ಮೋದಿಯವರಿಗಿದೆ ಜನ ಬೆಂಬಲ: ದೇವೇಂದ್ರಪ್ಪ
ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿಬಳ್ಳಾರಿ ನಗರದ ವಿವಿಧೆಡೆ ಮತಯಾಚನೆ
Team Udayavani, Apr 8, 2019, 4:57 PM IST
ಹೊಸಪೇಟೆ: ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿ ಕ್ಷಣ ಹೋರಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಕೆ ಜನರು ಬೆಂಬಲಿಸುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಹೇಳಿದರು.
ಲೋಕಸಭಾ ಚುನಾವಣೆ ನಿಮಿತ್ತ ನಗರದ ವಿವಿಧ ಪ್ರದೇ ಶ ದಲ್ಲಿ ಭಾನುವಾರ ಮತ ಪ್ರಚಾರ ನಡೆಸಿ ಮಾತ ನಾ ಡಿದ ಅವರು, ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರದ ಭಾವೈಕ್ಯತೆ
ಉಳಿಸುವ ವ್ಯಕ್ತಿಯನ್ನು ಬೆಂಬಲಿಸುವಂತೆ ಶಪತ ಮಾಡಿದ್ದಾರೆ. ಬಳ್ಳಾರಿಯಿಂದ ನಾನು ಗೆದ್ದು, ರಾಷ್ಟ್ರದ ಉಳುವಿಗಾಗಿ ನರೇಂದ್ರ
ಮೋದಿಯವರ ಕೈ ಬಲ ಪಡಿಸುತ್ತೇನೆ ಎಂದರು.
ಜನ ಸಾಮಾನ್ಯರು, ವೃದ್ಧರು, ವರ್ತಕರು, ಕಾರ್ಮಿಕರು, ವಿದ್ಯಾರ್ಥಿಗಳು, ರೈತರು ಸೇರಿ ಎಲ್ಲ ವರ್ಗದವರು ನರೇಂದ್ರ ಮೋದಿಯವರ ಸಾಧನೆಯನ್ನು ಒಪ್ಪಿದ್ದಾರೆ. ಜತೆಗೆ ಬಳ್ಳಾರಿಯ ಮತದಾದರು ಬುದ್ಧಿಜೀವಿಗಳಿದ್ದು, ದೇಶವನ್ನು ಲೂಟಿ ಹೊಡೆಯುವ ಸುಳ್ಳರ ಪಕ್ಷ ಕಾಂಗ್ರೆಸ್ಗೆ ಮತ ನೀಡುವುದಿಲ್ಲ ಎಂಬ
ವಿಶ್ವಾಸ ಇದೆ. ಈಗಾಗಲೆ ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಸಂಘಟಿಸಿದ್ದು, ಈ ಚುನಾವಣೆಯಲ್ಲಿ ಮತ ಕೇಳಲು ಅನುಕೂಲವಾಗಿದೆ ಎಂದರು.
ಎಪಿಎಂಸಿ ಮಾರುಕಟ್ಟೆ, ಕಾಲೇಜ್ ಮೈದಾನ, ನಾಗಪ್ಪ
ಕಟ್ಟೆ ಸೇರಿ ಹಲವು ವಾರ್ಡ್ಗಳಲ್ಲಿ ಪ್ರಚಾರ ನಡೆಸಿದರು. ಮುಖಂಡರಾದ ಅನಂತ ಪದ್ಮನಾಭ, ಕಟಗಿ ರಾಮಕೃಷ್ಣ, ಗುದ್ಲಿ ಪರಶುರಾಮ್, ದೇವರಾಜ್ ಹನುವಾಳ್, ಚಂದ್ರಕಾಂತ್ ಕಾಮತ್, ಮಧುಸೂದನ್, ಸಂತೋಷ್, ಶಂಕರ್ ಮೇಟಿ, ಬಸವರಾಜ್ ನಲತ್ವಾಡ್, ಗುಂಡಿ ರಾಘವೇಂದ್ರ, ಸೂರಿ ಬಂಗಾರು, ಬಂಡಿ ಸಂತೋಷ್ ಇತರರಿದ್ದರು.