ಮನೆಮನ ತಂಪಾಗಿಸಲು ಕೂಲರ್‌, ಟವರ್‌ ಫ್ಯಾನ್‌ಗಳತ್ತ ಜನರ ಚಿತ್ತ


Team Udayavani, Apr 5, 2019, 4:22 PM IST

AC-05
ಬಿಸಿಲಿನ ಧಗೆ ಹೆಚ್ಚಾದಂತೆ ಮನೆಯಲ್ಲೊಂದು ಎಸಿ ಇದ್ದರೆ ಚೆನ್ನಾಗಿ ಇತ್ತು ಎಂಬ ಮಾತು ಎಲ್ಲರ ಮನದಲ್ಲೂ  ತಂಪು ಗಾಳಿಯಂತೆ ಬೀಸುತ್ತಿರುತ್ತದೆ.  ಆದರೆ ಎಸಿ ತುಂಬಾ ದುಬಾರಿ. ಹೀಗಾಗಿ ಎಸಿಗೆ ಪರ್ಯಾಯವಾಗಿ ಏನಿದೇ ಎಂದು ಮಾರುಕಟ್ಟೆಯತ್ತ ತೆರಳಿದರೆ ಸಿಗುವುದು ತಂಪುತಂಪು ನೀಡುವ ಕೂಲರ್‌ ಮತ್ತು ಟವರ್‌
ಫ್ಯಾನ್‌ಗಳು. ಕೈಗೆಟಕುವ ದರದಲ್ಲಿ ಚಿತ್ತಾಕರ್ಷಕ ವಿನ್ಯಾಸದಲ್ಲಿ ಲಭ್ಯವಿರುವ ಇವು ಎಲ್ಲರ ಮನಗೆದ್ದಿವೆ.
ಬಿಸಿಲಿನ ಧಗೆ ಹೆಚ್ಚುತ್ತಿದೆ. ತಂಪಾದ ಗಾಳಿ ಮರುಭೂಮಿಯ ಓಯಸಿಸ್‌ನಂತಾಗಿದೆ. ಮರಗಿಡಗಳೇ ಇಲ್ಲದ ನಗರ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಬಿಸಲಿನ ತಾಪ ಜೋರಾಗಿರುವುದು ಸಾಮಾನ್ಯ ಎಂದರೂ ಈ ಬಾರಿ ಮಾತ್ರ ತೀವ್ರ ಹೆಚ್ಚಳಗೊಂಡಂತಿದೆ. ಕೇವಲ ನಗರದಲ್ಲಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲಿಯೂ ಸುಡು ಬಿಸಿಲಿನ ಪ್ರಖರತೆ ಜೀವ ಹಿಂಡುವಂತಿದೆ.
ಬಿಸಿಲಿನ ಕಾವು ಹೆಚ್ಚಾದಾಗ, ದೇಹ ತಂಪಾಗಿಸಲು ಮೊರೆ ಹೋಗುವುದು  ಫ್ಯಾನ್‌ಗೆ. ಗ್ರಾಮೀಣ ಭಾಗದಲ್ಲಾದರೆ  ಫ್ಯಾನ್‌ ಹಾಕಿ ಸಿಮೆಂಟ್‌ ನೆಲದಲ್ಲಿ ಒಂದಷ್ಟು ಹೊತ್ತು ಮಲಗಿದರೆ ದೇಹ ತಂಪಾಗುತ್ತದೆ. ಆದರೆ ನಗರದ ಟೈಲ್ಸ್‌ ಅಳವಡಿಸಿದ ನೆಲ, ತಾರಸಿ ಕಟ್ಟಡದಲ್ಲಿ ಅಂತಹ ತಂಪೆಲ್ಲಿದೆ? ಆದರೆ ಸುಡು ಬಿಸಲಿನಿಂದ ದೇಹವನ್ನು ಒಂದಷ್ಟು ಹೊತ್ತು ತಂಪು ಮಾಡಿಕೊಳ್ಳೋಣವೆಂದರೆ, ಸಾಮಾನ್ಯ ಫ್ಯಾನ್‌ನಿಂದಲೂ ಬರುವುದು ಬಿಸಿ ಗಾಳಿಯೇ!
ಮೊದಲೆಲ್ಲ ಟೇಬಲ್‌ ಫ್ಯಾನ್‌, ಸೀಲಿಂಗ್‌ ಫ್ಯಾನ್‌ ಇದ್ದರೆ ತಂಪಿಗೆ ಕೊರತೆ ಇರಲಿಲ್ಲ. ಆದರೀಗ, ಫ್ಯಾನ್‌ನಿಂದ ಬರುವ ಬಿಸಿಗಾಳಿ ಮೈಯನ್ನು ಬೆವರಿನಲ್ಲಿ ತೋಯುವಂತೆ ಮಾಡುತ್ತಿದೆ. ಅದಕ್ಕಾಗಿ ಮೊರೆ ಹೋಗುವುದು ದೇಹಕ್ಕೆ ತಂಪು ನೀಡುವ ಕೂಲರ್‌ ಮತ್ತು ಟವರ್‌ ಫ್ಯಾನ್‌ಗಳಿಗೆ.
ಹೆಚ್ಚಿದ ಬೇಡಿಕೆ
ಹೇಳಿಕೇಳಿ ಮಂಗಳೂರು ಅತಿ ತಾಪಮಾನವುಳ್ಳ ನಗರ. ಇಲ್ಲಿ ಬೇಸಗೆ ಮಾತ್ರವಲ್ಲ; ಮಳೆ, ಚಳಿಗಾಲದಲ್ಲಿಯೂ ಸೆಕೆಯ ಅನುಭವ ಆಗುತ್ತಲೇ ಇರುತ್ತದೆ. ಅದಕ್ಕಾಗಿ ಜನ ಫ್ಯಾನ್‌ ಬದಲಾಗಿ ಕೂಲರ್‌ ಅಥವಾ ಟವರ್‌ ಫ್ಯಾನ್‌ನ ಮೊರೆ ಹೋಗಿದ್ದಾರೆ. ಕಳೆದ ಒಂದೆರಡು ವರ್ಷಗಳಿಂದೀಚೆಗೆ ಟವರ್‌ ಫ್ಯಾನ್‌ಗೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಬೇಸಗೆಯಲ್ಲಂತೂ ಟವರ್‌ ಫ್ಯಾನ್‌ಗೆ ಬೇಡಿಕೆ ಕುದುರಿದೆ ಎನ್ನುತ್ತಾರೆ ನಗರದ ವಿವಿಧ ಎಲೆಕ್ಟ್ರಾನಿಕ್ಸ್‌ ಮಳಿಗೆಗಳ ಸಿಬಂದಿ.
ಅಗ್ಗದ ದರಕ್ಕೆ ಕೂಲರ್‌  
ಸೆಕೆಯಿಂದ ರಕ್ಷಿಸಿಕೊಳ್ಳಲು ಮನೆಯ ರೂಮ್‌ಗೆ ಹವಾನಿಯಂತ್ರಿತ ಉಪಕರಣ ಅಳವಡಿಸುವುದು ಉಳ್ಳವರ ಮನೆಯ ಮಾತು. ಆದರೆ ಮಧ್ಯಮ ವರ್ಗ ಮತ್ತು ಬಡ ವರ್ಗದ ಮನೆ ಮಂದಿಯ ಕತೆಯೇನು?  20- 30 ಸಾವಿರ ರೂ. ಖರ್ಚು ಮಾಡಿ ಹವಾನಿಯಂತ್ರಿತ ಉಪಕರಣವನ್ನು ಅಳವಡಿಸುವುದೆಲ್ಲ ಅವರಿಗೆ ಸಾಧ್ಯವಾಗದ ಮಾತು. ಹೀಗಿದ್ದಾಗ, ಈ ವರ್ಗದವರು ಮಾತ್ರವಲ್ಲ ಅತಿ ಶ್ರೀಮಂತ ವರ್ಗದವರು ಕೂಡ ಮೊರೆ ಹೋಗುವುದು ಕೂಲರ್‌ ಮತ್ತು ಟವರ್‌ ಫ್ಯಾನ್‌ಗೆ. ಎಲ್ಲ ವರ್ಗದ ಮನೆಯವರಿಗೂ ಬಿಸಿಲಿನ ಪ್ರಖರತೆಯಿಂದ ರಕ್ಷಣೆ ನೀಡುವ ಆತ್ಮೀಯ ಸ್ನೇಹಿತನಾಗಿ ಕೂಲರ್‌ ಮತ್ತು ಟವರ್‌ ಫ್ಯಾನ್‌ಗಳು ಮನೆ ತುಂಬಿಕೊಂಡಿವೆ. ಕೂಲರ್‌ ಮತ್ತು ಟವರ್‌ ಫ್ಯಾನ್‌ನಲ್ಲಿ ವಿವಿಧ ಗಾತ್ರದವುಗಳಿದ್ದು, 2,500 ರೂ. ಗಳಿಂದ ಬೆಲೆ ಆರಂಭವಾಗುತ್ತದೆ.
 ಎಸಿಯಷ್ಟೇ ತಂಪು
ಮನೆಯಲ್ಲಿ ಬೇಕಾದಷ್ಟು ನೀರಿದ್ದರಾಯಿತು. ನೀರು ಹಾಕಿದರೆ ಎಸಿಯಷ್ಟೇ ತಂಪಾಗಿಸುವ ಕೂಲರ್‌ಗೆ ಬೆಲೆಯೂ ಕಡಿಮೆ. ಪ್ರತಿ ಕೂಲರ್‌ಗೂ ಎಷ್ಟು ಲೀಟರ್‌ ನೀರು ಸುರಿಯಬೇಕು ಎಂಬ ನಿಯಮವಿದೆ. ಸಣ್ಣ ಕೂಲರ್‌ಗಳಿಗೆ ಕಡಿಮೆ, ಹೆಚ್ಚು ಲೀಟರ್‌ ಸಾಮರ್ಥ್ಯದ ಕೂಲರ್‌ಗಳಿಗೆ ಹೆಚ್ಚು ನೀರು ಹಾಕಿದರೆ ಎಸಿಯಷ್ಟೇ ತಂಪಾಗಿಸುವುದರೊಂದಿಗೆ ನೆಮ್ಮದಿಯ ನಿದ್ದೆಯನ್ನು ನೀಡುತ್ತದೆ. ಟವರ್‌ ಫ್ಯಾನ್‌ಗೆ ನೀರು ಹಾಕಬೇಕಾದ ಅವಶ್ಯವಿಲ್ಲ; ಇದರಲ್ಲಿ ಫ್ಯಾನ್‌ಗಿಂತ ಹೆಚ್ಚು ಗಾಳಿ ಸೋಕಿ, ದೇಹ ತಂಪಾಗುವಂತೆ ಮಾಡುತ್ತದೆ.
ಉತ್ತಮ ಬೇಡಿಕೆ
ಮಂಗಳೂರಿನಲ್ಲಿ ಕಳೆದೆರಡು ವರ್ಷಗಳಿಂದೀಚೆಗೆ ಕೂಲರ್‌ ಮತ್ತು ಟವರ್‌ ಫ್ಯಾನ್‌ಗೆ ಬೇಡಿಕೆ ಜಾಸ್ತಿಯಾಗಿದೆ. ಈ ವರ್ಷ ಉತ್ತಮ ಬೇಡಿಕೆ ಇದೆ. ಈಗಿನ ಸೆಕೆ, ಬಿಸಿಲಿನ ಪ್ರಖರತೆಯಿಂದ ರಕ್ಷಿಸಿಕೊಳ್ಳಲು ಕೂಲರ್‌ನ್ನು ಜನ ಇಷ್ಟ ಪಡುತ್ತಾರೆ ಎನ್ನುತ್ತಾರೆ ನಗರದ ಎಲೆಕ್ಟ್ರಾನಿಕ್ಸ್‌ ಮಳಿಗೊಂದರ ಮ್ಯಾನೇಜರ್‌ ಶಬರೀಶ್‌.
ಕೂಲರ್‌, ಟವರ್‌ ಫ್ಯಾನ್‌  ಖರೀದಿಗೆ ಹೆಚ್ಚಿನ ಒಲವು
ಮಂಗಳೂರಿನಲ್ಲಿ ಕಳೆದೆರಡು ವರ್ಷಗಳಿಂದ, ಅದರಲ್ಲೂ ಈ ವರ್ಷ ಸೆಕೆ ಜಾಸ್ತಿ ಇದೆ. ಅದಕ್ಕಾಗಿ ಜನ ಕೂಲರ್‌, ಟವರ್‌ ಫ್ಯಾನ್‌ ಖರೀದಿಗೆ ಹೆಚ್ಚು ಆಸಕ್ತರಾಗಿದ್ದಾರೆ. ಈಗ ಆಫರ್‌ಗಳೂ ಲಭ್ಯವಿರುವುದರಿಂದ ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ ಎಲೆಕ್ಟ್ರಾನಿಕ್ಸ್‌ ಸಂಸ್ಥೆಯೊಂದರ ಸಿಬಂದಿ ನಿಶಾಂತ್‌.
   ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.