ನಾಲ್ಕೇ ಅಡಿಗೆ ಚಿಮ್ಮಿತು ಬೋರ್ವೆಲ್!
Team Udayavani, Feb 6, 2019, 1:00 AM IST
ಬಂಟ್ವಾಳ: ಬರಡು ಭೂಮಿಯಲ್ಲಿ ಕೊಳವೆಬಾವಿ ಕೊರೆಯಲು ಆರಂಭಿಸಿದ್ದಷ್ಟೆ… ಕೆಲವೇ ನಿಮಿಷಗಳಲ್ಲಿ ನೀರು ಚಿಮ್ಮಲಾರಂಭಿಸಿತು. ಅದನ್ನು ಕಂಡ ಸ್ಥಳೀಯರು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಆದರೆ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ನಿಜ ತಿಳಿದಾಗ ನಿರಾಸೆ ಮೂಡಿತು.
ಸಜೀಪಮೂಡದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂದೇಶಗಳು ಹರಿದಾಡುತ್ತಿವೆ.
ನಡೆದದ್ದೇನು?
ಸಜೀಪಮೂಡ ಗ್ರಾ.ಪಂ. ಅನುದಾನದಲ್ಲಿ ಕಂದೂರಿನಲ್ಲಿ ಕೊಳವೆಬಾವಿ ತೋಡಲು ನಿರ್ಣಯಿಸಲಾಗಿತ್ತು. ನೀರು ಪರಿಶೋಧಕರು ಮೇಲ್ಭಾಗದಲ್ಲೇ ನೀರು ಸಿಗುವ ಖಾತರಿಯನ್ನೂ ನೀಡಿದ್ದರು. ನೇತ್ರಾವತಿ ನದಿಯಿಂದ ಮಂಗಳೂರಿನ ಕೊಣಾಜೆಗೆ ನೀರು ಸರಬರಾಜು ಮಾಡುವ ಪೈಪ್ಲೈನ್ ಅದೇ ಜಾಗದಲ್ಲಿದ್ದು, ಅದನ್ನರಿಯದೆ ಶನಿವಾರ ಸಂಜೆ ಬಾವಿ ಕೊರೆಯಲಾರಂಭಿಸಲಾಯಿತು. ನಾಲ್ಕೈದು ಅಡಿ ಆಳದಲ್ಲಿರುವ ಕಬ್ಬಿಣದ ಪೈಪ್
ಲೈನ್ ತೂತಾಗಿ ನೀರು ಹರಿಯಲಾರಂಭಿಸಿತು. ಕೆಲಸಗಾರರು ಮತ್ತು ಸ್ಥಳದಲ್ಲಿದ್ದವರ ಸಂಭ್ರಮ ಮುಗಿಲು ಮುಟ್ಟಿತು. ವಿಷಯ ತಿಳಿದ ನೂರಾರು ಮಂದಿ ಜಮಾಯಿಸಿದರು. ಇಷ್ಟೆಲ್ಲ ಆಗುವಾಗ ನಿಜ ವಿಚಾರ ಗೊತ್ತಾಯಿತು.
ನಿರಾಸೆಯ ನಡುವೆ ತಮಾಷೆ ವಸ್ತುವಾಗಿ ನಗುವಿಗೂ ಕಾರಣವಾಯಿತು. ಬಳಿಕ ಪೈಪ್ಲೈನ್ ಸರಿಪಡಿಸಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಯಿತು.
ಆ ಸ್ಥಳದಲ್ಲಿ 400 ಅಡಿ ಆಳದಲ್ಲಿ ನೀರು ಸಿಗಬಹುದೆಂದು ತಜ್ಞರು ಎರಡು ಜಾಗ ಗುರುತಿಸಿದ್ದರು. ಮೊದಲನೇ ಜಾಗದಲ್ಲಿ ಪೈಪ್ಲೈನ್ ಅಡ್ಡಬಂದ ಕಾರಣ ಕೆಲಸ ನಿಲ್ಲಿಸಿ ಪಕ್ಕದಲ್ಲೇ ಗುರುತಿಸಿದ್ದ ಇನ್ನೊಂದು ಜಾಗದಲ್ಲಿ ಕೊರೆಯಲಾಯಿತು. ಆದರೆ 700 ಅಡಿ ಆಳಕ್ಕೆ ಹೋದರೂ ನೀರು ಲಭಿಸದ ಕಾರಣ ಕೊಳವೆಬಾವಿ ಕೊರೆಯುವ ಯತ್ನವನ್ನು ಕೈಬಿಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ