ಪ.ಬಂ: BJP ಬೃಹತ್‌ ರಾಲಿ; ಕಾಲ್‌ತುಳಿತದಿಂದಾಗಿ ಮೋದಿ ಭಾಷಣ ಮೊಟಕು


Team Udayavani, Feb 2, 2019, 10:14 AM IST

modi-speech-crowd-700.jpg

ಠಾಕೂರ್‌ನಗರ : ಭಾರೀ ಕರತಾಡನ, ಮುಗಿಲೇರಿದ ಉಘೇ ಉಘೇ, ಬೃಹತ್‌ ಬೆಂಬಲದ ನಡುವೆ ನೆರೆದ ಜನಜಂಗುಳಿಯಲ್ಲಿ ಕಾಲ್‌ತುಳಿತದಂತಹ ಗಂಭೀರ ಸ್ಥಿತಿ ಏರ್ಪಟ್ಟ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರಿಂದು ಪಶ್ಚಿಮ ಬಂಗಾಲದ ಉತ್ತರ 24 ಪರಗಣ ಜಿಲ್ಲೆಯ ಠಾಕೂರ್‌ಗಂಜ್‌ ನಲ್ಲಿನ ತಮ್ಮ ಭಾಷಣವನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು.

ನೆರೆದ ಬೃಹತ್‌ ಜನಸಮೂಹದಲ್ಲಿ ಅನೇಕ ಮಹಿಳೆಯರು ಗಾಯಗೊಂಡರೆಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದರು. 

ಬಂಗಾಲಿ ಭಾಷೆಯಲ್ಲೇ ತನ್ನ ಚುನಾವಣಾ ಪ್ರಚಾರ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರನ್ನು ನೆರೆದ ಬೃಹತ್‌ ಜನಸಮೂಹ ಭಾರೀ ಕರತಾಡನ ಮತ್ತು ಅಭಿನಂದನೆಗಳೊಂದಿಗೆ ಸ್ವಾಗತಿಸಿತು. ಪರಿಶಿಷ್ಟ ಜಾತಿಯ ಮಥುವಾ ಸಮುದಾಯದ ಜನರು ಬೃಹತ್‌ ಸಂಖ್ಯೆಯಲ್ಲಿ ಜಮಾಯಿಸಿದ್ದು ಅವರು ಪ್ರಧಾನಿ ಬಂಗಾಲಿಯಲ್ಲಿ ಭಾಷಣ ಆರಂಭಿಸುತ್ತಿದ್ದಂತೆಯೇ ಭಾರೀ ಕರತಾಡನಗೈದು ಮುಗಿಲುಮುಟ್ಟುವ ರೀತಿಯಲ್ಲಿ ಅಭಿನಂದನೆ ಸೂಚಿಸಿದರು. 

ಮೋದಿ ಭಾಷಣ ಮಾಡುತ್ತಿದ್ದಂತೆಯೇ  ರಾಲಿ ತಾಣದ ಹೊರಗೆ, ಬೇಲಿಯಾಚೆ ನೆರೆದಿದ್ದ ಮಥುವಾ ಸಮುದಾಯದ ಜನರು ಮೈದಾನದ ಒಳನುಗ್ಗಲು ಪ್ರಯತ್ನಿಸಿದರು. ಆಗ ಕಾಲ್‌ ತುಳಿತದಂತಹ ಸನ್ನಿವೇಶ ಏರ್ಪಟ್ಟಿತು.

ಮೋದಿ ಅವರು ರಾಲಿ ಮೈದಾನದಲ್ಲಿದ್ದ ನೆರೆದಿದ್ದ ಜನರಿಗೆ ಶಾಂತಿ ಮತ್ತು ಸಭಾ ಘನತೆಯನ್ನು ಕಾಪಿಡುವಂತೆ ಪದೇ ಪದೇ ಕೋರಿದರು. ‘ನೀವೆಲ್ಲ ನಿಂತಲ್ಲೇ ನಿಂತಿರಿ, ಯಾರೂ ರಾಲಿಯ ಒಳ ವೃತದೊಳಗೆ ನುಗ್ಗಿ ಬರಲು ಯತ್ನಿಸಬೇಡಿ’ ಎಂದು ಮೋದಿ ಜನಸಮೂಹವನ್ನು ಶಾಂತಗೊಳಿಸಲು ಯತ್ನಿಸಿದರು. ಆದರೆ ಯಾವುದೂ ಫ‌ಲಕಾರಿ ಆಗದಿದ್ದಾಗ ಹೆಚ್ಚಿನ ಅನಾಹುತ ಆಗದಿರಲೆಂಬ ಕಾರಣಕ್ಕೆ ತಮ್ಮ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿದರು. ಆಗಿನ್ನೂ ಮೋದಿ ಅವರು ಭಾಷಣ ಆರಂಭಿಸಿ ಕೇವಲ 14 ನಿಮಿಷಗಳು ಮಾತ್ರವೇ ಆಗಿದ್ದವು. 

ಜನಸಂದೋಹದಲ್ಲಿ ಸಿಲುಕಿಕೊಂಡ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ಬಿಜೆಪಿ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು  ಮುನ್ನುಗ್ಗಿದರು. 

ಪಶ್ಚಿಮ ಬಂಗಾಲದಲ್ಲಿ ಮಥುವಾ ಸಮುದಾಯದವರು 30 ಲಕ್ಷದಷ್ಟಿದ್ದು ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳ ಕನಿಷ್ಠ ಐದು ಲೋಕ ಸಭಾ ಸೀಟುಗಳ ಮೇಲೆ ಇವರ ನಿರ್ಣಾಯಕ ಪ್ರಭಾವ ಇದೆ. 

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.