ಭಾರತ ಗುರುತಿಸಿರುವ 22 ತಾಣಗಳಲ್ಲಿ ಉಗ್ರ ಶಿಬಿರಗಳಿಲ್ಲ: ಪಾಕಿಸ್ಥಾನ


Team Udayavani, Mar 28, 2019, 12:03 PM IST

Wagha-Border-retrat-730

ಇಸ್ಲಾಮಾಬಾದ್‌ : ‘ಭಾರತವು ಗುರುತು ಹಾಕಿಕೊಟ್ಟಿರುವ 22 ಉಗ್ರ ತಾಣಗಳನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದ್ದು ಅಲ್ಲೆಲ್ಲೂ ಉಗ್ರ ಶಿಬಿರಗಳು ಕಂಡು ಬಂದಿಲ್ಲ’ ಎಂದು ಪಾಕಿಸ್ಥಾನ ಹೊಸದಿಲ್ಲಿಗೆ ತಿಳಿಸಿದೆ.

‘ನಿಮ್ಮ ಕೋರಿಕೆಯ ಮೇರೆಗೆ ನೀವೇ ಗುರತಿಸಿಕೊಟ್ಟಿರುವ ಉಗ್ರ ತಾಣಗಳ ಪರಿಶೀಲನೆಗೆ ನಾವು ಅವಕಾಶವನ್ನು ಕಲ್ಪಿಸುತ್ತೇವೆ; ನೀವೇ ಇಲ್ಲಿಗೆ ಬಂದು ಆ ತಾಣಗಳನ್ನು ಪರೀಕ್ಷಿಸಬಹುದಾಗಿದೆ’ ಎಂದು ಪಾಕ್‌ ವಿದೇಶದ ಕಾರ್ಯಾಲಯ ಭಾರತಕ್ಕೆ ತಿಳಿಸಿದೆ.

‘ಇದೇ ರೀತಿ ಪುಲ್ವಾಮಾ ಉಗ್ರ ದಾಳಿಗೆ ಸಂಬಂಧಿಸಿ ಹೊಸದಿಲ್ಲಿ ಕೊಟ್ಟಿರುವಂತಹ ಪ್ರಾಥಮಿಕ ಮಾಹಿತಿಯನ್ವಯ ನಾವು ಈಗಾಗಲೇ ಬಂಧಿಸಿರುವ 54 ಮಂದಿಗೂ ಪುಲ್ವಾಮಾ ಉಗ್ರ ದಾಳಿಗೂ ಯಾವುದೇ ಸಂಬಂಧ ಇಲ್ಲದಿರುವುದನ್ನು ನಾವು ತನಿಖೆಯಿಂದ ಕಂಡು ಕೊಂಡಿದ್ದೇವೆ’ ಎಂದು ಪಾಕ್‌ ವಿದೇಶ ಕಾರ್ಯಾಲಯ ತಿಳಿಸಿದೆ.

‘ಪುಲ್ವಾಮಾ ದಾಳಿಗೆ ಸಂಬಂಧಿಸಿ ನೀವು ಕೊಟ್ಟಿರುವ ಪ್ರಾಥಮಿಕ ಮಾಹಿತಿಗಳನ್ನು ಮತ್ತು ಕೆಲವು ಪ್ರಶ್ನಾವಳಿಗಳನ್ನು ನಾವು ಪರಿಶೀಲಿಸಿದ್ದೇವೆ; ನೀವು ಗುರುತು ಹಾಕಿ ಕೊಟ್ಟಿರುವ ನಮ್ಮಲ್ಲಿನ 22 ತಾಣಗಳಲ್ಲಿ ಯಾವುದೇ ಉಗ್ರ ಶಿಬಿರಗಳು ಇಲ್ಲದಿರುವುದನ್ನು ಮತ್ತು ಪುಲ್ವಾಮಾ ದಾಳಿ ಸಂಬಂಧ ನಾವು ಬಂಧಿಸಿರುವ 54 ಶಂಕಿತರಿಗೂ ಪುಲ್ವಾಮಾ ದಾಳಿಗೂ ಯಾವುದೇ ನಂಟು ಇಲ್ಲದಿರುವುದನ್ನು ತನಿಖೆಯಿಂದ ಕಂಡುಕೊಂಡಿದ್ದೇವೆ. ನಿಮ್ಮ ದಾಖಲೆ ಪತ್ರಗಳಲ್ಲಿ ಉಲ್ಲೇಖೀಸಲಾಗಿರುವ ಸಾಮಾಜಿಕ ಮಾಧ್ಯಮಗಳ ಹೂರಣ ಮತ್ತು ತಾಂತ್ರಿಕ ಅಂಶಗಳ ಆಧಾರದಲ್ಲೂ ನಾವು ತನಿಖೆ ನಡೆಸಿದ್ದೇವೆ; ಈ ಎಲ್ಲ ವಿಷಯಗಳನ್ನು ನಾವು ಇಸ್ಲಾಮಾಬಾದ್‌ ನಲ್ಲಿರುವ ನಿಮ್ಮ ದೂತಾವಾಸದ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದೇವೆ ಎಂದು ಪಾಕ್‌ ವಿದೇಶ ಕಾರ್ಯಾಲಯ ಹೇಳಿದೆ.

ಕಳೆದ ಫೆ.14ರಂದು 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆಯಲಾದ ಪುಲ್ವಾಮಾ ಉಗ್ರ ದಾಳಿಯನ್ನು ಅನುಸರಿಸಿ ಭಾರತ ಆರು ಭಾಗಗಳಿರುವ 91 ಪುಟಗಳ ತನಿಖೆ ಕಡತವನ್ನು ಪಾಕಿಸ್ಥಾನಕ್ಕೆ “ಉಗ್ರ ನಿಗ್ರಹ ಕ್ರಮ’ಕ್ಕಾಗಿ ಒಪ್ಪಿಸಿತ್ತು.

‘ಪುಲ್ವಾಮಾ ಸಂಬಂಧಿತ ನಿಮ್ಮ ಕಡತದ ಭಾಗ 2 ಮತ್ತು 3 ಮಾತ್ರವೇ ಪುಲ್ವಾಮಾ ದಾಳಿಗೆ ಸಂಬಂಧಿಸಿದ್ದಾಗಿದ್ದು ಉಳಿದ ಭಾಗಗಳು, ಭಯೋತ್ಪಾದನೆ ಕುರಿತ ಸಾಮಾನ್ಯ ಅಭಿಪ್ರಾಯಗಳನ್ನು ಒಳಗೊಂಡಿವೆ’ ಎಂದು ಪಾಕ್‌ ವಿದೇಶ ಕಾರ್ಯಾಲಯ ಭಾರತಕ್ಕೆ ಹೇಳಿದೆ.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

Pak 2

Pakistan; ಈಗ ಯೋಗ ತರಬೇತಿ ಅಧಿಕೃತವಾಗಿ ಆರಂಭ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: 3 ಭಾರತೀಯರನ್ನು ಬಂಧಿಸಿದ ಕೆನಡಾ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ

Chandra

China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.