ಅಂಗಳದಲ್ಲೇ ತರಕಾರಿ ಬೆಳೆಯುವ ತಾತ
Team Udayavani, Mar 14, 2019, 1:00 AM IST
ಕಾರ್ಕಳ: ಕೃಷಿ ಭೂಮಿಯಿದ್ದರೂ ಕನಿಷ್ಟಪಕ್ಷ ಕುಟುಂಬಕ್ಕೆ ಬೇಕಾಗುವಷ್ಟು ತರಕಾರಿ ಬೆಳೆಯಲು ಹಿಂಜರಿಯುವ ಇಂದಿನ ಕಾಲದಲ್ಲಿ ಕಾಬೆಟ್ಟು ಪರಿಸರದ ತಾತ ಒಬ್ಬರು ಅಂಗಳದಲ್ಲೇ ತಮಗೆ ಬೇಕಾದ ತರಕಾರಿಯನ್ನು ಸಾವಯವವಾಗಿ ಬೆಳೆದು ಅನೇಕರಿಗೆ ಮಾದರಿಯಾಗಿದ್ದಾರೆ.
ಅವರೇ ರಘುನಾಥ ಶೆಣೈ. ಅಂಚೆ ಇಲಾಖೆಯ ನಿವೃತ್ತ ಅಧಿಕಾರಿಯಾಗಿರುವ ಇವರು ತಮ್ಮ ಮನೆ ಅಂಗಳದಲ್ಲೇ ತೊಂಡೆ, ಬದನೆ, ಮೆಣಸು ಬೆಳೆಸುತ್ತಾರೆ. ತರಕಾರಿಯನ್ನು ಸಾವಯವ ರೀತಿಯಲ್ಲೇ ಬೆಳೆಯುವ ಶೆಣೈ ಅವರು ತಮ್ಮ ಹತ್ತು ಸೆಂಟ್ಸ್ ಜಾಗದಲ್ಲಿ ಹತ್ತಾರು ಬಗೆಯ ಹೂವಿನ ಗಿಡಗಳನ್ನು ಬೆಳೆಸಿ ಖುಷಿ ಕಾಣುತ್ತಾರೆ.
ಹಚ್ಚ ಹಸುರೇ
ಅಂಗಳದಲ್ಲಿ ಹಚ್ಚ ಹಸುರಿನ ತೊಂಡೆ ಬಳ್ಳಿಯ ಚಪ್ಪರ ಆಕರ್ಷಕವಾಗಿದ್ದು, ಪರಿಸರದಲ್ಲಿ ತಂಪು ವಾತಾವರಣ ನಿರ್ಮಿಸಿದೆ. ಬಗೆ ಬಗೆಯ ಹೂವಿನ ಗಿಡಗಳು ಮಾತ್ರವಲ್ಲದೇ ಬಾಳೆ, ಚಿಕ್ಕು, ಸೇರಿದಂತೆ ಹಲವಾರು ಹಣ್ಣಿನ ಗಿಡಗಳನ್ನು ಬೆಳೆಸಿ ಪಕ್ಷಿಗಳಿಗೂ ಆಸರೆಯಾಗಿದ್ದಾರೆ. ಹೀಗಾಗಿ ಸುಂದರ ತಾಣದಲ್ಲಿ ಹಕ್ಕಿಗಳ ಕಲರವ, ಇಂಚರದ ಇಂಪು ಕೇಳಿಬರುತ್ತಿದೆ.
ಯುವಕರ ಲವಲವಿಕೆ
ವಯಸ್ಸಾದಂತೆ ಕೆಲಸದಲ್ಲಿ ಉತ್ಸಾಹ ವಿಲ್ಲ ಎನ್ನುವ ವಿಚಾರಕ್ಕೆ ರಘುನಾಥ ಶೆಣೈ ಅವರು ಅಪವಾದ. 76ರ ವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಲವಲವಿಕೆ ತಾತನಲ್ಲಿದೆ.
ಉದಯವಾಣಿ ಓದುಗ
ಓದು ತಾತನ ಹವ್ಯಾಸ. ಉದಯ ವಾಣಿ ಪತ್ರಿಕೆಯನ್ನು ಕಳೆದ 50 ವರ್ಷಗಳಿಂದ ಓದುತ್ತ ಬಂದಿದ್ದೇನೆ ಎನ್ನುವ ತಾತ, ರಾಜಕೀಯ, ಸಾಮಾಜಿಕ ವಿಚಾರಗಳ ಕುರಿತು ಅತ್ಯಂತ ವಿಶ್ಲೇಷಿಸುತ್ತಾರೆ. ಬಿಡುವಿನ ವೇಳೆ ತನ್ನ ಆಕ್ಟಿವಾದಲ್ಲಿ ಗ್ರಂಥಾಲಯಕ್ಕೆ ಹೋಗಿ ಕಾದಂಬರಿಗಳನ್ನು ತಂದು ಓದುತ್ತಿರುವುದೇ ಪುಸ್ತಕದ ಮೇಲೆ ತಾತನ ಪ್ರೀತಿಯನ್ನು ತೋರಿಸುತ್ತದೆ.
ಸ್ವತ್ಛತೆಗೆ ಆದ್ಯತೆ
ತಾತ ಮನೆ ಪರಿಸರವನ್ನು ದಿನಾಲೂ ಗುಡಿಸಿ ಸ್ವತ್ಛವಾಗಿಟ್ಟುಕೊಳ್ಳುತ್ತಾರೆ. ಒಂದೇ ಒಂದು ಪ್ಲಾಸ್ಟಿಕ್ ಆ ಪರಿಸರದಲ್ಲಿ ಕಾಣಲು ಸಾಧ್ಯವಿಲ್ಲ. ಮನೆ ಪರಿಸರ ಮಾತ್ರವಲ್ಲ ಸುತ್ತ ಮುತ್ತು ಸ್ವತ್ಛಗೊಳಿಸುತ್ತಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮನಸ್ಸಿಗೆ ನೆಮ್ಮದಿ
ತರಕಾರಿ, ಹೂವು-ಹಣ್ಣಿನ ಗಿಡಗಳನ್ನು ಬೆಳೆಯುವುದರಿಂದ ಒಂದು ರೀತಿಯ ಆನಂದ ಸಿಗುವುದು. ಮನಸ್ಸಿಗೆ ನೆಮ್ಮದಿ ತರುವುದು. ಪತ್ನಿ ನಿಧನ ಹೊಂದಿದ ಬಳಿಕ, ಕೆಲಸ ಓದಿನಲ್ಲಿ ತಲ್ಲೀನನಾಗಿ ತೃಪ್ತಿ ಕಾಣುತ್ತಿದ್ದೇನೆ.
-ರಘುನಾಥ ಶೆಣೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು