ಕಾಡಾನೆ ಹಾವಳಿ : ವ್ಯಾಪಕ ಕೃಷಿ ನಾಶ, ಕೃಷಿಕರ ಕಣ್ಣೀರು


Team Udayavani, Jan 28, 2019, 7:41 PM IST

kadane.jpg

ಕಾಸರಗೋಡು: ಬೇಡಡ್ಕ  ಗ್ರಾ.  ಪಂ.ನ ವಟ್ಟಂತಟ್ಟ ಒಳಿಯತ್ತಡ್ಕದಲ್ಲಿ ನಿರಂತರವಾಗಿ ಕಾಡಾನೆ ಆನೆ ಹಾವಳಿಯಿಂದ ವ್ಯಾಪಕವಾಗಿ ಕೃಷಿ ನಾಶನಷ್ಟ ಸಂಭವಿಸಿದ್ದು, ಕೃಷಿಕರು ಕಣ್ಣೀರು ಸುರಿಸುವಂತಾಗಿದೆ.

ಕೃಷಿ ತೋಟಗಳಲ್ಲಿನ ಕಂಗು, ತೆಂಗು, ಬಾಳೆ ಮೊದಲಾದ ಗಿಡ, ಮರಗಳನ್ನು ಉರುಳಿಸಿದ್ದು ವ್ಯಾಪಕ ನಾಶನಷ್ಟ ಉಂಟಾಗಿದೆ. ಹಲಸಿನ ಮರವನ್ನೂ ಕಾಡಾನೆ ಉರುಳಿಸಿದ್ದು ಕೃಷಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. 
ಒಳಿಯತ್ತಡ್ಕದ ಕೆ. ಗೋಪಾಲನ್‌, ಎ. ರಾಘವನ್‌, ಎ. ಭಾಸ್ಕರನ್‌, ಎ. ಕೃಷ್ಣನ್‌, ವಿ. ಸುರೇಶ್‌ ಕುಮಾರ್‌, ಕೆ. ವಿಶ್ವನಾಥನ್‌, ಕೆ. ಕೃಷ್ಣನ್‌ ನಾಯರ್‌ ಮೊದಲಾದವರ ತೋಟಗಳಿಗೆ ನುಗ್ಗಿದ ಕಾಡಾನೆ ಹಿಂಡು ಅಪಾರ ನಷ್ಟವನ್ನುಂಟು ಮಾಡಿದೆ. ಶನಿವಾರ ರಾತ್ರಿಯೂ, ರವಿವಾರ ಬೆಳಗ್ಗಿನಿಂದಲೇ ಕಾಡಾನೆ ತೋಟಗಳಿಗೆ ನುಗ್ಗಿ ಸಿಕ್ಕಸಿಕ್ಕ ಮರಗಿಡಳನ್ನು ಉರುಳಿಸುತ್ತಾ ಸಾಗಿದೆ. ಶನಿವಾರ ರಾತ್ರಿ 9 ಗಂಟೆಗೆ ದಾಳಿ ನಡೆಸಿದ ಆನೆ ಹಿಂಡು ಕೃಷಿಯನ್ನು ಹಾನಿಗೊಳಿಸುತ್ತಿದ್ದಾಗ ಸ್ಥಳೀಯರು ಪಟಾಕಿ ಸಿಡಿಸಿ ಆನೆಗಳನ್ನು ಓಡಿಸುವ ಪ್ರಯತ್ನ ಪಟ್ಟರು ಸಫಲರಾಗಲಿಲ್ಲ. ಸಾಕಷ್ಟು ಕೃಷಿ ಹಾನಿ ಮಾಡಿದ ಬಳಿಕವಷ್ಟೇ ಆನೆಗಳು ತೋಟದಿಂದ ದೂರ ಸರಿದವು.

ಪಾತ್ರೆಗಳಿಂದ ಶಬ್ದ ಮಾಡಿ ಓಡಿಸುವ ಪ್ರಯತ್ನವನ್ನೂ ಸ್ಥಳೀಯ ನಾಗರಿಕರು  ಮಾಡಿದ್ದರು. ಕೆಲವು ಹೊತ್ತು ದಾಂಧಲೆ ನಡೆಸಿದ ಆನೆ ತೆರಳಿ ಮತ್ತೆ ಮಧ್ಯರಾತ್ರಿ 1.30ಕ್ಕೆ ದಾಳಿ ನಡೆಸಿತು. ಮಧ್ಯ ರಾತ್ರಿ ಆನೆಗಳ ಹಿಂಡು ಹಾವಳಿ ನಡೆಸಿದಾಗ ಸ್ಥಳೀಯರಿಗೆ ಏನು ಮಾಡಲೂ ಸಾಧ್ಯವಾಗಲಿಲ್ಲ. 

ಒಳಿಯತ್ತಡ್ಕದ ಆನಂದ ಮಠದ ನಾರಾಯಣಿ, ಕುಂಞಿಕಣ್ಣನ್‌,  ವಿಜಯನ್‌ ಅವರ ಕೃಷಿ ತೋಟಗಳಿಗೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಕಾಡಾನೆ ಹಿಂಡು ದಾಳಿ ನಡೆಸಿ ಅಪಾರ ನಷ್ಟವನ್ನುಂಟು ಮಾಡಿತ್ತು.

ಅರಣ್ಯ ಇಲಾಖೆಯ ಪಾಂಡಿ ವಿಭಾಗದ ಕಾರಡ್ಕ ಸಂರಕ್ಷಿತ ಅರಣ್ಯದ ಎರಿಂಞಪುಳ ಪರಿಸರದ ಒಳಿಯತ್ತಡ್ಕದಲ್ಲಿ ಜನವರಿ 2ರಂದು ಕಾಡಾನೆ ದಾಂಧಲೆ ನಡೆಸಿತ್ತು.

ಐದು ವರ್ಷಗಳಿಂದ ಹಾನಿ 
ಕಳೆದ ಐದು ವರ್ಷಗಳಿಂದ ಈ ಪ್ರದೇಶದಲ್ಲಿ ಕಾಡಾನೆ ಹಾವಳಿ ನಡೆಯುತ್ತಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ನಾಶನಷ್ಟ ಸಂಭವಿಸಿದೆ. ಕಾಡಾನೆ ಹಾವಳಿಯಿಂದ ಕೃಷಿ ತೋಟ ಮತ್ತು ಕೃಷಿಯನ್ನು ಸಂರಕ್ಷಿಸಲು ಸೌರ ವಿದ್ಯುತ್‌ ಬೇಲಿ, ಕಗ್ಗಲ್ಲಿನ ಗೋಡೆ ಗಳನ್ನು ಶೀಘ್ರವೇ ಸ್ಥಾಪಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಲೇ ಬಂದಿದ್ದರೂ ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆ ಹಾವಳಿಯನ್ನು ನಿಗ್ರಹಿಸಲು ಅಗತ್ಯದ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿರುವ ಬಂದಡ್ಕ ಅರಣ್ಯ ವಿಭಾಗೀಯ ಅಧಿಕಾರಿ ವಿ.ಎಸ್‌.ವಿನೋದ್‌ ಕುಮಾರ್‌ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ವಿಭಾಗೀಯ ಅರಣ್ಯ ಅಧಿಕಾರಿ ಕೆ.ಎನ್‌.ರಮೇಶನ್‌, ಆರ್‌.ಎಫ್‌. ವಾಚರ್‌ ಎ.ಅಶ್ರಫ್‌ ಮೊದಲಾದವರು ಬಂದಡ್ಕ ಪ್ರದೇಶದಲ್ಲಿ ರಾತ್ರಿ ಹೊತ್ತು ಗಸ್ತು ಕ್ರಮ ತೆಗೆದುಕೊಂಡಿದ್ದಾರೆ.

ಅಗತ್ಯ ಕ್ರಮ 
ಕಾಡಾನೆ ಹಿಂಡು ಎರಿಂಞಪುಳ ಹೊಳೆಯ ದಡದಲ್ಲಿ ವಿಹರಿಸುತ್ತಿದ್ದು, ಮತ್ತೆ ಕಾಡಾನೆ ತೋಟಗಳಿಗೆ ನುಗ್ಗುವ ಸಾಧ್ಯತೆ ಇದೆ. ಮತ್ತೆ ಕಾಡಾನೆ ಹಿಂಡು ಕೃಷಿ ತೋಟ ಗಳಿಗೆ ದಾಳಿಯನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
-ವಿ.ಎಸ್‌. ವಿನೋದ್‌ ಕುಮಾರ್‌, ಅರಣ್ಯ ವಿಭಾಗೀಯ ಅಧಿಕಾರಿ, ಬಂದಡ್ಕ.

ಟಾಪ್ ನ್ಯೂಸ್

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Fraud Case: ಆರೋಪಿ ರತೀಶ್‌ ಗೋವಾಕ್ಕೆ ಪರಾರಿ

Fraud Case: ಆರೋಪಿ ರತೀಶ್‌ ಗೋವಾಕ್ಕೆ ಪರಾರಿ

Arrested: ಉಪ್ಪಳದಲ್ಲಿ ಯುವಕನ ಕೊಲೆ ಪ್ರಕರಣ: 11 ವರ್ಷಗಳ ಬಳಿಕ ಆರೋಪಿ ಬಂಧನ

Arrested: ಉಪ್ಪಳದಲ್ಲಿ ಯುವಕನ ಕೊಲೆ ಪ್ರಕರಣ: 11 ವರ್ಷಗಳ ಬಳಿಕ ಆರೋಪಿ ಬಂಧನ

Theft Case ಗುಜರಿ ಅಂಗಡಿಯಿಂದ 3 ನೇ ಬಾರಿ ಕಳವು : ಇಬ್ಬರ ಬಂಧನ

Theft Case ಗುಜರಿ ಅಂಗಡಿಯಿಂದ 3 ನೇ ಬಾರಿ ಕಳವು : ಇಬ್ಬರ ಬಂಧನ

Kasaragod ಬೈಕ್‌ಗಳ ಮುಖಾಮುಖಿ ಢಿಕ್ಕಿ; ವಿದ್ಯಾರ್ಥಿ ಸಾವು, ಇಬ್ಬರಿಗೆ ಗಾಯ

Kasaragod ಬೈಕ್‌ಗಳ ಮುಖಾಮುಖಿ ಢಿಕ್ಕಿ; ವಿದ್ಯಾರ್ಥಿ ಸಾವು, ಇಬ್ಬರಿಗೆ ಗಾಯ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.