ಮರವಂತೆ ದೇಗುಲ: ಅಭಾರಿ ಸೇವೆ, ಮೊಸಳೆಗೆ ಅನ್ನ ಸಮರ್ಪಣೆ
Team Udayavani, Mar 21, 2019, 1:00 AM IST
ಉಪ್ಪುಂದ: ಮರವಂತೆಯ ನದಿ- ಕಡಲಿನ ನಡುವಿನ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಮೀನುಗಾರರ, ಕೃಷಿಕರ ಶ್ರೇಯಸ್ಸಿಗಾಗಿ, ಪ್ರಕೃತಿಯ ಒಳಿತಿಗಾಗಿ ವಿಶೇಷ ಸೇವೆ ಅಭಾರಿ ಉತ್ಸವ ಮಾ. 20ರಂದು ನಡೆಯಿತು.
ಬೆಳಗ್ಗೆ ದೇವಸ್ಥಾನದ ಆರಾಧ್ಯ ದೇವರಾದ ಶ್ರೀ ವರಾಹ, ವಿಷ್ಣು, ನಾರಸಿಂಹ ಮತ್ತು ಸನಿಹದ ಗಂಗಾಧರೇಶ್ವರ ಸನ್ನಿಧಿಯಲ್ಲಿ ಮಹಾಗಣಪತಿ ಹವನ, ಚಂಡಿಕಾ ಹವನ, ಏಕಾದಶರುದ್ರ ಹವನ, ಕಲಶಾಭಿಷೇಕ ಹೋಮ, ಮಹಾಪೂಜೆ, ಉತ್ಸವಗಳು ನಡೆದವು.
ಅಭಾರಿ ಸೇವೆಯ ಹಿನ್ನಲೆ
ದೇವಸ್ಥಾನದಲ್ಲಿ ಸಕಾಲದಲ್ಲಿ ಮಳೆಗಾಗಿ, ಪ್ರವಾಹ ಬಂದು ಬೆಳೆ ನಾಶವಾಗದಂತೆ ಹಾಗೂ ಮೀನುಗಾರರು ಮೀನುಗಾರಕೆ ನಡೆಸುವಾಗ ಯಾವುದೇ ತೊಂದರೆ ಯಾದಂತೆ ಪ್ರಾರ್ಥಿಸುವ ಸಲುವಾಗಿ ಅಭಾರಿ ಸೇವೆ ನಡೆಸಲಾಗುತ್ತಿದೆ. ದೇವಸ್ಥಾನದ ಎದುರು ಭಾಗದಲ್ಲಿ ನದಿಯ ನೆಗಳನ (ಮೊಸಳೆ) ಗುಂಡಿಗೆ ನೈವೇದ್ಯ ಸಮರ್ಪಿಸುವ ಮೂಲಕ ಸೇವೆ ನಡೆಸಲಾಗುತ್ತದೆ.
ಸೇವೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಮರವಂತೆ ಮೀನುಗಾರರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್ ಕರೆ
Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ
Malpe ಬೀಚ್: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ
MUST WATCH
ಹೊಸ ಸೇರ್ಪಡೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ