ನಿರ್ವಾಹಕ-ಪ್ರಯಾಣಿಕನ “ಕೋಳಿ’ ಜಗಳ!
Team Udayavani, Apr 29, 2019, 3:05 AM IST
ಉಪ್ಪಿನಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಎರಡು ಕೋಳಿಗಳೊಂದಿಗೆ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ಕೋಳಿಗೂ ಅರ್ಧ ಟಿಕೆಟ್ ನೀಡಬೇಕೆಂದು ನಿರ್ವಾಹಕ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕ ಹಾಗೂ ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ ನಡೆದು, ಕುಪಿತನಾದ ಪ್ರಯಾಣಿಕ ಬಸ್ಸಿನಿಂದ ಇಳಿದ ಪ್ರಕರಣ ಭಾನುವಾರ ನಡೆದಿದೆ.
ಕುಪ್ಪೆಟ್ಟಿ ಪರಿಸರದ ನಿವಾಸಿಯೊಬ್ಬರು ಶಿರಾಡಿ ಗಡಿಯ ದೈವಸ್ಥಾನದಲ್ಲಿ ಹರಕೆ ಸಲ್ಲಿಸಲೆಂದು ಎರಡು ಕೋಳಿಗಳೊಂದಿಗೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಸಕಲೇಶಪುರದ ಕಡೆಗೆ ಹೋಗುವ ಬಸ್ಸನ್ನೇರಿದ್ದರು. ಸೀಮಿತ ನಿಲುಗಡೆಯನ್ನು ಹೊಂದಿದ್ದ ಈ ಬಸ್ಸಿನಲ್ಲಿ ಸಕಲೇಶಪುರದ ಟಿಕೆಟ್ ದರ 77 ರೂ.ಗಳನ್ನು ಪಾವತಿಸಬೇಕಾಗಿತ್ತು. ಆದರೆ, ಬಸ್ ನಿರ್ವಾಹಕ ಎರಡು ಕೋಳಿಗಳಿಗೂ ಸೇರಿಸಿ 154 ರೂ.ಟಿಕೆಟ್ ನೀಡಲು ಮುಂದಾದ.
ಈ ಕುರಿತು ಪ್ರಯಾಣಿಕ ಪ್ರಶ್ನಿಸಿದಾಗ, ಜೀವಂತ ಕೋಳಿಗಳ ಪ್ರಯಾಣಕ್ಕೂ ಬಸ್ಸಿನಲ್ಲಿ ಅರ್ಧ ಟಿಕೆಟ್ ನಿಯಮ ಅನ್ವಯವಾಗುತ್ತದೆ ಎಂದು ನಿರ್ವಾಹಕರು ತಿಳಿಸಿದರು. ಇದನ್ನು ಪ್ರಯಾಣಿಕ ಬಲವಾಗಿ ಆಕ್ಷೇಪಿಸಿದಾಗ, ಇಬ್ಬರ ನಡುವೆ ವಾಗ್ವಾದ ನಡೆಯಿತು.
ಉಳಿದ ಬಸ್ಗಳ ನಿರ್ವಾಹಕರೂ ನಿಯಮದ ಕುರಿತು ಪ್ರಯಾಣಿಕನಿಗೆ ಮನವರಿಕೆ ಮಾಡಿಕೊಟ್ಟರು. ಕೊನೆಗೆ, ಇನ್ನೆಂದೂ ಕೋಳಿಗಳೊಂದಿಗೆ ಸಾರಿಗೆ ಬಸ್ನಲ್ಲಿ ಪ್ರಯಾಣಿಸುವುದಿಲ್ಲವೆಂದು ಶಪಥ ಮಾಡಿ, ಪ್ರಯಾಣಿಕ ಬಸ್ಸಿನಿಂದ ಇಳಿದು ಹೋದ. ಆದರೆ, ಇದಾವುದನ್ನೂ ಅರಿಯದ ಕೋಳಿಗಳು ಚೀಲದಲ್ಲಿ ಕೊಕ್ಕೊಕ್ಕೋ ಎನ್ನುತ್ತಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ