ದಂಗಾದ ಪ್ರೇಕ್ಷಕರು!


Team Udayavani, Dec 15, 2018, 11:36 AM IST

rangadha-hudugaru.jpg

ಮೊದಲಿಗೆ ಒಂದು ಸ್ಪಷ್ಟನೆ - ಈ ಚಿತ್ರದ ಶೀರ್ಷಿಕೆಗೂ ಕಥೆಗೂ ಯಾವುದೇ ಸಂಬಂಧವಿಲ್ಲ. ಹಾಗಂತ, ಸಂಬಂಧವಿರಬೇಕು ಅಂತಾನೂ ಇಲ್ಲ. ಹಾಗಾಗಿಯೇ ಕಥೆಯೇ ಇರದ ಚಿತ್ರಕ್ಕೊಂದಷ್ಟು ಹಳೆಯ ಸಿನಿಮಾಗಳ ದೃಶ್ಯಗಳನ್ನು ನೆನಪಿಸುವಂತಹ ದೃಶ್ಯಗಳನ್ನೇ ಇಲ್ಲಿ ಪೋಣಿಸಿ, ಅಲ್ಲಲ್ಲಿ ಅಪಹಾಸ್ಯ ಎನಿಸುವ ಹಾಸ್ಯದೊಂದಿಗೆ ಮೂವರು ಹುಡುಗರ ಒದ್ದಾಟ, ಪೀಕಲಾಟಗಳನ್ನು ತೋರಿಸುವ ಮೂಲಕ ನೋಡುಗರ ತಾಳ್ಮೆಯನ್ನು ಪರೀಕ್ಷಿಸಲಾಗಿದೆ.

ನಿರ್ದೇಶಕರ ಕಥೆಯಲ್ಲಿ ಗಟ್ಟಿತನವಿಲ್ಲ. ಚಿತ್ರಕಥೆಯಲ್ಲಿ ಯಾವುದೇ ಚುರುಕುತನವೂ ಇಲ್ಲ. ಅಷ್ಟೇ ಅಲ್ಲ, ಒಂದೊಳ್ಳೆಯ ಕಥೆ ಕಟ್ಟಿಕೊಡುವ ಸಾಧ್ಯತೆ ಕೈ ಚೆಲ್ಲುವ ಮೂಲಕ ಹುಡುಗರು ರಂಗಾಗುವುದನ್ನು ತಪ್ಪಿಸಿದ್ದಾರೆ. ಸಿನಿಮಾ ಅಂದರೆ, ಕಚಗುಳಿ ಇಡುವಂತಹ ಮಾತುಗಳಿರಬೇಕು ನಿಜ. ಆದರೆ, ಇಲ್ಲಿ ಡಬ್ಬಲ್‌ ಮೀನಿಂಗ್‌ ಮಾತುಗಳಿಗೇ ಹೆಚ್ಚು ಆದ್ಯತೆ ಕೊಡಲಾಗಿದೆ. ಅಂತಹ ಮಾತುಗಳು ನಾಯಕರಷ್ಟೇ ಅಲ್ಲ, ನಾಯಕಿಯರಿಂದಲೂ ಹೇಳಿಸಿರುವುದು ನಿರ್ದೇಶಕರ ಸಾಧನೆ ಎನ್ನಬಹುದು.

ಅಸಲಿಗೆ, ಇಲ್ಲಿ ಕಥೆ ಎತ್ತ ಸಾಗುತ್ತದೆಂದು ತಿಳಿದುಕೊಳ್ಳುವುದಕ್ಕೆ ಕೊನೆಯ ಇಪ್ಪತ್ತು ನಿಮಿಷಗಳವರೆಗೆ ಕಾಯಲೇಬೇಕು. ಆರಂಭದಲ್ಲೊಂದು ಹಾಡು, ಒಂದಷ್ಟು ದೃಶ್ಯಗಳಲ್ಲೇ ಮಧ್ಯಂತರ ಮುಗಿದು ಹೋಗುತ್ತದೆ. ಅದಕ್ಕೂ ಮುನ್ನ ಸಣ್ಣದ್ದೊಂದು ಟ್ವಿಸ್ಟ್‌ ಕೊಟ್ಟು ಟೆಸ್ಟ್‌ ಇಡುವ ಹೊತ್ತಿಗೆ ಅರ್ಧ ಚಿತ್ರ ಮುಗಿದಿರುತ್ತೆ. ನಿರ್ದೇಶಕರು ಇನ್ನೊಂದಷ್ಟು ಜಾಣತನ ಪ್ರದರ್ಶಿಸಿದ್ದರೆ, ಇದೊಂದು ಒಳ್ಳೆಯ ಸಿನಿಮಾ ಆಗುತ್ತಿತ್ತೇನೋ?

ಆದರೆ, ಅಂತಹ ಒಳ್ಳೆಯ ಕೆಲಸಕ್ಕೆ ಮುಂದಾಗಿಲ್ಲ. ಒಂದೇ ಒಂದು ಅಂಶಕ್ಕಾಗಿ ಇಡೀ ಚಿತ್ರದುದ್ದಕ್ಕೂ ತಾಳ್ಮೆಗೆಡಿಸುವ ದೃಶ್ಯಗಳನ್ನೇ ತೋರಿಸಿ, ನೋಡುಗರನ್ನು ದಂಗುಬಡಿಸಿರುವುದೇ ಹೆಚ್ಚುಗಾರಿಕೆ. ಸಿನಿಮಾವನ್ನ ಸೂಕ್ಷ್ಮವಾಗಿ ಗಮನಿಸಿದರೆ, ಸಾಕಷ್ಟು ತಪ್ಪುಗಳು ಕಾಣಸಿಗುತ್ತವೆ. ಹೊಸಬರು ಎಂಬ ಕಾರಣಕ್ಕೆ ಅವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡಬಹುದಾದರೂ, ಅಷ್ಟೇನೂ “ರಂಗು’ ತುಂಬುವುದಿಲ್ಲ.

ಒಂದು ಸಣ್ಣ ಘಟನೆ ಇಟ್ಟುಕೊಂಡು, ಪದೇ ಪದೇ ಹುಡುಗಿಯೊಬ್ಬಳ ಹಿಂದೆ ಬೀಳುವ ಹುಡುಗರು, ಆಕೆಯನ್ನು ರೇಗಿಸುವ, ಪೀಡಿಸುವ ದೃಶ್ಯಗಳಿಗೆ ಹೆಚ್ಚು ಒತ್ತು ಕೊಡುವ ಬದಲು, ಟೆರರಿಸ್ಟ್‌ ಕಥೆಯನ್ನು ಇನ್ನಷ್ಟು ಬೆಳೆಸಿದ್ದರೆ, ಸಿನಿಮಾ ಗಂಭೀರವಾಗಿರುತ್ತಿತ್ತು. ಶೀರ್ಷಿಕೆಯಂತೆ ರಂಗಾಗಿಯೂ ಇರುತ್ತಿತ್ತು. ಕಥೆಯಲ್ಲಿ ಸಣ್ಣ ಎಳೆ ಚೆನ್ನಾಗಿದೆ. ಆದರೆ, ಅದನ್ನು ಸರಿಯಾಗಿ ಹೆಣೆಯುವಲ್ಲಿ ಸಂಪೂರ್ಣ ವಿಫ‌ಲ ಅಂದರೆ ನಿರ್ದೇಶಕರು ತಪ್ಪು ಭಾವಿಸಬಾರದು.

ವಿನಾಕಾರಣ ಹಾಸ್ಯ ತುರುಕಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇನ್ನು, ಅದೆಷ್ಟೋ ಚಿತ್ರಗಳಲ್ಲಿ ಬಂದುಹೋಗಿರುವ ದೃಶ್ಯಗಳು ಇಲ್ಲಿ ನೆನಪಾದರೆ ಅಚ್ಚರಿಯೂ ಇಲ್ಲ. ಒಂದು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಎಷ್ಟು ಮುಖ್ಯವೋ, ಅದಕ್ಕೆ ಪೂರಕವಾಗಿರುವಂತಹ ಹಿನ್ನೆಲೆ ಸಂಗೀತವೂ ಅಷ್ಟೇ ಮುಖ್ಯವಾಗುತ್ತೆ. ಆದರೆ, ಇಲ್ಲಿ ಅದನ್ನು ನಿರೀಕ್ಷಿಸುವಂತಿಲ್ಲ. ಕಥೆ ಬಗ್ಗೆ ಹೇಳುವುದಾದರೆ, ಎಂಜಿನಿಯರಿಂಗ್‌ ಓದಿರುವ ಮೂವರು ಹುಡುಗರು ಲೈಫ‌ಲ್ಲಿ ಎಂಜಾಯ್‌ ಮಾಡಿದ ಬಳಿಕ ಒಂದೊಳ್ಳೆಯ ಕೆಲಸ ಹಿಡಿಯಬೇಕು ಅನ್ನೋ ಜಾಯಮಾನದವರು.

ಅವರ ಲೈಫ‌ಲ್ಲಿ ಆಕಸ್ಮಿಕವಾಗಿ ಹುಡುಗಿಯರು ಎಂಟ್ರಿಯಾಗುತ್ತಾರೆ. ಕ್ಷುಲ್ಲಕ ಕಾರಣವೊಂದು ಅವರ ನಡುವೆ ಜಗಳ ಉಂಟಾಗಿ, ಅದು ಪ್ರೀತಿಗೂ ತಿರುಗುತ್ತದೆ. ಆ ಹುಡುಗರು ತಮಗೇ ಗೊತ್ತಿಲ್ಲದಂತೆ ಟೆರರಿಸ್ಟ್‌ಗೆ ಸಹಾಯ ಮಾಡುವ ಮೂಲಕ, ಮುಗ್ಧ ಮಕ್ಕಳ ಸಾವಿಗೆ ಕಾರಣರಾಗುತ್ತಾರೆ. ತಮ್ಮ ತಪ್ಪಿನ ಅರಿವಾಗಿ, ಟೆರರಿಸ್ಟ್‌ ವಿರುದ್ಧ ಹೋರಾಡಲು ಟೊಂಕ ಕಟ್ಟಿ ನಿಲ್ಲುತ್ತಾರೆ. ಮುಂದೆ ಏನಾಗುತ್ತೆ ಅನ್ನೋದು ಕಥೆ.

ಇಲ್ಲಿ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿವೆ. ಸಾಗರ್‌, ಪ್ರಖ್ಯಾತ್‌, ಶ್ಯಾಮ್‌ ಪೊನ್ನಪ್ಪ ಡ್ಯಾನ್ಸ್‌, ಫೈಟ್‌ನಲ್ಲಿ ಗಮನಸೆಳೆಯುತ್ತಾರೆ. ನಟನೆಯಲ್ಲಿ ಇನ್ನಷ್ಟು ಪಳಗಬೇಕಿದೆ. ಅಮಿತ, ಸಹನಾ ಅವರು ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಶೋಭರಾಜ್‌, ಗಿರಿ ಮತ್ತಿತರರು ಸಿಕ್ಕ ಪಾತ್ರವನ್ನು ತೂಗಿಸಿಕೊಂಡು ಹೋಗಿದ್ದಾರೆ. ಸೇನಾಪತಿ ಸಂಗೀತದಲ್ಲಿ ಯಾವ ಹಾಡು ನೆನಪಲ್ಲುಳಿಯಲ್ಲ. ಸಿನಿಟೆಕ್‌ ಸೂರಿ ಛಾಯಾಗ್ರಹಣ ರಂಗಾಗಿದೆ.

ಚಿತ್ರ: ರಂಗಾದ ಹುಡುಗರು
ನಿರ್ಮಾಣ: ಸುಮಾ ಬಸವರಾಜ್‌, ಬಸವರಾಜ್‌ ಟಿ.ಎಂ.
ನಿರ್ದೇಶನ: ತೇಜೇಶ್‌ಕುಮಾರ್‌
ತಾರಾಗಣ: ಸಾಗರ್‌, ಪ್ರಖ್ಯಾತ್‌, ಶ್ಯಾಮ್‌ ಪೊನ್ನಪ್ಪ, ಅಮಿತ, ಸಹನಾ ಪೊನ್ನಮ್ಮ, ಜ್ಯೋತಿ, ಮನುಹೆಗಡೆ, ಶೋಭರಾಜ್‌, ಭರತ್‌, ಗಿರಿ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.