ದಡ್ಡ ಮಕ್ಕಳಿಗೆ ಮೀಸಲಾದ ಶಾಲೆ !


Team Udayavani, Apr 28, 2019, 6:00 AM IST

14

ಒಂದು ಶಾಲೆಯಲ್ಲಿ 50 ಶೇ. ಫ‌ಲಿತಾಂಶ ಬಂದಿದೆ ಎಂದು ಭಾವಿಸೋಣ. ಅಂದರೆ 100 ಮಂದಿಯಲ್ಲಿ 50 ಮಂದಿ ಉತ್ತೀರ್ಣರಾಗಿದ್ದಾರೆ ಎಂದರ್ಥ. 50 ಶೇ. ಮಂದಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶದ ಸಾಧ್ಯತೆಗಳಿವೆ. ಅತ್ಯಂತ ಹೆಚ್ಚು ಅಂಕಗಳನ್ನು ಪಡೆದವರು ಉನ್ನತ ಶಿಕ್ಷಣಕ್ಕೆ ತೆರಳಬಹುದು. ಕೇವಲ ಮಾರ್ಕು ಪಡೆದರೆ ಸಾಲದು, ಅವರ ಆರ್ಥಿಕ ಸ್ಥಿತಿಯೂ ಅನುಕೂಲಕರವಾಗಿರಬೇಕು. ಕಡಿಮೆ ಅಂಕ ಗಳಿಸಿದವರು ಯಾವುದಾದರೂ ಉದ್ಯೋಗ ತರಬೇತಿಗೆ, ಮುಂದಿನ ತರಗತಿಗಳಿಗೆ ಸೇರಬಹುದು. ಆದರೆ, ಅನುತ್ತೀರ್ಣರಾದ 50 ಶೇ. ಮಂದಿ ಏನು ಮಾಡುವುದು? ಅನುತ್ತೀರ್ಣರಾದವರು ಮಾತ್ರವಲ್ಲ, ಕಡಿಮೆ ಅಂಕ ಗಳಿಸಿದವರು ಕೂಡ ಮುಂದಿನ ಶಿಕ್ಷಣ ಪಡೆಯಲಾರದೆ ಪರದಾಡುವ ಸ್ಥಿತಿ ಇಂದು ಇದೆ.

ನಿಜವಾಗಿ ಅನುತ್ತೀರ್ಣರಾದ ಮಂದಿ ಆಫೀಸು ಸಹಾಯಕರಾಗಿಯೊ, ಕೂಲಿಕಾರ್ಮಿಕರಾಗಿಯೊ, ಗೂಡಂಗಡಿ ನಡೆಸಿಯೋ ಜೀವನ ನಡೆಸಬಹುದು. ಆದರೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದೆಂದರೆ ಬದುಕಿನಲ್ಲಿ ಸೋತುಹೋದಂತೆ ಎಂದೇ ಬಿಂಬಿಸಲಾಗುತ್ತಿದೆ. ಫೇಲಾದವರು ಕೂಡಾ ಬದುಕಿಯೇ ಬದುಕುತ್ತಾರೆ. ಆದರೆ, ಪರೀಕ್ಷೆಯಲ್ಲಿ ಫೇಲಾದವರನ್ನು ಮತ್ತು ಫೇಲ್‌ ಆದವರು ಮಾಡುವ ದುಡಿಮೆಯನ್ನು ಒಂದು ಘನತೆಯಿಂದ ಕಾಣುವ ಸ್ಥಿತಿ ನಮ್ಮಲ್ಲಿ ಏಕೆ ಇಲ್ಲ?

“ಗೆಲುವೆಂಬುದು ಗೆಲುವೇ ಅಲ್ಲ’ ಎಂಬುದೊಂದು ಪ್ರಸಿದ್ಧ ಉಕ್ತಿ. ನಮ್ಮಲ್ಲಿ ಉನ್ನತ ಅಂಕ ಪಡೆದವರು ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ ಎಂದಿಟ್ಟುಕೊಳ್ಳೋಣ. ಅವರಲ್ಲಿ ಕೆಲವರು ಲಂಚ ಪಡೆದು, ವಂಚನೆ ಮಾಡಿ ಶ್ರೀಮಂತರಾಗಬಹುದು. ಹಾಗಿದ್ದರೆ, ಅವರ ವ್ಯಕ್ತಿತ್ವವನ್ನು ಅಂಕಗಳಿಂದ ಅಳೆಯುವುದು ಹೇಗೆ?

ಒಬ್ಬರು ಹಳ್ಳಿ ಶಾಲೆಯ ಮೇಸ್ಟರು ಹೇಳುತ್ತಿದ್ದರು, “”ನಮ್ಮಲ್ಲಿ ಕೇವಲ ಹತ್ತೇ ಮಂದಿ ಅನುತ್ತೀರ್ಣರಾಗಿದ್ದಾರೆ” “”ನಿಮ್ಮ ಶಾಲೆ ಸೆಂಟ್‌ ಪರ್ಸೆಂಟ್‌ ಬಾರದ ಬಗ್ಗೆ ಬೇಸರವಿಲ್ಲವೆ?” ಎಂದು ಕೇಳಿದರೆ ಅವರ ಉತ್ತರ: “”ನಾವು ಕೇವಲ ಬುದ್ಧಿವಂತರಾದ ಮಕ್ಕಳಿಗೆ ಮಾತ್ರ ಕಲಿಸುವುದಲ್ಲ, ನಮ್ಮಲ್ಲಿ ದಡ್ಡ ಮಕ್ಕಳು ಕಲಿಯುತ್ತಾರೆ. ಎಲ್ಲರನ್ನೂ ಒಂದೇ ಬಾರಿ ಪರೀಕ್ಷೆಗೆ ಕೂರಿಸುತ್ತೇವೆ”.

ಸ್ನೇಹಿತರೊಬ್ಬರು ಸೀಮಿತ ಸಂಖ್ಯೆಯ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸುತ್ತಿದ್ದರು. ಆ ಶಿಬಿರದಲ್ಲಿ ಭಾಗವಹಿಸಬೇಕಾದರೆ ಮಕ್ಕಳಿಗೆ ಇರಬೇಕಾದ ಒಂದೇ ಒಂದು ಅರ್ಹತೆ ಎಂದರೆ ಶಾಲಾ ಪರೀಕ್ಷೆಗಳಲ್ಲಿ 40 ಶೇ.ಕ್ಕಿಂತ ಹೆಚ್ಚಿನ ಅಂಕ ಗಳಿಸಿರಬಾರದು!

ಅವರು ಅದಕ್ಕೆ ಕೊಡುವ ಸಮರ್ಥನೆ ಹೀಗಿದೆ: “ಒಳ್ಳೆಯ ಅಂಕ ಪಡೆಯಲು ಪ್ರಯತ್ನಿಸುವುದು ತಪ್ಪೇನೂ ಅಲ್ಲ. ಇಂದಿನ ಕಾಲ ಹಾಗೆಯೇ ಇದೆ. ಅಂಕ ಚೆನ್ನಾಗಿ ಪಡೆಯದವರನ್ನು ಯಾರೂ ಪರಿಗಣಿಸುವುದಿಲ್ಲ. ಆದರೆ, ಹೆಚ್ಚು ಅಂಕ ಪಡೆಯಲಾಗದ ವಿದ್ಯಾರ್ಥಿಗಳಿಗೆ ತಾವಿನ್ನು ಇಲ್ಲೇನೂ ಸಾಧಿಸಲಾರೆವು ಎಂದು ಮನದಟ್ಟಾಗಿರುತ್ತದೆ. ಅವರಲ್ಲಿ ಹೆಚ್ಚಿನವರು ಚಿತ್ರಕಲೆಗಳಲ್ಲಿ, ಕರಕುಶಲ ಕಲೆಯಲ್ಲಿ , ಹಾಡುವುದರಲ್ಲಿ ಪ್ರತಿಭಾವಂತರಾಗಿರುತ್ತಾರೆ. ಶಾಲೆಯಲ್ಲಿ ನಿರುಪಯುಕ್ತರೆಂದು ಭಾವಿಸಿದ ಆ ಮಕ್ಕಳಿಗೆ ಇಂಥ ಅಭಿವ್ಯಕ್ತಿಯ ಅವಕಾಶ ಸಿಕ್ಕಿದರೆ ಅದ್ಭುತವಾಗಿ ಮಿಂಚುತ್ತಾರೆ. ಹಾಗಾಗಿ, ತಮ್ಮ ಶಿಬಿರದಲ್ಲಿ ಯಾವತ್ತೂ ದಡ್ಡ ಮಕ್ಕಳಿಗೆ ಅವಕಾಶ’.

ದಡ್ಡತನಕ್ಕೆ ಆ ಹುಡುಗನೊಬ್ಬನೇ ಕಾರಣವಲ್ಲ, ಆತ ಬೆಳೆದುಬಂದ ರೀತಿ, ವಾಸಿಸುತ್ತಿರುವ ಸ್ಥಿತಿಯೂ ಕಾರಣವೇ.

ಕೆ. ಜೆ. ಪ್ರಕಾಶ್‌

ಟಾಪ್ ನ್ಯೂಸ್

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.