ಕಲರ್‌ ಕಲರ್‌ ಯಾವ ಕಲರ್‌


Team Udayavani, Jan 3, 2019, 12:30 AM IST

x-36.jpg

ನದಿಯ ಬಣ್ಣ ಯಾವುದು ಎನ್ನುವ ಪ್ರಶ್ನೆಗೆ ನೀಲಿ, ಹಸಿರು, ಕೆಂಪು ಎಂಬೆಲ್ಲಾ ಉತ್ತರಗಳು ದೊರೆಯಬಹುದು. ಒಂದೊಂದು ಕಡೆ, ಒಂದೊಂದು ಸಮಯದಲ್ಲಿ ನದಿ ಯಾವುದಾದರೊಂದು ಬಣ್ಣವನ್ನು ಹೊಂದಿರುವಂತೆ ತೋರುತ್ತದೆ. ಕೊಲಂಬಿಯಾದಲ್ಲಿರುವ ಈ ನದಿಗೆ ಐದು ಬಣ್ಣಗಳಿವೆ.

ನೀರಿಗೆ ಬಣ್ಣ, ರುಚಿ ಇಲ್ಲ ಎಂದು ನೀವೆಲ್ಲಾ ಶಾಲೆಯಲ್ಲಿ ಓದಿದ್ದೀರಿ. ಆದರೆ ಆ ಮಾತನ್ನು ಪ್ರಶ್ನಿಸುವಂತೆ ಮಾಡುವ ನದಿಯೊಂದು ಕೊಲಂಬಿಯಾದಲ್ಲಿದೆ. ಈ ನದಿಯ ನೀರು, ಒಂದಲ್ಲ, ಎರಡಲ್ಲ, ಐದು ಬಣ್ಣಗಳಿಂದ ಕಂಗೊಳಿಸುತ್ತಿದೆ. ಐದು ಬಣ್ಣಗಳ ನದಿ ಎಂದೂ ಕರೆಯಲ್ಪಡುವ ಈ ನದಿಯ ಹೆಸರು “ಕ್ಯಾನೊ ಕ್ರಿಸ್ಟಲ್‌’ ಅಥವಾ ಸ್ಫಟಿಕದ ಕಾಲುವೆ. ಈ ನದಿ ಕೊಲಂಬಿಯಾದ ಅದ್ಭುತ ತಾಣಗಳಲ್ಲೊಂದು. ಹೆಸರೇ ಸೂಚಿಸುವಂತೆ ಸ್ಫಟಿಕದಂತೆ ಹೊಳೆಯುವ ಶುಭ್ರವಾದ ತಿಳಿನೀರಿನ ಈ ನದಿ, ಸೆರಾನಿಯಾ ಡಿ ಲಾ ಮಕರೆನಾ ಪರ್ವತ ಶ್ರೇಣಿಯಲ್ಲಿ ಹರಿಯುತ್ತದೆ. ಹಳದಿ, ನೀಲಿ, ಹಸಿರು, ಕಪ್ಪು ಮತ್ತು ಕೆಂಪು ಬಣ್ಣಗಳನ್ನು ಮೇಳೈಸಿಕೊಂಡು ಹರಿಯುತ್ತದೆ ಈ ನದಿ. 

ಎಲ್ಲಿಂದ ಬಂದವು 5 ಬಣ್ಣಗಳು?
ಈ ನದಿಯ ಮತ್ತೂಂದು ವೈಶಿಷ್ಟ್ಯವೆಂದರೆ, ಆಗಾಗ ಐದೂ ಬಣ್ಣಗಳು ಸೇರಿ ಕಾಮನಬಿಲ್ಲಿನಂತೆ ಕಾಣಿಸುತ್ತದೆ. ಅಂದ ಹಾಗೆ ನೀರಿಗೆ ಬಣ್ಣ ಇಲ್ಲ ಎನ್ನುವ ಮಾತು ಸತ್ಯ. ಆದರೆ ಈ ನದಿ ವರ್ಣಮಯವಾಗಿ ಕಾಣಿಸುವುದಕ್ಕೆ ಅನೇಕ ಕಾರಣಗಳಿವೆ. ನಿಮ್ಮೂರಿನ ನದಿ ಕೆಲವೊಮ್ಮೆ ಹಸಿರಾಗಿ ಕಂಡರೆ ಕೆಲವೊಮ್ಮೆ ಕೆಂಪಗೆ ಕಾಣುತ್ತದೆ, ಅದು ಬಿಡಿ ಸಾಗರದ ಬಣ್ಣ ನೀಲಿಯಾಗಿ ಕಾಣುತ್ತದೆ, ಇದರ ಅರ್ಥ ನೀರು ವಿವಿಧ ಬಣ್ಣವನ್ನು ಹೊಂದಲು ಅನೇಕ ಕಾರಣಗಳಿರುತ್ತವೆ. ಆಕಾಶ, ಸುತ್ತಮುತ್ತಲ ಪರಿಸರ ನೀರು ಬಣ್ಣ ಹೊಂದಿರುವಂತೆ ಕಾಣಿಸುತ್ತದೆ. ಹಾಗೆಯೇ ಕೊಲಂಬಿಯಾದ “ಕ್ಯಾನೊ ಕ್ರಿಸ್ಟಲ್‌’ ನದಿ ಐದು ಬಣ್ಣಗಳನ್ನು ಹೊಂದಿರುವುದಕ್ಕೆ ಕಾರಣವಿದೆ. ಈ ನದಿಯಲ್ಲಿ ಬೆಳೆಯುವ ಮೆಕೆರೆನಿಯಾ ಕ್ಲಾವಿಗೆರಾ ಎಂಬ ಸಸ್ಯದಿಂದಾಗಿ ನೀರಿನ ಬಣ್ಣ ಕೆಂಪಾಗಿ ಕಾಣಿಸುತ್ತದೆ. ಹಾಗೆಯೇ ನದಿಯಲ್ಲಿರುವ ಕಪ್ಪು ಬಂಡೆಗಳು, ಹಸಿರು ಪಾಚಿ, ನೀಲಿಯಾಗಿ ಕಾಣುವ ನೀರು ಮತ್ತು ಹಳದಿ ಮಣ್ಣು ಈ ನದಿಯನ್ನು ವರ್ಣಮಯವಾಗಿಸಿವೆ. 

ಇಲ್ಲಿ ಮೀನಿಲ್ಲ!
“ಕ್ಯಾನೊ ಕ್ರಿಸ್ಟಲ್‌’ನ ಹರಿವಿನ ವಿಸ್ತಾರ ತುಂಬಾ ದೊಡ್ಡದಿದ್ದು, ಕೆಲವು ಕಡೆ ಜಲಪಾತದಿಂದ ಧುಮ್ಮಿಕ್ಕಿದರೆ, ಇನ್ನೂ ಕೆಲವು ಕಡೆ ಗುಹೆಗಳ ಮೂಲಕ ಹಾದುಹೋಗುತ್ತದೆ. ಅಚ್ಚರಿಯೆಂದರೆ ಈ ನದಿಯಲ್ಲಿ ಮೀನುಗಳಿಲ್ಲ. ಇದು ಈಜುಗಾರರ ಮೆಚ್ಚಿನ ತಾಣವೂ ಇದು. ಜುಲೈ- ನವೆಂಬರ್‌ ತಿಂಗಳು, ಈ ಸ್ಥಳಕ್ಕೆ ಭೇಟಿ ನೀಡಲು ಪ್ರಶಸ್ತವಾದ ಸಮಯ.

ಪುರುಷೋತ್ತಮ್‌

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.