ಊರು ಬಿಟ್ಟ ಕುರೂಪಿ ಬಾತು ಕೋಳಿ 


Team Udayavani, Jan 10, 2019, 12:30 AM IST

s-8.jpg

ಬಾತುಕೋಳಿಯ ಕೋರಿಕೆಯಂತೆ ದೇವರು ಅದರ ಬಣ್ಣ ಬದಲಾಯಿಸಲಿಲ್ಲ. ಇತ್ತ ಬಾತುಕೋಳಿಗೆ ನಿಂದನೆ ತಪ್ಪಲಿಲ್ಲ.
ಒಂದು ದಿನ ಬಾತುಕೋಳಿ ಊರಿಂದ ಓಡಿಹೋಯಿತು. ಆ ಊರಿನ ಸಹವಾಸವೇ ಅದಕ್ಕೆ ಬೇಡವಾಗಿತ್ತು. 

ಒಂದೂರಲ್ಲಿ ಬಾತುಕೋಳಿಯೊಂದು ವಾಸವಿತ್ತು. ಅದರ ಮೈಬಣ್ಣ ಕಪ್ಪಿನಿಂದ ಕೂಡಿತ್ತು. ಅದನ್ನು ಎಲ್ಲರೂ ಅಪಹಾಸ್ಯಗೈಯುತ್ತಿದ್ದರು. ತನ್ನ ಬಣ್ಣ ಚೆನ್ನಾಗಿಲ್ಲವೆಂದು ಬಾತುಕೋಳಿ ನೊಂದುಕೊಂಡಿತ್ತು. ಪ್ರತಿದಿನ ದೇವರಲ್ಲಿ ತನ್ನ ಕಪ್ಪುಬಣ್ಣ ಹೋಗಲಾಡಿಸಿ ಮಿಕ್ಕ ಬಾತುಕೋಳಿಗಳಿಗಿರುವಂತೆ ಬಿಳಿ ಬಣ್ಣವನ್ನು ದಯಪಾಲಿಸುವಂತೆ ಬೇಡಿಕೊಳ್ಳುತ್ತಿತ್ತು. ಅದಕ್ಕೂ ಅಪಹಾಸ್ಯ, ನಿಂದನೆಗೆ ಒಳಗಾಗಿ ಸಾಕು ಸಾಕಾಗಿತ್ತು. ದೇವರು ಬಣ್ಣ ಬದಲಾಯಿಸಲಿಲ್ಲ. ಇತ್ತ ಬಾತುಕೋಳಿಗೆ ನಿಂದನೆ ತಪ್ಪಲಿಲ್ಲ.

ಒಂದು ದಿನ ಬಾತುಕೋಳಿ ಊರಿಂದ ಓಡಿಹೋಯಿತು. ಆ ಊರಿನ ಸಹವಾಸವೇ ಅದಕ್ಕೆ ಬೇಡವಾಗಿತ್ತು. ಕಾಡನ್ನು ದಾಟಿ ಮುನ್ನಡೆದ ಬಾತುಕೋಳಿಗೆ ಒಂದು ಸರೋವರ ಎದುರಾಯಿತು. ಸುಂದರವಾಗಿದ್ದ ಆ ಸರೋವರದ ನೀರು ಶುಭ್ರವಾಗಿತ್ತು. ಸ್ವರ್ಗದಂತಿದ್ದ ಆ ಪ್ರದೇಶದಲ್ಲಿ ನೆಲೆಯೂರಲು ಬಾತುಕೋಳಿ ಮನಸ್ಸು ಮಾಡಿತು. 

ಸ್ವಚ್ಚಂದವಾಗಿ ಈಜಾಡುತ್ತಿದ್ದ ಬಾತುಕೋಳಿಗೆ ಸುತ್ತಲೂ ಯಾವ ಪ್ರಾಣಿ ಪಕ್ಷಿಗಳೂ ಕಾಣಲಿಲ್ಲ. ಯಾರೂ ಇಲ್ಲವೆಂದು ಅದು ಮನಸ್ಸಿನಲ್ಲಿ ಖುಷಿ ಪಟ್ಟಿತು. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಸರೋವರ ಸುತ್ತಮುತ್ತಲೂ ಪ್ರಾಣಿ ಪಕ್ಷಿಗಳು ಕಾಣಿಸಿಕೊಂಡವು. ಹಂಸಗಳು ಸ್ನಾನ ಮಾಡಲು ನೀರಿಗಿಳಿದವು. ಅವೆಲ್ಲವೂ ಸುಂದರವಾಗಿದ್ದವು. ಇದನ್ನು ಕಂಡು ಕರಿ ಬಾತುಕೋಳಿಗೆ ಮತ್ತೆ ಖೇದವಾಯಿತು. ಹಿಂದಿನ ಊರಿನ ಘಟನೆಯೇ ಇಲ್ಲೂ ಮರುಕಳಿಸುವುದೆಂದು ಅಲ್ಲಿಂದ ಜಾಗ ಖಾಲಿ ಮಾಡಲು ನಿರ್ಧರಿಸಿತು. 

ಅಷ್ಟರಲ್ಲಿ ಒಂದು ಅಚ್ಚರಿ ಘಟಿಸಿತು. ಸುಂದರವಾಗಿದ್ದ ಹಂಸಗಳು ಬಾತುಕೋಳಿಯನ್ನು ಸುತ್ತುವರಿದವು. ಅವು ಬಾತುಕೋಳಿಯ ಸೌಂದರ್ಯವನ್ನು ಹೊಗಳತೊಡಗಿದವು. ಬಾತುಕೋಳಿಗೆ ಅಚ್ಚರಿಯೋ ಅಚ್ಚರಿ. ಇಷ್ಟು ದಿನ ತಾನು ಕುರೂಪಿ ಎಂದುಕೊಂಡಿದ್ದ ಬಾತು ಕೋಳಿಯ ಮನೋಭಾವ ಅಂದು ಬದಲಾಯಿತು. ತಾನು ಕುರೂಪಿಯಲ್ಲ ಎನ್ನುವುದು ಅದಕ್ಕೆ ಅರ್ಥವಾಯಿತು. ಜಗತ್ತನ್ನು ನಾವು ಯಾವ ರೀತಿ ನೋಡುತ್ತೇವೆ ಅದೇ ರೀತಿ ಕಾಣಿಸುತ್ತದೆ. ಸುಂದರವೆಂದು ನೋಡಿದರೆ ಜಗತ್ತು ಸುಂದರ, ಕೆಟ್ಟದ್ದೆಂದು ನೋಡಿದರೆ ಜಗತ್ತೂ ಕೆಟ್ಟದಾಗಿ ಕಾಣುವುದು. ಸೌಂದರ್ಯ ನಿಜಕ್ಕೂ ಇರುವುದು ಅಂತರಂಗದಲ್ಲಿ ಎನ್ನುವುದು ತಿಳಿಯಿತು.

 ಪುಷ್ಪಾ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.