ಕೋಸ್ಟಲ್ವುಡ್ನಲ್ಲಿ ಇಲ್ಲೊಕ್ಕೆಲ್ಗೆ ರೆಡಿ !
Team Udayavani, Mar 21, 2019, 7:07 AM IST
ತುಳುನಾಡು ಎನ್ನುವುದು ಸಂಸ್ಕೃತಿ, ಆಚಾರ ಮತ್ತು ಕಲೆಗಳ ಬೀಡು. ಆದರೆ ಈಗ ತುಳುನಾಡಿನ ಅನೇಕ ಸಂಪ್ರದಾಯಗಳು ಮತ್ತು ವಸ್ತುಗಳು ನಶಿಸಿ ಹೋಗುತ್ತಿವೆ. ಮುಂದಿನ ಜನಾಂಗಕ್ಕೆ ತುಳುನಾಡಿನ ಸಂಸ್ಕೃತಿ- ಸಂಸ್ಕಾರಗಳನ್ನು ಹೇಳಿಕೊಡುವ, ತೋರಿಸಿಕೊಡುವ ಅನಿವಾರ್ಯತೆಗೆ ನಾವು ಒಳಗಾಗಿದ್ದೇವೆ. ಅಚ್ಚರಿ ಎಂದರೆ ಮರೆತುಹೋದ ತುಳುನಾಡಿನ ಸಂಸ್ಕೃತಿ- ಸಂಸ್ಕಾರದ ವಿಶೇಷತೆಗಳನ್ನು ನೆನಪು ಮಾಡುವ ನೆಲೆಯಲ್ಲಿ ತುಳುವಿನ ‘ಇಲ್ಲೊಕ್ಕೆಲ್’ ಸಿನೆಮಾ ವಿನೂತನ ಸಾಹಸಕ್ಕೆ ಕೈ ಹಾಕಿದೆ.
ನಶಿಸಿ ಹೋಗುತ್ತಿರುವ ತುಳುವರ ಸಂಪ್ರದಾಯ, ವಸ್ತುಗಳ ಬಗ್ಗೆ ಮನಮುಟ್ಟುವಂತೆ ಅದ್ಭುತ ಸಾಹಿತ್ಯ ಮತ್ತು ಸಂಗೀತದೊಂದಿಗೆ ‘ಇಲ್ಲೊಕ್ಕೆಲ್’ ಸಿನೆಮಾದಲ್ಲಿ ಹಾಡು ಮೂಡಿಬಂದಿದೆ. ‘ಮುರ್ಕುದು ಪೋಪುಂಡುಯೇ ಮಾತಾ’ ಎಂಬ ಚರಣದ ಈ ಹಾಡು ಸದ್ಯ ತುಳುನಾಡಿನಲ್ಲಿ ವಿನೂತನ ಟ್ರೆಂಡ್ ಹುಟ್ಟುಹಾಕಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಾಕಷ್ಟು ವೈರಲ್ ಆಗಿದೆ. ನಿಜಕ್ಕೂ ತುಳುನಾಡಿನ ಮರೆತುಹೋದ ಒಂದೊಂದು ನೆನಪುಗಳನ್ನು ಇಂದು ಕಾಡುವಂತೆ ಮಾಡಿದೆ.
ಡಾ| ಸುರೇಶ್ ಚಿತ್ರಾಪು ಅವರ ಸಾಹಿತ್ಯಕ್ಕೆ ರಾಜ್ ಷಾ ಅವರ ಅದ್ಬುತ ಸಂಗೀತ ಮತ್ತು ಮೈಮ್ ರಾಮ್ದಾಸ್, ಡಾ| ಸುರೇಶ್ ಚಿತ್ರಾಪು, ರಾಜ್ ಷಾ ಹಾಗೂ ವೇಲು ಅವರ ಸಿರಿಕಂಠದಲ್ಲಿ ಮೂಡಿಬಂದ ಈ ಹಾಡು ಕೇಳುಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಹಾಡಿಗೆ ಶಾನಾಯಿಯಲ್ಲಿ ಬಾಲೇಶ್, ಟೇಪ್ ಮತ್ತು ಪೆರ್ಕಶ್ನಲ್ಲಿ ಡಿ. ವಿಕ್ಕಿ ಮತ್ತು ನವೀನ್ ರಾವ್, ಮ್ಯಾಂಡೊಲಿನ್ನಲ್ಲಿ ಸೀನು, ಕೀಬೋರ್ಡ್ನಲ್ಲಿ ರಾಜ್ ಷಾ ಕೈಜೋಡಿಸಿದ್ದಾರೆ.
ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಅದ್ವಿತಿ ಶೆಟ್ಟಿ, ಅಪ್ಪೆ ಟೀಚರ್ ಖ್ಯಾತಿಯ ನಿರೀಕ್ಷೆ ಶೆಟ್ಟಿ, ಭವ್ಯಾ ಗೌಡ, ವಿಸ್ಮಯ ವಿನಾಯಕ್, ವಿಜೆ ವಿನೀತ್, ಪಿಲಿಬೈಲು ಯಮುನಕ್ಕ ಖ್ಯಾತಿಯ ಚಂದ್ರಕಲಾ ಮೋಹನ್, ಸೀತಾರಾಮ್ ಕಟೀಲು ಮತ್ತು ಇನ್ನೂ ಅನೇಕ ಖ್ಯಾತ ಕಲಾವಿದರು ನಟಿಸಿದ್ದಾರೆ.
ವಿಶಿಷ್ಟ ಪಾತ್ರದಲ್ಲಿ ಹಾಸ್ಯ ಕಲಾವಿದರಾದ ಕುರಿಬಾಂಡ್ ರಂಗ ಅಭಿನಯಿಸಿದ್ದು ಇವರು ಪ್ರಥಮ ಬಾರಿಗೆ ಕೋಸ್ಟಲ್ವುಡ್ ಗೆ ಕಾಲಿಡುತ್ತಿದ್ದಾರೆ. ಈ ಸಿನೆಮಾವು ಶ್ರೀ ಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿದೆ. ಇಲ್ಲ್ ಒಕ್ಕೆಲ್ಗೆ ಡಾ| ಸುರೇಶ್ ಎಸ್. ಕೋಟ್ಯಾನ್ ಚಿತ್ರಾಪು ಅವರ ನಿರ್ದೇಶನವಿದ್ದು, ವಾಸುದೇವ ಎಸ್. ಚಿತ್ರಾಪು ಮತ್ತು ಡಿ.ಎಂ. ಶೆಟ್ಟಿ ಅವರು ನಿರ್ಮಾಪಕರಾಗಿದ್ದಾರೆ. ಶೀಘ್ರದಲ್ಲಿ ಸಿನೆಮಾ ಬಿಡುಗಡೆಯಾಗಲಿದೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ