ವೀಸಾ-ಬಾಲಾಜಿ


Team Udayavani, Dec 23, 2018, 6:00 AM IST

2.jpg

ಇಲ್ಲಿ ಪ್ರಾರ್ಥನೆಗೈದು ಅಮೆರಿಕ ವೀಸಾಕ್ಕೆ ಅನುಮತಿ ಕೋರಿದವರ ಇಷ್ಟಾರ್ಥ ಸಿದ್ಧಿಯಾಗತೊಡಗಿದಾಗ ಚಿಲ್ಕೂರಿನ ಬಾಲಾಜಿಯ ಹೆಸರು ಪ್ರಸಿದ್ಧವಾಯಿತು. 

ವೀಸಾಕ್ಕೂ ಬಾಲಾಜಿ ದೇವರಿಗೂ ಏನು ಸಂಬಂಧ? ಕಲ್ಪನೆಗೂ ಬಾರದ ಈ ವಿಷಯ ಹೈದರಾಬಾದ್‌ನಲ್ಲಿ ತಿಳಿಯಿತು. ಹೈದರಾಬಾದ್‌ನಿಂದ 30 ಕಿ. ಮೀ. ದೂರದಲ್ಲಿರುವ ಚಿಲ್ಕೂರು ಎಂಬಲ್ಲಿರುವ ಬಾಲಾಜಿ ವೆಂಕಟರಮಣ ದೇವಸ್ಥಾನ 500 ವರ್ಷಕ್ಕೂ ಹಳೆಯದು. ಓಸ್ಮಾನ್‌ ಸಾಗರ ಕೆರೆಯ ದಂಡೆಯಲ್ಲಿರುವ, ಭಕ್ತ ರಾಮದಾಸನ ಪೂರ್ವಜರಾದ ಮಾದಣ್ಣ ಮತ್ತು ಅಕ್ಕಣ್ಣನ ಕಾಲದಲ್ಲಿ ನಿರ್ಮಿತವಾದ ಈ ದೇಗುಲ ಬಹಳ ಚಿಕ್ಕದಾದರೂ ಪ್ರಸಿದ್ಧವಾದದ್ದು. ಭಕ್ತರು ಪ್ರಾರ್ಥನೆ ಸಲ್ಲಿಸಿ ಕೇಳಿಕೊಂಡದ್ದನ್ನು ಉದಾರವಾಗಿ ; ಅದರಲ್ಲೂ ಹೊರದೇಶಗಳಿಗೆ ಉದ್ಯೋಗಕ್ಕಾಗಲಿ, ವಿದ್ಯಾರ್ಜನೆಗಾಗಲಿ ತೆರಳುವಾಗ ಅವಶ್ಯವಾಗಿ ಬೇಕಾದ ವೀಸಾವನ್ನು ದೊರಕಿಸಿಕೊಡುವನೆಂದು ಪ್ರಸಿದ್ಧನಾಗಿದ್ದಾನೆ ಈ ಪುಟ್ಟ ಬಾಲಾಜಿ. ಹಾಗಾಗಿಯೇ ಅನ್ವರ್ಥನಾಮ ವೀಸಾ ಬಾಲಾಜಿಯೆಂದು!

ಪ್ರತಿವರ್ಷವೂ ತಿರುಪತಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತನೊಬ್ಬ ವಯಸ್ಸಾದಂತೆ ಪ್ರಯಾಣಿಸಲು ಅಸಮರ್ಥನಾದ. ಆಗ ಬಾಲಾಜಿ ಅವನ ಕನಸಿನಲ್ಲಿ ಬಂದು ಚಿಲ್ಕೂರಿನಲ್ಲಿ ಒಂದು ಕಡೆ ಅಗೆದು ನೋಡಿದರೆ ತಾನು ದರ್ಶನವೀಯು ವೆನೆಂದು ಹೇಳಿದನಂತೆ. ಅದರ ಪ್ರಕಾರ ಉತನನ ನಡೆಸಿದಾಗ ಭೂಮಿಯೊಳಗೆ ಸಿಕ್ಕ ಬಾಲಾಜಿಯ ಚಿಕ್ಕ ವಿಗ್ರಹವನ್ನು ಪ್ರತಿಷ್ಠಾಪನೆಗೈದು ಅಲ್ಲೇ ಬಾಲಾಜಿಯ ಪೂಜಾ ಕೈಂಕರ್ಯಗಳನ್ನು ನಡೆಸತೊಡಗಿದನಂತೆ!

ಒಂದು ಹಂತದಲ್ಲಿ ಇಲ್ಲಿ ಪ್ರಾರ್ಥನೆಗೈದು ಅಮೆರಿಕಾ ವೀಸಾಕ್ಕೆ ಅನುಮತಿ ಕೋರಿದವರ ಇಷ್ಟಾರ್ಥ ಸಿದ್ಧಿಯಾಗತೊಡಗಿದಾಗ ಚಿಲ್ಕೂರಿನ ಬಾಲಾಜಿಯ ಹೆಸರು ಪ್ರಸಿದ್ಧವಾಯಿತು. ಮೊದಲಿಗೆ ದೇವಸ್ಥಾನವನ್ನು ಪ್ರವೇಶಿಸಿ ಪೂಜೆಪುನಸ್ಕಾರಗಳನ್ನು ಕೈಗೊಂಡು ಹನ್ನೊಂದು ಪ್ರದಕ್ಷಿಣೆಗಳನ್ನು ಹಾಕಿ ತಮ್ಮ ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥಿಸಿಕೊಳ್ಳುತ್ತಾರೆ. ತಮ್ಮ ಅಭೀಷ್ಟ ನೆರವೇರಿದ ನಂತರ ದೇವರಿಗೆ ನೂರ ಎಂಟು ಪ್ರದಕ್ಷಿಣೆಗಳನ್ನು ಹಾಕಿ ಹರಕೆ ತೀರಿಸುತ್ತಾರೆ. ನೂರ ಎಂಟು ಪ್ರದಕ್ಷಿಣೆಗಳ ಲೆಕ್ಕವಿಡಲು ಕಾಗದದ ಕೋಷ್ಟಕ ಹಾಗೂ ಪೆನ್ಸಿಲುಗಳು ದೇವಸ್ಥಾನದ ಪ್ರವೇಶದ್ವಾರದ ಹೊರಗೆ ಹೂವು, ಹಣ್ಣು, ತೆಂಗಿನಕಾಯಿಗಳ ಜೊತೆಗೆ ಮಾರಾಟಕ್ಕಿವೆ. ಬೆಳಿಗ್ಗೆ 6ರಿಂದ ಸಾಯಂಕಾಲ 8 ಗಂಟೆಯವರೆಗೆ ತೆರೆದಿರುವ ಈ ದೇವಸ್ಥಾನದಲ್ಲಿ ದಿನದ ಯಾವ ಹೊತ್ತಿಗೆ ಭೇಟಿ ಇತ್ತರೂ ತಂಡೋಪತಂಡವಾಗಿ  ಗೋವಿಂದಾ, ಗೋವಿಂದಾ ಎಂದು ಉದ್ಘೋಷಿಸುತ್ತ ಪ್ರದಕ್ಷಿಣೆ ಹಾಕುತ್ತಿರುವ 25-30ವಯಸ್ಸಿನ ತರುಣ ತರುಣಿಯರು ತಮ್ಮ ಹೆತ್ತವರ ಜೊತೆ ಕಾಣಸಿಗುತ್ತಾರೆ. ಧ್ವನಿವರ್ಧಕದಲ್ಲಿ ಅವ್ಯಾಹತವಾಗಿ ಕೇಳಿಸುವ ಧಾರ್ಮಿಕ ಪ್ರವಚನಗಳು ಇಡೀ ವಾತಾವರಣವನ್ನು ಭಕ್ತಿಮಯವಾಗಿಸುತ್ತದೆ. “ವಾಕ್‌’ ಎಂಬ ಧಾರ್ಮಿಕ ಪ್ರಕಟಣೆಯೂ ತೀರ್ಥ- ಪ್ರಸಾದಗಳ ಜೊತೆ ವಿತರಣೆಯಾಗುತ್ತದೆ.

ಈ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಇಲ್ಲ. ಏನಾದರೂ ಆರ್ಥಿಕ ಕೊಡುಗೆ ನೀಡುವುದಿದ್ದರೆ ನೇರವಾಗಿ ಬ್ಯಾಂಕಿನ ಖಾತೆಗೆ ವರ್ಗಾವಣೆ ಮಾಡಬಹುದು. ಬ್ಯಾಂಕಿನ ವಿವರಗಳು ಲಭ್ಯವಿವೆ. ಪ್ರಸಿದ್ಧರಿಗಾಗಿ ಪ್ರತ್ಯೇಕ ದರ್ಶನದ ವ್ಯವಸ್ಥೆ ಇಲ್ಲ. ಎಲ್ಲರೂ ಒಂದೇ ಸಾಲಿನಲ್ಲಿ ಒಳಗೆ ಪ್ರವೇಶಿಸಬೇಕು. ಈ ದೇವಸ್ಥಾನವು ಸರ್ಕಾರದ ಅಧೀನಕ್ಕೆ ಒಳಪಟ್ಟಿಲ್ಲ. ಈ ವಿಷಯಗಳಲ್ಲಿ ಚಿಲ್ಕೂರು ಬಾಲಾಜಿ ದೇವಸ್ಥಾನ ಪ್ರಸಿದ್ಧವಾಗಿರುವ ಬೇರೆ ದೇವಸ್ಥಾನಗಳಿಗಿಂತ ವಿಭಿನ್ನ. ವಿನ್ಯಾಸದಲ್ಲಿ ಅತೀ ಸಾಧಾರಣವಾಗಿದೆ. ಪುರಾತನ ದೇವಸ್ಥಾನಗಳಲ್ಲಿ ಕಾಣುವ ಶಿಲ್ಪಕಲೆಗಳೊಂದೂ ಕಾಣಿಸುವುದಿಲ್ಲ. ಜನರು ತಮ್ಮ ಆಸೆ-ಅಪೇಕ್ಷೆಗಳಿಗನುಗುಣವಾಗಿ ದೇವರನ್ನು ಎಷ್ಟೊಂದು ಗಾಢವಾಗಿ ನಂಬುತ್ತಾರೆಂಬುದನ್ನು ಅರಿಯಲು ಇಲ್ಲಿಗೆ ಒಮ್ಮೆ ಭೇಟಿ ಇತ್ತರೆ ತಿಳಿಯುತ್ತದೆ.

ಉಮಾಮಹೇಶ್ವರಿ ಎನ್‌.

ಟಾಪ್ ನ್ಯೂಸ್

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

1-wewwqewq

Bantwal: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ್ಯು

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.