ಟ್ರಾಫಿಕ್‌ ಜಂಜಾಟ ಕಡಿಮೆಯಾಗುವ ಆಶಯ


Team Udayavani, Dec 30, 2018, 5:35 AM IST

30-december-5.jpg

ವಿಟ್ಲ : ವಿಟ್ಲ ಪೇಟೆಯಿಂದ ಬೈಪಾಸ್‌ ರಸ್ತೆ ನಿರ್ಮಾಣವಾಗಿದ್ದು, ಟ್ರಾಫಿಕ್‌ ಜಂಜಾಟದ ಒಂದು ಅಂಶ ಕಡಿಮೆಯಾಗುವ ಭರವಸೆ ಹುಟ್ಟಿಸಿದೆ. ಕಳೆದ ಅನೇಕ ವರ್ಷಗಳ ಹೋರಾಟದ ಫಲವಾಗಿ ಪೇಟೆಯ ನಾಲ್ಕೂ ರಸ್ತೆಗಳ ವಿಸ್ತರಣೆಯ ಬಳಿಕ ವಾಹನ ಜಂಜಾಟ ಕಡಿಮೆಯಾಗಿದೆ. ಆದರೂ ಬೆಳಗ್ಗೆ ಮತ್ತು ಸಂಜೆ ಒತ್ತಡ ತಲೆದೋರುತ್ತಿದೆ. ಆಗಾಗ ರಸ್ತೆ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ವಾಹನ ಜಂಜಾಟವನ್ನು ಹೋಗಲಾಡಿಸಲು ಬೈಪಾಸ್‌ ರಸ್ತೆಯೂ ಅವಶ್ಯವೆಂದು ಮನಗಾಣಲಾಗಿತ್ತು. ಈ ನಡುವೆ ಪ.ಪಂ. ವತಿಯಿಂದ ನಗರೋತ್ಥಾನ ಅನುದಾನ ದಲ್ಲಿ ಒಂದು ರಸ್ತೆಯನ್ನು ಬೈಪಾಸ್‌ ರಸ್ತೆಯಾಗಿಸಿದೆ.

ಎಲ್ಲಿಂದ ಎಲ್ಲಿಗೆ?
ವಿಟ್ಲ ಜಂಕ್ಷನ್‌ನಿಂದ ಪುತ್ತೂರು ತೆರಳುವ ರಸ್ತೆಯ ಅಡ್ಡದಬೀದಿಯಲ್ಲಿ ಬಲಕ್ಕೆ ತಿರುಗಬೇಕು. ಅದಕ್ಕೆ ಅಡ್ಡದಬೀದಿ ರಸ್ತೆಯೆಂದೇ ಹೆಸರಿಸಲಾಗಿದೆ. ಅಡ್ಡದ ಬೀದಿ ರಸ್ತೆಯ ಕೊನೆಯಲ್ಲಿ ಬೃಹತ್‌ ಚರಂಡಿ ಸಾಗುತ್ತಿದೆ. ಮತ್ತು ಅಲ್ಲಿ ಅರಮನೆ ಕುಟುಂಬದ ಭೂಮಿಯಲ್ಲಿ ಕಾಲುದಾರಿ ಅರಮನೆ ರಸ್ತೆಯನ್ನು ಸಂಪರ್ಕಿಸುತ್ತಿತ್ತು. ಇದೀಗ ಚರಂಡಿಗೆ ಸೇತುವೆ ನಿರ್ಮಿಸಿ, ಕಾಲುದಾರಿಯನ್ನು ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಈ ಬೈಪಾಸ್‌ ರಸ್ತೆಯು ವಿಟ್ಲ ಜಂಕ್ಷನ್‌ನಿಂದ ಕಾಸರಗೋಡು ತೆರಳುವ ರಸ್ತೆಯನ್ನು ಎಂ.ಆರ್‌. ನಾಯಕ್‌ ಪೆಟ್ರೋಲ್‌ ಪಂಪ್‌ ಬಳಿ ಸೇರುತ್ತದೆ.

ಈ ರಸ್ತೆಗೆ ಒಟ್ಟು 25 ಲಕ್ಷ ರೂ. ಅನುದಾನ ಖರ್ಚಾಗಿದೆ. ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಮತ್ತು ಪ.ಪಂ. ಅಧ್ಯಕ್ಷ ಅರುಣ್‌ ಎಂ. ವಿಟ್ಲ ಅವರು ಚರ್ಚಿಸಿ, ನಿಗದಿಪಡಿಸಿದ ನಗರೋತ್ಥಾನ ಅನುದಾನ 20 ಲಕ್ಷ ರೂ. ಮತ್ತು 9 ಲಕ್ಷ ರೂ. ವೆಚ್ಚದ ಅನುದಾನ ಸೇತುವೆಗೆ ಬಳಸಲಾಗಿದೆ. ಅಡ್ಡದಬೀದಿ ರಸ್ತೆಯ ಒಂದು ಭಾಗ ಚರಂಡಿ ನಿರ್ಮಿಸಲಾಗಿದ್ದು, ಅದಕ್ಕೆ ಪ.ಪಂ. ಅನುದಾನ 5 ಲಕ್ಷ ರೂ. ಬಳಸಲಾಗಿದೆ.

ಸಂಚಾರ ಹೇಗೆ?
ಇದು ಸದ್ಯಕ್ಕೆ ಏಕಮುಖ ರಸ್ತೆಯೆನ್ನಬಹುದು. ಅಡ್ಡದಬೀದಿಯ ಚರಂಡಿಗೆ ಸ್ಲ್ಯಾಬ್‌ ಮುಚ್ಚುಗಡೆಯ ಬಳಿಕ ದ್ವಿಮುಖ ರಸ್ತೆಯನ್ನಾಗಿಸಬಹುದಾಗಿದೆ. ಆದರೆ ಲಾರಿ, ಬಸ್‌ ಅಥವಾ ಘನವಾಹನಗಳ ಸಂಚಾರ ಅಸಾಧ್ಯ. ಇಲ್ಲಿ ನಾಲ್ಕು ಚಕ್ರಗಳ ವರೆಗಿನ ವಾಹನ ಸಂಚಾರ ಸುಲಭ ಸಾಧ್ಯವಾಗಬಹುದು. ಆದುದರಿಂದ ಲಘು ವಾಹನಗಳನ್ನು ಗಮನದಲ್ಲಿಟ್ಟು ಸೂಕ್ತ ನಿಯಮ ಜಾರಿಗೆ ತಂದಲ್ಲಿ ದ್ವಿಮುಖ ರಸ್ತೆಯನ್ನಾಗಿಸಬಹುದು ಮತ್ತು ಪೇಟೆಯಲ್ಲಿ ವಾಹನ ಜಂಜಾಟ ಕಡಿಮೆಯಾಗಿ ಉಪಯುಕ್ತವೆನಿಸಬಹುದು. ಆದರೆ ಅಡ್ಡದಬೀದಿಯಲ್ಲಿ ರಿಕ್ಷಾ ನಿಲ್ದಾಣಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಾಗುತ್ತದೆ.

ಟಾಪ್ ನ್ಯೂಸ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.