ತಾಂತ್ರಿಕ ನೆರವು ಇದ್ದರೆ ಪಾಕ್ಗೆ ಇನ್ನಷ್ಟು ಹಾನಿ ಮಾಡಬಹುದಿತ್ತು
Team Udayavani, Apr 26, 2019, 5:55 AM IST
ಹೊಸದಿಲ್ಲಿ: ಒಂದು ವೇಳೆ ಭಾರತವು ತಾಂತ್ರಿಕವಾಗಿ ಸುಧಾರಿತವಾಗಿದ್ದಿದ್ದರೆ, ಬಾಲಕೋಟ್ ದಾಳಿಯ ಮರುದಿನ ನಡೆದ ಕಾದಾಟದಲ್ಲಿ ಪಾಕಿಸ್ಥಾನಕ್ಕೆ ಭಾರಿ ಹಾನಿ ಉಂಟುಮಾಡಬಹುದಿತ್ತು ಎಂದು ನೌಕಾಪಡೆಯ ವರದಿಯಲ್ಲಿ ಹೇಳಲಾಗಿದೆ. ಬಾಲಕೋಟ್ ದಾಳಿ ಹಾಗೂ ಅದರ ಮರುದಿನ ನಡೆದ ಘಟನೆಯ ಬಗ್ಗೆ ವಿಶ್ಲೇಷಣೆ ನಡೆಸಿದ ವರದಿಯಲ್ಲಿ ಈ ಮಹತ್ವದ ವಿವರಗಳನ್ನು ನೌಕಾಪಡೆ ಉಲ್ಲೇಖೀಸಿದೆ. 1999 ರಲ್ಲಿ ಕಾರ್ಗಿಲ್ ಯುದ್ಧದ ಅನಂತರ ಪಾಕಿಸ್ಥಾನ ನಿರಂತರವಾಗಿ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಹೀಗಾಗಿ ನಾವು ಪಾಕಿಸ್ಥಾನಕ್ಕೆ ಸೂಕ್ತ ಪಾಠ ಕಲಿಸಲು ಸಾಧ್ಯವಾಗಿಲ್ಲ. ನಮಗೆ ತಾಂತ್ರಿಕವಾಗಿ ಹೆಚ್ಚುಗಾರಿಕೆ ಅಗತ್ಯವಿದ್ದು, ಇದರಿಂದ ನಮ್ಮ ಶತ್ರು ಗಡಿಯ ಬಳಿ ಸುಳಿಯಲೂ ಸಾಧ್ಯವಾಗದಂತಾಗುತ್ತದೆ. ಪಾಕಿಸ್ಥಾನದ ಬಳಿ ಎಫ್16 ಯುದ್ಧ ವಿಮಾನಗಳಿದ್ದು, ಇದರಲ್ಲಿ ಅಳವಡಿಸಲಾಗಿರುವ ಅಮ್ರಾಮ್ ಕ್ಷಿಣಿಯು ಭಾರತಕ್ಕಿಂತ ಪಾಕಿಸ್ಥಾನವನ್ನು ಉತ್ತಮ ಸ್ಥಾನದಲ್ಲಿರಿಸಿದೆ. ಹೀಗಾಗಿ ಭಾರತಕ್ಕೆ ಸದ್ಯ ಬಿವಿಆರ್ಎಎಎಂ ಕ್ಷಿಪಣಿ ಮತ್ತು ಎಸ್400 ಕ್ಷಿಪಣಿಗಳನ್ನು ಖರೀದಿಸಲು ಯೋಜಿಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ
Telangana; ಮಳೆ ಅಬ್ಬರಕ್ಕೆ ತತ್ತರ: ಮಗು ಸೇರಿ 13 ಮಂದಿ ಮೃತ್ಯು!
ಭಾರತ ಸೇರಿದಂತೆ ಜಾಗತಿಕವಾಗಿ ಕೋವಿಡ್ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ!
Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ
Loksabha; ಮಂದಿರಕ್ಕೆ ಬಾಬರಿ ಲಾಕ್ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
SSLC Result: ನಾಳೆ ಎಸೆಸೆಲ್ಸಿ ಫಲಿತಾಂಶ ಪ್ರಕಟ
ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿ ರಿಯಲ್ ಲೈಫ್ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್
Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ
Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ
Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ