ನೀರವ್ ಮೋದಿ, ಮಲ್ಯ, ಚೋಕ್ಸಿ ದೇಶ ಬಿಟ್ಟಿದ್ದು ಚೌಕಿದಾರ್ನಿಂದಾಗಿ : ಸಿಂಗ್
Team Udayavani, Apr 5, 2019, 9:39 AM IST
ಹೊಸದಿಲ್ಲಿ : ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ದೇಶ ಬಿಟ್ಟು ಪಲಾಯನ ಮಾಡಿದ್ದು ಜಾಗೃತ ಚೌಕಿದಾರ್ನಿಂದಾಗಿ ಎಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು ಹೇಳಿದ್ದಾರೆ.
ಎಎನ್ಐ ವರದಿಯಂತೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಡಿದ ಅವರು ಕಾಂಗ್ರೆಸ್ ಸರ್ಕಾರ ವಿರುವ ವರೆಗೆ ನೀರವ್, ಮಲ್ಯ ಮತ್ತು ಚೋಕ್ಸಿ ದೇಶ ಬಿಟ್ಟಿರಲಿಲ್ಲ. ಯಾವಾಗ ಜಾಗೃತ ಚೌಕಿದಾರ್ ಬಂದರೋ (ನರೇಂದ್ರ ಮೋದಿ ) ಅವರೆಲ್ಲಾ ದೇಶ ಬಿಟ್ಟರು ಎಂದಿದ್ದಾರೆ.
ಮೂವರೂ ದೇಶ ಬಿಟ್ಟು ಹೋಗಲು ಪ್ರಧಾನಿ ನರೇಂದ್ರ ಮೋದಿ ಸಹಕರಿಸಿದ್ದಾರೆ ಎಂಬ ಆರೋಪವಿದೆ. ಆದರೆ ಈ ವಿಚಾರವನ್ನು ಗಮನವಿಟ್ಟು ಕೇಳಿ.. ಸಾರ್ವಜನಿಕರಿಗೆ 18 ಲಕ್ಷ ಕೋಟಿ ರೂಪಾಯಿ ಸಾಲವನ್ನು 1947 ರಿಂದ 2008 ರ ವರೆಗೆ ನೀಡಲಾಗಿದೆ.ಕಾಂಗ್ರೆಸ್ ಆಡಳಿತವಿದ್ದ 2008 ರಿಂದ 2014 ರ ವರೆಗೆ 52 ಲಕ್ಷ ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ ಎಂದು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ