ಪ್ರಶಂಸೆ ಬೇಕಿಲ್ಲದಷ್ಟು ದೊಡ್ಡ ಸಾಧನೆ
Team Udayavani, Jan 22, 2019, 12:50 AM IST
ಸಿದ್ಧಗಂಗಾ ಕ್ಷೇತ್ರಕ್ಕೆ ನೂರು ಪಾಲು ವೈಭವ ಉಂಟಾಗುವ ಶಕ್ತಿ ಬಂದುದು ಈ ಶ್ರೀ ಶಿವಕುಮಾರ ಸ್ವಾಮೀಜಿಯವರ ಉದಾರ, ವಿಶಾಲ ದೃಷ್ಟಿಯಿಂದ. ಸಾವಿರಾರು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯ, ಭಾವೀ ಜೀವನ ವಿಕಾಸದ ಒಂದು ಬೃಹತ್ ಕ್ಷೇತ್ರವಾದುದು ಇಲ್ಲಿನ ಸ್ವಾಮೀಜಿಯವರ ಅನುಗ್ರಹದಿಂದ.
ನಾಡಿನ ಮೂಲೆ ಮೂಲೆಗಳಿಂದ ಅನಾಥರನ್ನು ಬರಮಾಡಿಕೊಂಡು, ಅವರಿಗೆಲ್ಲ ಅನ್ನದಾನದ ಜತೆಯಲ್ಲಿ ಜ್ಞಾನದ ದಾನವನ್ನೂ ಮಾಡುತ್ತಿರುವ ದೃಶ್ಯವಂತೂ ನನ್ನ ಪಾಲಿಗೆ ಅಸಾಮಾನ್ಯ ನೋಟವೆನಿಸಿದೆ. ಅಸಂಖ್ಯಾತ ಬಡಬಗ್ಗರಿಗೆ ಇಹದ ಆವಶ್ಯಕತೆಗಳನ್ನು ಪೂರೈಸುತ್ತಿರುವುದು ಮಾತ್ರವಲ್ಲ, ಅವರ ಪರವನ್ನು ಸಹ ಈ ನಾಡಿಗೆ ಋಣಿಯನ್ನಾಗಿ ಮಾಡುತ್ತಿರುವ ಕರ್ಮಭೂಮಿ ಇದಾಗಿದೆ. ಈ ಸಂಸ್ಥೆಯು ನಮ್ಮ ನಾಡಿನ ವೀರಶೈವ ಪಂಥಿಯರ ಸಂಸ್ಥೆಯಾದರೂ, ಯಾವೊಂದು ಜಾತಿ, ಮತದ ತಾರತಮ್ಯ ತೋರಿಸದೇ, ವಿದ್ಯಾರ್ಥಿಗಳ ಪೋಷಣೆ, ಶಿಕ್ಷಣ, ಭಾವನೆಗಳನ್ನು ಬೆಳೆಸುತ್ತಾ ಬಂದಿದೆ. ಎಲ್ಲೆಲ್ಲಿ ಸಾರ್ವಜನಿಕ ಸಂಸ್ಥೆಗಳು ಹೀಗೆ ಅದ್ಭುತ ಪ್ರಮಾಣದಲ್ಲಿ ಕಂಡು ಬರುತ್ತವೆಯೋ, ಅವುಗಳ ಬಗ್ಗೆ ನಾನೇ ಆಗಲಿ, ನನ್ನಂಥವರಾಗಲೀ, ಸಂತೋಷ ಪಡಲೇಬೇಕು. ಸಂಸ್ಥೆಗಳ ಇಂಥ ಸಾರ್ವಜನಿಕ ಸೇವೆಯ ಬಗ್ಗೆ ನಾನು ಹಲವಾರು ಸಾರ್ವಜನಿಕ ಸಭೆಗಳಲ್ಲಿ ಉಲ್ಲೇಖೀಸಿದ್ದೇನೆ. ಈ ದೃಷ್ಟಿಯಿಂದ ಪರಿಶೀಲಿಸಿದಾಗ, ಅನ್ಯಮತೀಯ ಸಂಸ್ಥೆಗಳನ್ನು ನೋಡುವಾಗ, ಅವುಗಳ ಸ್ವಾರ್ಥಪರ, ಮತೀಯ ಸಂಕುಚಿತ ದೃಷ್ಟಿ ತಮ್ಮ ಪೋಷಣೆಯನ್ನು ಕೇವಲ ಸ್ವಪಂಥೀಯರ ಸಲುವಾಗಿ ಮಾತ್ರ ಉಳಿಸಿಕೊಂಡಿರುವುದನ್ನು ಕಾಣಬಹುದು. ಶ್ರೀ ಕ್ಷೇತ್ರದ ಸಾಧನೆಗೆ ನನ್ನಂಥ ಲೇಖಕನ ಪ್ರಶಂಸೆ ಬೇಕಾಗಿಯೇ ಇಲ್ಲ ಎಂಬಷ್ಟು ದೊಡ್ಡ ಸಾಧನೆ ಶ್ರೀಗಳದ್ದು.
– ಕೆ. ಶಿವರಾಮ ಕಾರಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ