ಬ್ರಹ್ಮಾವರ: ಜಿಲ್ಲಾ ದಂತ ವೈದ್ಯರ ಸಮ್ಮೇಳನ
Team Udayavani, Jan 17, 2019, 1:30 AM IST
ಬ್ರಹ್ಮಾವರ: ಇಲ್ಲಿನ ಕೃಷಿ ಕೇಂದ್ರ ಬಳಿ ಇರುವ ಬಿಲ್ಬೋರ್ಡ್ನಲ್ಲಿ ಜಿಲ್ಲಾ ದಂತ ವೈದ್ಯರ ಸಮ್ಮೇಳನ ಉಡುಪಿ ಡೆಂಟೊ ಫೆಸ್ಟ್-19 ಜರಗಿತು. ಜಿಲ್ಲೆಯ ಎಲ್ಲ ತಾಲೂಕಿನಿಂದ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಸದಸ್ಯರು, ಕುಟುಂಬಸ್ಥರು ಪಾಲ್ಗೊಂಡಿದ್ದರು.
ಐಡಿಎ ಜಿಲ್ಲಾ ಶಾಖೆಯ ನೂತನ ಅಧ್ಯಕ್ಷರಾಗಿ ಡಾ| ಮನೋಜ್ ಮ್ಯಾಕ್ಸಿಮ್ ಡಿಲೀಮಾ ಬ್ರಹ್ಮಾವರ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಡಾ| ಸಯ್ಯದ್ ಮಹಮ್ಮದ್ ಪೈಝ್ ಉಡುಪಿ, ಖಜಾಂಚಿ ಡಾ| ಸುಧೀರ್ ರಾವ್ ಮಲ್ಪೆ ಆಯ್ಕೆಯಾ ದರು. ಐಡಿಎ ರಾಜ್ಯ ಅಧ್ಯಕ್ಷ ಡಾ| ಪ್ರಕಾಶ್ ಎಚ್.ಪಿ., ರಾಜ್ಯ ಕಾರ್ಯದರ್ಶಿ ಡಾ| ಶಿವಪ್ರಸಾದ್, ಖಜಾಂಚಿ ಡಾ| ಸುಶಾಂತ್ ಹಾಗೂ ಭಾರತದ ಡೆಂಟಲ್ ಕೌನ್ಸಿಲ್ ಸದಸ್ಯ ಡಾ| ಶಿವಶರಣ್ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಐಡಿಎ ಜಿಲ್ಲಾ ಶಾಖೆಯು ಹಿರಿಯ ನಾಗರಿಕರಿಗೆ ದಂತ ಸಂರಕ್ಷಣೆ ಮಾಹಿತಿ, ತಪಾಸಣೆ, ಚಿಕಿತ್ಸಾ ಪ್ರದರ್ಶನ ವನ್ನು ಅಜ್ಜರಕಾಡು ಪಾರ್ಕ್ ಬಳಿ ಹಮ್ಮಿ ಕೊಂಡಿತು.
ಕಡಿಯಾಳಿ ಶಾಲೆಯಲ್ಲಿ ದಂತ ಮಾಹಿತಿ ಶಿಬಿರ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ, ಹಾಲು ಸೊಸೈಟಿ, ಸಾೖಬ್ರಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲಾ ದೆಡೆ ಬಾಯಿಯ ಕ್ಯಾನ್ಸರ್ ರೋಗದ ಜಾಗೃತಿ
ಕಾರ್ಯಕ್ರಮ ಆಯೋಜಿಸಿತು. ಶಂಕರಪುರ ವಿಶ್ವಾಸದ ಮನೆ, ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಚೇರ್ಕಾಡಿ ಸಮೃದ್ದಿ ಮಹಿಳಾ ಮಂಡಳಿ, ಸುಮೇದ ವಿಶೇಷ ಶಾಲೆ ನೀಲಾವರದಲ್ಲಿ ದಂತ ತಪಾಸಣೆ, ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಡಾ| ವಿಜಯೇಂದ್ರ ರಾವ್ ಉಡುಪಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ
IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್