ವರುಣ್‌ ಗಾಂಧಿಗೆ ದಕ್ಕೀತೇ ಫಿಲಿಭಿತ್‌?


Team Udayavani, Apr 22, 2019, 6:05 AM IST

MENAKA

ಹಾಲಿ ಸಂಸದೆ, ಕೇಂದ್ರ ಸಚಿವೆ ಮನೇಕಾ ಗಾಂಧಿಯವರ ಅಖಾಡವಾಗಿರುವ ಉತ್ತರ ಪ್ರದೇಶದ ಫಿಲಿಭಿತ್‌ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಯನ್ನು ಬದಲು ಮಾಡಲಾಗಿದೆ. ಮನೇಕಾ ಗಾಂಧಿ ಬದಲಾಗಿ ಪುತ್ರ ವರುಣ್‌ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಮನೇಕಾ ಗಾಂಧಿಯವರು ಫಿಲಿಬಿತ್‌ಗೆ ಸಮೀಪವಿರುವ ಸುಲ್ತಾನ್‌ಪುರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

1989, 1996, 1998, 1999, 2004ರಲ್ಲಿ ಮನೇಕಾ ಗಾಂಧಿಯವರು ಜನತಾ ದಳ, ಸ್ವತಂತ್ರ, ಬಿಜೆಪಿ ಅಭ್ಯರ್ಥಿಯಾಗಿ ಫಿಲಿಬಿತ್‌ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಈ ರೀತಿಯ ಕ್ಷೇತ್ರ ಬದಲಾವಣೆ ಬಿಜೆಪಿಯ ಸ್ಥಳೀಯ ನಾಯಕರಲ್ಲಿ ಸಂತೋಷ ತಂದಿಲ್ಲ. ಮನೇಕಾ ಮತ್ತು ವರುಣ್‌ ಗಾಂಧಿ ಹೊರಗಿನವರು ಎಂಬ ಭಾವನೆ ಅವರಲ್ಲಿದೆ.

ಕರ್ನಾಟಕದ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಹೆಸರಿನಲ್ಲಿ ನಾಲ್ವರು ಸ್ಪರ್ಧಿಸಿದ್ದಂತೆ ಇಲ್ಲಿಯೂ ಕೂಡ ವರುಣ್‌ ಗಾಂಧಿ ವಿರುದ್ಧ ಹರ್ಯಾಣದ ರೇವಾರಿಯಿಂದ ಮತ್ತೂಬ್ಬ ವರುಣ್‌ ಗಾಂಧಿಯೂ ಬಿಜೆಪಿ ಅಭ್ಯರ್ಥಿಗೆ ಸವಾಲೊಡ್ಡುತ್ತಿದ್ದಾರೆ. ಈ ಮೂಲಕ ಮತ ವಿಭಜನೆಯ ಪ್ರಯತ್ನ ನಡೆದಿದೆ. ಈ ಬಾರಿ ಎಸ್‌ಪಿ ಮತ್ತು ಬಿಎಸ್‌ಪಿ ಜತೆಗೂಡಿ ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಿಸುತ್ತಿವೆ. ಹೀಗಾಗಿ, ಬಿಎಸ್‌ಪಿಗೆ ನೀಡಬೇಕಾಗಿರುವ ಮತಗಳು, ಎಸ್‌ಪಿ ಅಭ್ಯರ್ಥಿಗೆ ಹೋಗಲಿ ರುವುದು ಖಚಿತ. ಇದು ಅವರಿಗೆ ಪ್ರತಿಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದಶಕ ಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಿದ್ದರೂ, ಅಭಿವೃದ್ಧಿಯ ಕಾಮಗಾರಿಗಳು ಆಗಿಲ್ಲ ಎನ್ನುತ್ತಿವೆ ವಿಪ ಕ್ಷಗಳು. ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆಯೇ ಹೆಚ್ಚಿನ ಪ್ರಮಾ ಣದಲ್ಲಿ ಕಾಡುತ್ತಿದೆ. ಸಮಾಜವಾದಿ ಪಕ್ಷದಿಂದ ಹೇಮ ರಾಜ್‌ ವರ್ಮಾ ವರುಣ್‌ರ ಪ್ರಮುಖ ಎದುರಾಳಿ.

ಅಮೇಠಿ, ರಾಯ್‌ಬರೇಲಿ ಬಳಿಕ ಸುಲ್ತಾನ್‌ಪುರ್‌ ಮತ್ತು ಫಿಲಿಭಿತ್‌ ಕೂಡ ಗಾಂಧಿ-ನೆಹರೂ ವಂಶದ ಮತ್ತೂಂದು ಕವಲು ಕುಟುಂಬವಾಗಿರುವ ಮನೇಕಾ, ವರುಣ್‌ರ ಪ್ರಭಾವಿ ಕ್ಷೇತ್ರವೆಂದು ವಿಶ್ಲೇಷಿಸಲಾಗುತ್ತಿದೆ. 1957, 1962, 1967ರ ಚುನಾವಣೆಯಲ್ಲಿ ಪ್ರಜಾ ಸೋಶಿಯಲಿಸ್ಟ್‌ ಪಕ್ಷ ಗೆದ್ದಿತ್ತು. 1989ರ ಬಳಿಕ ಮತ್ತೆ ಈ ಕ್ಷೇತ್ರದಲ್ಲಿ ಕಾಂಗ್ರೆಸೇತರ ಪಕ್ಷಗಳು ಗೆಲುವು ಸಾಧಿಸಲಾರಂಭಿಸಿದವು.

ಜಾತಿ ಲೆಕ್ಕಾಚಾರ ನೋಡುವುದಿದ್ದರೆ, ಲೋಧ್‌ ಸಮುದಾಯ 3 ಲಕ್ಷ, 2 ಲಕ್ಷ ಮಂದಿ ಎಸ್‌ಸಿ, 50 ಸಾವಿರ ಮಂದಿ ಯಾದವ ಸಮುದಾಯದ ಮತಗಳು ಇವೆ. ಜತೆಗೆ ಎರಡು ಲಕ್ಷದಷ್ಟು ಕುರ್ಮಿ ಜನಾಂಗದ ಮತಗಳೂ ಇವೆ.

2014ರ ಚುನಾವಣೆ
ಮನೇಕಾ ಗಾಂಧಿ (ಬಿಜೆಪಿ)
5,46, 934
ಬುದ್ಧ್ಸೇನ್‌ ವರ್ಮಾ (ಎಸ್‌ಪಿ)
2,39, 822

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಕ್ಷಾಂತರ, ಕುಟುಂಬ ರಾಜಕಾರಣದ ಕಂಟಕ: ಈ ಬಾರಿ ಮಮತಾಗೆ ಅಧಿಕಾರ ಕೈತಪ್ಪಲಿದೆಯೇ

ಪಕ್ಷಾಂತರ, ಕುಟುಂಬ ರಾಜಕಾರಣದ ಕಂಟಕ: ಈ ಬಾರಿ ಮಮತಾಗೆ ಅಧಿಕಾರ ಕೈತಪ್ಪಲಿದೆಯೇ?

vote

ದಕ್ಷಿಣ ಸಮರ ಕ್ಷಣ ರೋಚಕ ಕಣ

urmila

ತಾರಾ ವರ್ಚಸ್ಸಿನ 7 ಕ್ಷೇತ್ರಗಳು

parliment

ಕಣ ಕುತೂಹಲ ಕ್ಷಣ ರೋಚಕ: ಟಾಪ್‌ ಕ್ಷೇತ್ರಗಳ ಕಿರುನೋಟ

vote

ಕಣ ಕುತೂಹಲ ಕ್ಷಣ ರೋಚಕ 2019ರ ಲೋಕಸಭೆ ಚುನಾವಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.