ಶಿರ್ವ: ರಸ್ತೆ ಬದಿ ಗೂಡಂಗಡಿ ತೆರವುಗೊಳಿಸಲು ಸೂಚನೆ
Team Udayavani, Mar 7, 2019, 1:00 AM IST
ಶಿರ್ವ: ಆತ್ರಾಡಿ- ಶಿರ್ವ-ಬೆಳ್ಮಣ್ ರಾಜ್ಯ ಹೆದ್ದಾರಿಯ ಶಿರ್ವ ಬಸ್ ನಿಲ್ದಾ ಣದ ಬಳಿ ರಸ್ತೆಯ ಇಕ್ಕೆಲದಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು ಕೂಡಲೇ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪೊಲೀಸ್ ಸಹಕಾರದೊಂದಿಗೆ ಬುಧವಾರ ಸೂಚನೆ ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಜಾಗದಲ್ಲಿ ಇಲಾಖೆ ಇಂಟರ್ಲಾಕ್ ಅಳವಡಿಸುತ್ತಿದೆ. ಇಂಟರ್ಲಾಕ್ ಅಳವಡಿಸಲು ಅನಧಿಕೃತ ಗೂಡಂಗಡಿ, ರಸ್ತೆಯಂಚಿನಲ್ಲಿರುವ ಟೆಲಿಫೋನ್ ಬೂತ್ ಅಡ್ಡಿಯಾಗುತ್ತಿದ್ದು ಕೆಲಸ ನಿಲ್ಲಿಸಲಾಗಿದೆ. ಇಂಟರ್ಲಾಕ್ ಅಳವಡಿಸಲು ಅವಕಾಶ ನೀಡಬೇಕಾಗಿದ್ದು ಗೂಡಂಗಡಿ ತೆರವುಗೊಳಿಸಬೇಕೆಂದು ಉಡುಪಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ ಭಟ್ ಎಚ್ಚರಿಕೆ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಶಿರ್ವ ಠಾಣಾಧಿಕಾರಿ ಅಬ್ದುಲ್ ಖಾದರ್ ಮತ್ತು ಪೊಲೀಸ್ ಸಿಬಂದಿ ಉಪಸ್ಥಿತರಿದ್ದರು.
ನೊಟೀಸ್ನಿàಡಿದೆ
ಶಿರ್ವದಲ್ಲಿ ಸಮಸ್ಯೆಯಿದ್ದು ಈಗಾಗಲೇ ಅನಧಿಕೃತ ಗೂಡಂಗಡಿಗಳವರಿಗೆ ತಿಳಿಸಲಾಗಿದೆ. ಕಾನೂನು ಪ್ರಕಾರ ನೊಟೀಸ್ ನೀಡಿದ್ದು ಪ್ರಕ್ರಿಯೆ ಜಾರಿಯಲ್ಲಿದೆ. ಇಲಾಖೆಯ ಎಸ್ಟಿಮೇಟ್ ಪ್ರಕಾರ ಇಂಟರ್ಲಾಕ್ ಅಳವಡಿಸಲಾಗುವುದು .
-ಜಗದೀಶ್ ಭಟ್, ಕಾರ್ಯನಿರ್ವಾಹಕ ಎಂಜಿನಿಯರ್, ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ