ಬೇಸಗೆಯ ದಣಿವಾರಿಸುವ,ನಿರ್ಜಲೀಕರಣ ನಿವಾರಿಸುವ ಜೀವಾಮೃತ ಸೀಯಾಳ

ವರ್ಷಪೂರ್ತಿ ದೊರಕುವ ಏಕೈಕ ಫಲ

Team Udayavani, Apr 12, 2019, 6:30 AM IST

coconut-water

ವಿದ್ಯಾನಗರ,ಎ.11: ಕಲ್ಪವೃಕ್ಷ ಎಂದು ಹೆಸರು ಪಡೆದಿರುವ ತೆಂಗಿನ ಮರದ ಉಪಯೋಗವನ್ನು ಅರಿತ ನಮ್ಮ ಹಿರಿಯರು ಪ್ರತಿ ಮನೆ ಮನೆಯಲ್ಲೂ ತೆಂಗಿನ ಮರ ನೆಟ್ಟ ಕಾರಣ ಇಂದು ಭಾರತಾದ್ಯಂತ ಎಲ್ಲ ಕಾಲದಲ್ಲೂ ಜನರ ಅಗತ್ಯವನ್ನು ಪೂರೈಸುವ ಅಕ್ಷಯಪಾತ್ರೆಯಾಗಿ ಇವುಗಳು ಆವರಿಸಿಕೊಂಡಿವೆ. ಬಹಳ ಉಪಯೋಗಪ್ರದವಾದ ತೆಂಗಿನ ಮರದ ತೆಂಗಿನ ಹೂವು, ಕಾಯಿ, ಗರಿ, ಕಾಂಡಗಳು ಸೇರಿದಂತೆ ಪ್ರತಿಯೊಂದು ಭಾಗವೂ ಅಮೂಲ್ಯ. ಅದರಲ್ಲೂ ಪೂರ್ಣ ಬಲಿತಿಲ್ಲದ, ಹೆಚ್ಚು ನೀರನ್ನೇ ಹೊಂದಿರುವ ಎಳನೀರು ಒಂದು ನೈಸರ್ಗಿಕ ಪಾನೀಯವಾಗಿ ಸರ್ವರೋಗವನ್ನೂ ನಿವಾರಿಸುವ ಪನ್ನೀರಾಗಿ ಮನೆಮಾತಾಗಿದೆ.

ಪೋಷಕಾಂಶಗಳ ಆಗರವಾಗಿರುವ ಸೀಯಾಳ ವರ್ಷ ಪೂರ್ತಿ ದೊರಕುವ ಏಕೈಕ ಫಲ. ನವಿರಾದ ಸಿಹಿ ಹಾಗೂ ಬಹಳಷ್ಟು ಪೋಷಕಾಂಶಗಳ ಮೂಲಕ ದೇಹದ ದಣಿವನ್ನು ಶೀಘ್ರವಾಗಿ ನಿವಾರಿಸಿ ಪೂರ್ಣ ಕ್ಷಮತೆಯನ್ನು ನೀಡಿ ದೇಹವನ್ನು ಬಲಗೊಳಿಸುತ್ತದೆ.

ದೇಹಕ್ಕೆ ಅಗತ್ಯವಾದ ಖನಿಜ, ಲವಣ, ಸಕ್ಕರೆಯ ಅಂಶಗಳು ನಮ್ಮ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇರುವ ಸೀಯಾಳ ಅಮƒತ ಸಮಾನವಾದ ಪಾನೀಯ. ಜೀವಕೋಶಗಳ ಸಮರ್ಪಕ ಬೆಳವಣಿಗೆ, ನಿಯಂತ್ರಣ ಮಾತ್ರವಲ್ಲದೆ ದೇಹವನ್ನು ಕ್ಯಾನ್ಸರ್‌ನಿಂದ ತಡೆಯಬಲ್ಲ ಎಳನೀರು ಜೀವರಾಸಾಯನಿಕ ಕ್ರಿಯೆಗಳನ್ನೂ ಹೆಚ್ಚಿಸುತ್ತದೆ.

ಬೇಸಗೆಯಲ್ಲಿ ಬಾರೀ ಡಿಮ್ಯಾಂಡ್‌
ಬೇಸಗೆ ಕಾಲದಲ್ಲಿ ನಿರ್ಜಲಿಕರಣದಿಂದ ಎದುರಾಗುವ ನಿಶ್ಶಕ್ತಿಗೆ ಸೀಯಾಳ ಬಹಳ ಉಪಯುಕ್ತ ಔಷ ಧ. ಆದುದರಿಂದಲೇ ಬಿಸಿಲ ಧಗೆ ತಣಿಸುವ ಎಳನೀರಿಗೆ ಬೇಡಿಕೆ ಜಾಸ್ತಿ. ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಹೆಚ್ಚಾಗುತ್ತಿದ್ದು ಧಗೆ ತಣಿಸಲು ಜನರು ತಂಪು ಪಾನೀಯಗಳಿಗಿಂತಲೂ ಎಳನೀರಿಗೆ ಮೊರೆ ಹೋಗುತ್ತಾರೆ. ಸುಲಭವಾಗಿ ಸಿಗುವ ಸೀಯಾಳಕ್ಕೆ ಸಧ್ಯದ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ.

ಕೆಲವು ಕಡೆಗಳಲ್ಲಿ ಕೃಷಿಕರು ನೇರವಾಗಿ ಮಾರುಕಟ್ಟೆಗೆ ಸೀಯಾಳ ತಂದು ಅಂಗಡಿಗಳಿಗೆ ಮಾರಾಟ ಮಾಡಿದರೆ ಇನ್ನು ಕೆಲವೆಡೆಗಳಲ್ಲಿ ತಾವೇ ರಸ್ತೆ ಬದಿಯಲ್ಲಿ ತೆರೆದ ವಾಹನದಲ್ಲೋ, ರಾಶಿ ಹಾಕಿಯೋ ಮಾರಾಟ ಮಾಡುವುದನ್ನು ಕಾಣಬಹುದು. ಆದರೆ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುವುದು ವಿರಳ.

ಕೆಲವೊಮ್ಮೆ ಮಾರಾಟಗಾರರು ನೇರವಾಗಿ ರೈತರ ತೋಟಗಳಿಗೆ ಹೋಗಿ ಸೀಯಾಳ ಖರೀದಿ ಮಾಡುತ್ತಾರೆ. ಎಳೆನೀರು ಮರದಿಂದ ಇಳಿಸುವ ಕೆಲಸದಾಳುಗವಳ ಕೊರತೆಯಿಂದ ಇದರ ಪೂರೈಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನ್ನುವ ಮಾತು ವ್ಯಾಪಾರಿಗಳಿಂದ ಕೇಳಿಬರುತ್ತಿದೆ. ಕರ್ನಾಟಕದಿಂದಲೂ ಹೆಚ್ಚು ಪ್ರಮಾಣದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಗೆ ಎಳನೀರು ಪೂರೈಕೆಯಾಗುತ್ತಿದೆ.

ಸೀಯಾಳ ಜ್ಯೂಸ್‌
ಸೀಯಾಳದಿಂದ ತಯಾರಿಸಿದ ಪಾನೀಯಕ್ಕೆ ಅತ್ಯಂತ ಬೇಡಿಕೆಯಿದ್ದು ಅಲ್ಲಲ್ಲಿ ಎಳೆನೀರು ಜ್ಯೂಸ್‌ ಸ್ಟಾಲ್‌ಗ‌ಳು ತಲೆಯಿತ್ತಿವೆ. ಯಾವುದೇ ರೀತಿಯ ಬಣ್ಣ ಮುಂತಾದ ರಾಸಾಯನಿಕಗಳಂತಹ ಕಲಬೆರಕೆಯಾಗಲಿ ಇಲ್ಲದ ಎಳೆನೀರು ಜ್ಯೂಸ್‌ ಅತ್ಯಂತ ರುಚಿಕರ ಹಾಗೂ ಆರೋಗ್ಯದಾಯಕ ಪಾನೀಯ.

ಎಳೆನೀರು ಐಸ್‌ಕ್ರೀಮ್‌
ಮಾರುಕಟ್ಟೆಯಲ್ಲಿ ಎಳನೀರು ಐಸ್‌ಕ್ರೀಮ್‌ ಕೂಡಾ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಅತ್ಯಂತ ಹೆಚ್ಚು ಬೇಡಿಕೆಯಿರುವ ಫ್ಲೆàವರ್‌ಗಳಲ್ಲಿ ಟೆಂಡರ್‌ ಕೋಕೊನಟ್‌ ಐಸ್‌ಕ್ರೀಂ ಕೂಡಾ ಸೇರಿದೆ.

ಎಲ್ಲ ಕಾರ್ಯಕ್ಕೂ ಸೀಯಾಳ ಅಗತ್ಯ
ಯಾವುದೇ ಶುಭ ಸಮಾರಂಭವಾಗಲಿ ಅಥವಾ ಇನ್ನಿತರ ಉತ್ಸವ, ಆಚರಣೆಗಳಾಗಲಿ ಎಳನೀರು ಬೇಕೇ ಬೇಕು. ದೇವಸ್ಥಾನ, ದೆ„ವಸ್ಥಾನ, ಮದುವೆ ಹೀಗೆ ಸೀಯಾಳವಿಲ್ಲದೆ ಯಾವುದೇ ಕಾರ್ಯ ನಡೆಯುವುದಿಲ್ಲ. ಪವಿತ್ರವಾದ ಕಲ್ಪವೃಕ್ಷದ ಫಲಕ್ಕಿರುವ ಮಹತ್ವ ಅಪಾರವಾದುದು.

ದರ ಏರಿಕೆಯಿಂದ ಎಳನೀರು ಪೂರೈಕೆಯಲ್ಲಿ ಸಣ° ವ್ಯತ್ಯಯ ಉಂಟಾಗಿದೆ. ಆದರೆ ಬಿಸಿಲಿನ ಧಗೆಯಿಂದಾಗಿ ಬೇಡಿಕೆಯೂ ಹೆಚ್ಚಾಗಿದೆ. ದಿನವೊಂದಕ್ಕೆ ಕಡಿಮೆಯೆಂದರೂ 200 ಸಿಯಾಳ ಮಾರಾಟವಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

ತೆಂಗಿನ ಮರದೆತ್ತರಕ್ಕೇರಿದ ಬೆಲೆ
ಸುಡು ಬಿಸಿಲಿನಂತೆ ಸೀಯಾಳದ ಬೆಲೆಯೂ ಗಗನಕ್ಕೇರುತ್ತಿದೆ. 20-25 ರೂ. ಇದ್ದ ಸೀಯಾಳಕ್ಕೀಗ 30-40ರೂ ಬೆಲೆಯಿದೆಯಾದರೂ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಪೇಟೆ ಪಟ್ಟಣಗಳಲ್ಲಿ ರಸ್ತೆ ಬದಿಯಲ್ಲಿ ಸೀಯಾಳವನ್ನು ರಾಶಿ ಹಾಕಿ ಮಾರಾಟ ಮಾಡುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಮಾತ್ರವಲ್ಲದೆ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ. ಒಂದೆಡೆ ಬೆಲೆ ಏರಿಕೆಯಿಂದ ರೈತರಿಗೆ ಲಾಭವಾಗಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.