟರ್‌ ಗೂ ಅಧಿಕ ದೂರವನ್ನು ತಮ್ಮ ಸೈಕಲ್‌ ಯಾತ್ರೆಯ ಸಂದರ್ಭ ಕ್ರಮಿಸಲಿದ್ದಾರೆ.

ಕರ್ನಾಟಕ, ಕೇರಳ ಹಾಗೂ ತಮಿಳುನಾಡುಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ, ನೀಲಗಿರೀಸ್‌ ಜೀವವೈವಿಧ್ಯತೆಯ ತಾಣಗಳಲ್ಲಿ ಈ ಸೈಕಲ್‌ ಪ್ರಯಾಣ ಸಾಗಲಿದೆ. ವಿಶ್ವದ 110 ಸೈಕಲ್‌ ಸವಾರರು 2018ರ ಟೂರ್‌ ಆಫ್ ನೀಲಗಿರೀಸ್‌ ನ ಪ್ರಯಾಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ 13 ದೇಶಗಳ 29 ಅಂತಾರಾಷ್ಟ್ರೀಯ ರೈಡರ್‌ ಗಳು (23 ಪುರುಷ ಹಾಗೂ 6 ಮಹಿಳೆಯರು) ಹಾಗೂ 17 ಮಹಿಳಾ ರೈಡರ್‌ ಗಳು ಭಾಗವಹಿಸಲಿದ್ದಾರೆ.

ಮೈಸೂರಿನಲ್ಲಿ ಆರಂಭವಾಗಲಿರುವ ಸೈಕಲ್‌ ಯಾತ್ರೆ ಹಾಸನ, ಕುಶಾಲನಗರ, ಸುಲ್ತಾನ್‌ ಬತ್ತೇರಿ, ಊಟಿ , ಕಲ್ಪೆಟ್ಟ ಮಾರ್ಗವಾಗಿ ಸಾಗಿ ಮೈಸೂರಿಗೆ ಮರಳುವುದರೊಂದಿಗೆ ಸಮಾಪನಗೊಳ್ಳಲಿದೆ. ಸೈಕಲಿಂಗ್‌ ನ 4ನೇ ದಿನ ಸುಲ್ತಾನ್‌ ಬತ್ತೇರಿಯಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸೈಕ್ಲಿಸ್ಟ್‌ಗಳು ಕಡಿದಾದ ಕಲ್ಹಟ್ಟಿ ಘಾಟ್‌ ಏರಬೇಕಿರುತ್ತದೆ. ಇದು ವಿಶ್ವದ ಅತ್ಯಂತ ಕಠಿಣ ಸೈಕ್ಲಿಂಗ್‌ ಆರೋಹಣಗಳಲ್ಲಿ ಒಂದಾಗಿದೆ. ಡಿಸೆಂಬರ್‌ 10 ರಂದು ಹಾಸನದಿಂದ ಪ್ರಾರಂಭವಾಗಿ ಸಕಲೇಶಪುರ ಹಾಗೂ ಸೋಮವಾರಪೇಟೆ ಮೂಲಕ 143 ಕಿ.ಮೀ ಕ್ರಮಿಸಿ ಸಂಜೆ 6 ಗಂಟೆಗೆ ಸೈಕಲಿಸ್ಟ್‌ ಗಳು ಕುಶಾಲನಗರ ತಲುಪಲಿದ್ದಾರೆ.

ಡಿಸೆಂಬರ್‌ 11ರಂದು ಬೆಳಗ್ಗೆ ಕುಶಾಲನಗರದಿಂದ ದುಬಾರೆ ಆನೆ ಶಿಬಿರ, ಗೋಣಿಕೊಪ್ಪಲು, ಕುಟ್ಟ ಹಾಗೂ ತೋಲ್ಪಟ್ಟಿ ಅರಣ್ಯ ಮೂಲಕ 145 ಕಿ.ಮೀ ಕ್ರಮಿಸಿ ಸುಲ್ತಾನ್‌ ಬತೇರಿಯನ್ನು ಸೈಕಲ್‌ ಸವಾರರು ತಲುಪಲಿದ್ದಾರೆ.

ಎಂಟು ದಿನಗಳ ಸೈಕ್ಲಿಂಗ್‌ ಪ್ರಯಾಣದಲ್ಲಿ (ಡಿಸೆಂಬರ್‌ 9 ರಿಂದ 16 ) ಸೈಕ್ಲಿಸ್ಟ್‌ ಗಳು ಹಲವಾರು ನೈಸರ್ಗಿಕ ತಾಣಗಳನ್ನು ವೀಕ್ಷಿಸಲಿದ್ದಾರೆ. ಕಡಿದಾದ ಕಣಿವೆಗಳು, ಕಾಫಿ-ಟೀ ಸಸ್ಯರಾಶಿಗಳು, ಮೂರು ವನ್ಯಜೀವಿ ಅಭಯಾರಣ್ಯಗಳು ಹಾಗೂ ಗಿರಿಶಿಖರಗಳನ್ನೂ ಹಾದುಹೋಗಲಿದ್ದಾರೆ .

ಸೈಕಲ್‌ ಮೂಲಕ ಪ್ರಕೃತಿಯ ಅನುಭವ ಪಡೆಯುವ ಅಪೂರ್ವ ಅವಕಾಶವೇ ಟೂರ್‌ ಆಫ್ ನೀಲಗಿರೀಸ್‌ ಆಗಿದ್ದು ಎಂದು ಹೇಳುವ ಈ ಸೈಕಲ್‌ ಯಾತ್ರೆಯ ಆಯೋಜಕ ಸಂಸ್ಥೆಯಾದ ರೈಡ್‌ ಎ ಸೈಕಲ್‌ ಪ್ರತಿಷ್ಠಾ ನದ ಸಹ ಸಂಸ್ಥಾಪಕ ದೀಪಕ್‌ ಮಾಜಿ ಪಾಟೀಲ್‌, ಪ್ರತಿ ಆವೃತ್ತಿಯ ಟಿಎಫ್ಎನ್‌ ಕೂಡ ರೈಡರ್‌ ಗಳ ನೆನಪಿನಲ್ಲಿ ಉಳಿಯುತ್ತದೆ. ಮತ್ತೊಮ್ಮೆ ನಿಸರ್ಗದ ಅನುಭವ ಪಡೆಯುವ ಸಲುವಾಗಿ ಮರಳಿ ಬರುತ್ತಾರೆ ಎಂದು ಹೇಳಿದರು.

ಈ ವರ್ಷ ಉಳಿದೆಲ್ಲಾ ವರ್ಷಗಳ ದಾಖಲೆಯ ಅಂತಾರಾಷ್ಟ್ರೀಯ ರೈಡರ್‌ ಗಳನ್ನು ಟಿಎಫ್ಎನ್‌ ಆಕರ್ಷಿಸುವುದರೊಂದಿಗೆ, ದೇಶ ಹಾಗೂ ವಿದೇಶದಿಂದ 17 ಮಹಿಳಾ ಸೈಕ್ಲಿಸ್ಟ್‌ ಗಳು ಸ್ಪಧಿ9ಸುತ್ತಿದ್ದಾರೆ ಎಂದು ದೀಪಕ್‌ ಮಾಜಿ ಪಾಟೀಲ್‌ ಮಾಹಿತಿ ನೀಡಿದ್ದಾರೆ. ಸಾಮಾನ್ಯ ರೀತಿಯಲ್ಲಿ ಆರಂಭ ಪಡೆದುಕೊಂಡಿದ್ದ ಟಿಎಫ್ಎನ್‌, ಭಾರತದ ಅತಿದೊಡ್ಡ ಹಾಗೂ ಪ್ರೀತಿ ಪಾತ್ರ ಬೈಕ್‌ ಟೂರ್‌ ಎನಿಸಿಕೊಂಡಿದೆ. ಆ ಮೂಲಕ ಸೈಕ್ಲಿಂಗ್‌ ಭೂಪಟದಲ್ಲಿ ಭಾರತದ ಹೆಸರೂ ಕಾಣಿಸಿಕೊಳ್ಳುವಂತೆ ಮಾಡಿದ ಹಿರಿಮೆ ಹೊಂದಿದೆ.

ಸಾಹಸದ ಅನುಭವ ನೀಡುವ ಸೈಕ್ಲಿಂಗ್‌ ಅನ್ನು ವೃತ್ತಿಪರವಾಗಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಉತ್ಸಾಹಿಗಳ ಪಾಲಿಗೆ ಟಿಎಫ್ಎನ್‌ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಆಯ್ಕೆ ಎನಿಸಿಕೊಂಡಿದೆ. ಈ ಬಾರಿಯ ಯಾತ್ರೆಯಲ್ಲಿ ಕಿರಣ್‌ ಕುಮಾರ್‌ ರಾಜು, ಪ್ರಸಕ್ತ ಇಂಡಿಯಾ ಎಂಟಿಬಿ ಚಾಂಪಿಯನ್‌ ಮತ್ತು ನವೀನ್‌ ಜಾನ್‌, ಪ್ರಸಕ್ತ ಇಂಡಿಯಾ ರೋಡ್‌ ಮಾಜಿ ಚಾಂಪಿಯನ್‌ ಸೇರಿದಂತೆ ಪ್ರಸಿದ್ಧ ಸೈಕ್ಲಿಸ್ಟ್‌ ಗಳು ಟಿಎಫ್ಎನ್‌ 2018ರಲ್ಲಿ ಪೆಡಲ್‌ ಮಾಡಲಿದ್ದಾರೆ.

1984ರ ಒಲಿಂಪಿಕ್‌ ಸೈಕ್ಲಿಂಗ್‌ ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದ ಅಲೆಕ್ಸಿಗ್ರೇವಲ್‌ – ಟಿಎಫ್ಎನ್‌ 2017ರಲ್ಲಿ ಪೆಡಲ್‌ ಮಾಡಿದ್ದ ಅಲೆಕ್ಸಿಗ್ರೇವಲ್‌ ಈ ಆವೃತ್ತಿಯಲ್ಲಿ ಸ್ವಯಂ ಸೇವಕರಾಗಿದ್ದು , ಮಹತ್ತರ ಗುರಿಯೊಂದಿಗೆ ಭಾಗವಹಿಸುತ್ತಿರುವ ಯುವ ಪ್ರತಿಭಾನ್ವಿತ ಸವಾರರಿಗೆ ಸಲಹೆಗಾರರಾಗಲಿರುವುದು ವಿಶೇಷ ಎಂದು ರೈಡ್‌ ಎ ಸೈಕಲ್‌ ಪ್ರತಿಷ್ಠಾನದ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ. 

ಭಾರತೀಯ ಸೈಕ್ಲಿಸ್ಟ್‌ ಗಳು ಮಾತ್ರವಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಸೈಕ್ಲಿಸ್ಟ್‌ ಗಳು ಈ ಪ್ರಯಾಣದಲ್ಲಿ ಪಾಲ್ಗೊಳ್ಳಲೆಂದೇ ಭಾರತಕ್ಕೆ ಆಗಮಿಸುತ್ತಿದ್ದಾರೆ. ಡೆನ್ಮಾರ್ಕ್‌ನಿಂದ 7 ಸೈಕ್ಲಿಸ್ಟ್‌ ಗಳು, ಅಮೆರಿಕದಿಂದ 4, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಇಂಗ್ಲೆಂಡ್‌ ನಿಂದ ತಲಾ ಮೂರು, ಬೆಲ್ಜಿಯಂ ಮತ್ತು ಕೆನಡಾದಿಂದ ತಲಾ 2, ಆಸ್ಟ್ರಿಯಾ, ಗ್ರೀಸ್‌, ಮಲೇಷ್ಯಾ, ಫಿಲಿಫೈನ್ಸ್‌ ಮತ್ತು ಪೋಲೆಂಡ್ನಿಂದ ತಲಾ ಒಬ್ಬ ಸೈಕ್ಲಿಸ್ಟ್‌ ಗಳು ಈ ಬಾರಿ ಪಾಲ್ಗೊಳ್ಳಲಿದ್ದಾರೆ. 

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Madikeri ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Somwarpet ಮರ ಬಿದ್ದು ಕಾರ್ಮಿಕ ಸಾವು

Somwarpet ಮರ ಬಿದ್ದು ಕಾರ್ಮಿಕ ಸಾವು

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

Madikeri ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

Sea ಹಠಾತ್‌ ಉಬ್ಬರ ಸಾಧ್ಯತೆ: ರೆಡ್‌ ಅಲರ್ಟ್‌ ಘೋಷಣೆ

Sea ಹಠಾತ್‌ ಉಬ್ಬರ ಸಾಧ್ಯತೆ: ರೆಡ್‌ ಅಲರ್ಟ್‌ ಘೋಷಣೆ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.