ಯಳೂರು – ತೊಪು ಶಾಲೆ: ಪಠ್ಯದೊಂದಿಗೆ “ಕೃಷಿ’ ಪಾಠ
Team Udayavani, Jan 22, 2019, 12:50 AM IST
ಹಕ್ಲಾಡಿ: ಶಾಲೆಗಳಲ್ಲಿ ಪಠ್ಯ ಪುಸ್ತಕದಲ್ಲಿನ ವಿಷಯಗಳನ್ನು ಮಕ್ಕಳಿಗೆ ಕಲಿಸುವುದು ಸಾಮಾನ್ಯ. ಆದರೆ ಇಲ್ಲಿ ಹಾಗಲ್ಲ. ಪಠ್ಯದ ಜತೆಗೆ ಕೃಷಿಯ ಕುರಿತಾದಂತೆಯೂ ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತಿದೆ.
ಬೈಂದೂರು ವಲಯದ ಹಕ್ಲಾಡಿ ಗ್ರಾಮದ ಯಳೂರು-ತೊಪುÉವಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಲ್ಲಿ ಎಳವೆಯಲ್ಲೇ ಪ್ರಕೃತಿ ಬಗ್ಗೆ ಪ್ರೀತಿ ಬೆಳೆಯುವಂತೆ ಮಾಡಲಾಗುತ್ತಿದ್ದು ಆ ಮೂಲಕ ಇತರ ಶಾಲೆಗಳಿಗೂ ಮಾದರಿಯಾಗುತ್ತಿದ್ದಾರೆ.
ಸಾವಯವ ಗೊಬ್ಬರದಿಂದ ಪ್ರಕೃತಿಗಾಗುವ ಲಾಭ, ರಾಸಾಯನಿಕ ಗೊಬ್ಬರಗಳಿಂದಾಗುವ ಅಪಾಯ ಸೇರಿದಂತೆ ಇನ್ನೂ ಅನೇಕ ಕೃಷಿ ಸಂಬಂಧಿ ವಿಚಾರಗಳ ಬಗ್ಗೆ ಮಕ್ಕಳಿಗೆ ಜ್ಞಾನ ದೊರೆಯುತ್ತಿದೆ.
ಮಕ್ಕಳಿಂದಲೇ ಕೃಷಿ
ತೆಂಗು, ಬಸಳೆ, ತೊಂಡೆ, ಬೆಂಡೆ, ಬದನೆ, ಪಪ್ಪಾಯಿ, ಕಬ್ಬು, ಅಲಸಂಡೆ, ಪಡುವಲಕಾಯಿ, ಹೀರೆಕಾಯಿ ಇತ್ಯಾದಿ ತರಕಾರಿ ಗಿಡಗಳನ್ನು ನೆಡಲಾಗಿದೆ. ಮಕ್ಕಳೇ ಪ್ರತಿನಿತ್ಯ ನೀರು ಹಾಕಿ ಪೋಷಣೆ ಮಾಡುತ್ತಿದ್ದಾರೆೆ.
ಮಕ್ಕಳಿಗೆ ಔಷಧ ಸಸ್ಯಗಳ ಕುರಿತು ಮಾಹಿತಿ ಇಲ್ಲದಿರುವುದನ್ನು ಮನಗಂಡು, ಅವುಗಳನ್ನೂ ಬೆಳೆಸಲಾಗುತ್ತಿದೆ. ಅಲ್ಲದೆ ಅವುಗಳ ಪ್ರಯೋಜನಗಳೇನು ಎನ್ನುವುದರ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
ಇಲ್ಲಿ ಇಬ್ಬರು ಶಿಕ್ಷಕರಿದ್ದು, ಓರ್ವ ಗೌರವ ಶಿಕ್ಷಕಿಯಿದ್ದಾರೆ. ಅವರು ಮಕ್ಕಳಿಗೆ ಪಾಠದೊಂದಿಗೆ ಕೃಷಿ ಚಟುವಟಿಕೆಯ ಮಹತ್ವ, ಅನಿವಾರ್ಯ ಇತ್ಯಾದಿಗಳ ಕುರಿತು ಮಾರ್ಗದರ್ಶನ ನೀಡುತ್ತಿದ್ದಾರೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಜ್ಯೋತಿ, ಸದಸ್ಯರು ಮತ್ತು ಪೋಷಕರು ಕೈ ತೋಟ ನಿರ್ಮಿಸುವಲ್ಲಿ ಕೈಜೋಡಿಸುತ್ತಿದ್ದಾರೆ.
ಕೃಷಿಯ ಅರಿವು
ಕೇವಲ ವಿದ್ಯೆಯೊಂದಿದ್ದರೆ ಸಾಲದು. ನಮ್ಮ ಸುತ್ತಮುತ್ತ ನಡೆಯುವ ಕೃಷಿ ಚಟುವಟಿಕೆಗಳ ಅರಿವು ಮಕ್ಕಳಿಗೆ
ಇರಬೇಕು ಎನ್ನುವ ನಿಟ್ಟಿನಲ್ಲಿ ಕೃಷಿ ಬಗೆಗಿನ ಕಾಳಜಿ, ಅವುಗಳ ಬಳಕೆ, ಸಾವಯವ ಗೊಬ್ಬರದಿಂದ
ಸಿಗುವ ಲಾಭ, ರಾಸಾಯನಿಕ ಗೊಬ್ಬರದಿಂದ ಆಗುವ ದುಷ್ಪರಿಣಾಮದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗುತ್ತಿದೆ. ಮಕ್ಕಳು ಇದರಲ್ಲಿ ಆಸಕ್ತಿ ವಹಿಸಿ ಪಾಲ್ಗೊಳ್ಳುತ್ತಿದ್ದಾರೆ.
– ಶಶಿಧರ ಶೆಟ್ಟಿ ಸಾಲ್ಗದ್ದೆ, ಮುಖ್ಯ ಶಿಕ್ಷಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!