ಹಾವು ಕಚ್ಚಿದಾಗ ಧೈರ್ಯದಿಂದ ಚಿಕಿತ್ಸೆ ಪಡೆಯಿರಿ


Team Udayavani, Apr 28, 2019, 3:00 AM IST

haavu

ದೊಡ್ಡಬಳ್ಳಾಪುರ: ಹಾವು ಕಚ್ಚಿದಾಗ ಭಯಪಡೆದೆ ಚಿಕಿತ್ಸೆ ಪಡೆದರೆ ವಾಸಿಯಾಗುತ್ತದೆ. ಇದಕ್ಕೆ ನಂಬಿಕೆ, ಧೈರ್ಯವನ್ನು ಹೊಂದಿರುವುದು ಮುಖ್ಯ ಎಂದು ಉರುಗ ತಜ್ಞ ಡಿ.ಎಸ್‌.ಮುರುಳಿಕೃಷ್ಣ ಹೇಳಿದರು.

ನಗರಸಭೆ ಸಮೀಪದ ಮೈ.ತಿ.ಶ್ರೀಕಂಠಯ್ಯ ಉದ್ಯಾನದಲ್ಲಿ ವಾಯು ವಿಹಾರಿಗಳ ಸಂಘದ ವತಿಯಿಂದ ನಡೆದ ಹಾವು ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ 294 ವಿವಿಧ ಪ್ರಬೇಧಗಳ ಹಾವುಗಳಿವೆ. ನಮ್ಮ ರಾಜ್ಯದಲ್ಲಿ 34 ಬಗೆಯ ಹಾವುಗಳಿವೆ. ಇವುಗಳ ಪೈಕಿ 10 ಮಾತ್ರ ವಿಷ ಪೂರಿತ ಹಾವುಗಳಿವೆ.

ನಮ್ಮ ತಾಲೂಕಿನ ಹಾಗೂ ಬೆಂಗಳೂರು ಗ್ರಾಮಾಂತರ ಸುತ್ತಮುತ್ತ 4 ಬಗೆಯ ಹಾವುಗಳು ಮಾತ್ರ ವಿಷ ಪೂರಿತವಾಗಿವೆ. ಇವುಗಳಲ್ಲಿ ನಾಗರಹಾವು, ರಕ್ತಮಂಡಲ, ಕೊಳಕು ಮಂಡಲ ಹಾಗೂ ಕಟ್ಲುಹಾವು ವಿಷದ ಹಾವುಗಳಾಗಿವೆ. ಕಟ್ಲುಹಾವು ಅತ್ಯಂತ ಹೆಚ್ಚು ವಿಷವನ್ನು ಹೊಂದಿರುವ ಹಾವು ಎಂದರು.

ಹಾವು 20 ವರ್ಷಗಳ ಕಾಲ ಜೀವಂತ: ಹಾವುಗಳು ಸರಾಸರಿ 20 ವರ್ಷಗಳ ಕಾಲ ಬದುಕಲಿವೆ. ಒಂದು ಹಾವು ವರ್ಷಕ್ಕೆ 200 ಇಲಿಗಳನ್ನು ತಿನ್ನಲಿದೆ. ಹಾವುಗಳು ಇಲ್ಲದೇ ಹೋದರೆ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಆಹಾರ ಧಾನ್ಯ ಇಲಿಗಳ ಪಾಲಾಗಲಿವೆ. ಇದರಿಂದ ಕೃಷಿಕರು ಸಾಕಷ್ಟು ನಷ್ಟವನ್ನು ಹೊಂದಬೇಕಾಗಲಿದೆ. ಹೀಗಾಗಿ ಪ್ರಕೃತಿಯಲ್ಲಿನ ಸಹಜ ನಿಯಂತ್ರಣದಲ್ಲಿ ಹಾವುಗಳ ಪಾತ್ರವು ದೊಡ್ಡದಾಗಿದೆ ಎಂದು ಹೇಳಿದರು.

ಇಂದಿ ದಿನಗಳಲ್ಲಿ ಹಾವುಗಳ ಸಂತತಿ ಕ್ಷೀಣ: ಭೂಮಿಯ ಮೇಲೆ ಇರುವ ಇತರೆ ಪ್ರಾಣಿಗಳಂತೆ ಹಾವುಗಳು ಸಹ ಇರಬೇಕು. ತಿಳುವಳಿಕೆಯ ಕೊರತೆಯಿಂದಾಗಿ ಹಾಗೂ ನಗರ ಬೆಳೆದಂತೆ ಹಾವುಗಳ ಸಂತತಿಯು ಕ್ಷೀಣಿಸುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ, ತಿಳುವಳಿಕೆ ಅಗತ್ಯ. ನಗರ ಅಥವಾ ಗ್ರಾಮಾಂತರ ಪ್ರದೇಶದ ಯಾರದೇ ಮನೆ ಒಳಗೆ ಅಥವಾ ಮನಯ ಅಂಗಳದಲ್ಲಿ ಇದ್ದರೆ ಮಾತ್ರ ಹಾವನ್ನು ಹಿಡಿದು ದೂರದ ಕಾಡಿಗೆ ಬಿಡಲಾಗುತ್ತದೆ. ಮನೆಯಿಂದ ಹೊರ ಭಾಗದಲ್ಲಿ ಇದ್ದರೆ ಹಾವನ್ನು ಹಿಡಿಯುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾವು ಕಚ್ಚಿದಾಗ ಮಾಡಬೇಕಾಗಿರುವ ಪ್ರಥಮ ಚಿಕಿತ್ಸೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು. ಉಪನ್ಯಾಸದಲ್ಲಿ ಭಾಗವಹಿಸಿದ್ದ ಮಹಿಳೆಯರು ಹಾಗೂ ಮಕ್ಕಳು ಉಪನ್ಯಾಸದ ನಂತರ ಜೀವಂತ ಹಾವನ್ನು ಮುಟ್ಟಿ ಅನುಭವ ಪಡೆದು ಪುಳಕಿತರಾದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಯು ವಿಹಾರಿಗಳ ಸಂಘದ ಅಧ್ಯಕ್ಷೆ ಕಮಲಮ್ಮ ವಹಿಸಿದ್ದರು. ಕಾರ್ಯದರ್ಶಿ ಬೋರ್‌ ವೆಲ್‌ಬಾಬು, ಮುಖಂಡರಾದ ಚಂದ್ರಪ್ಪ, ವಿಶ್ವನಾಥ್‌, ಭಾಸ್ಕರ್‌ ಹಾಜರಿದ್ದರು. ಮನೆ ಅಂಗಳದಲ್ಲಿನ ಹಾವು ಹಿಡಿಯಲು ಹಾಗೂ ಹಾವುಗಳ ಬಗ್ಗೆ ಮಾಹಿತಿಗೆ 9241299745, 9986838460 ಸಂಪರ್ಕಿಸಬಹುದು.

ಟಾಪ್ ನ್ಯೂಸ್

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.