ಪ್ರಜ್ಞಾ ಕಣ್ಣೀರು ಒರೆಸಿದ ಉಮಾ
Team Udayavani, Apr 30, 2019, 6:13 AM IST
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರನ್ನು ಸೋಮವಾರ ಭೇಟಿಯಾದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಠಾಕೂರ್, ಭಾವುಕರಾಗಿ ಕಣ್ಣೀರು ಹಾಕಿದರು.
ಪಕ್ಷದ ಕೆಲವಾರು ಆಂತರಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಉಮಾಭಾರತಿಯವರನ್ನು ಭೇಟಿ ಮಾಡಿದ ಠಾಕೂರ್, ಕೆಲವು ಕಾಲ ಮಾತುಕತೆ ನಡೆಸಿದರು. ಅನಂತರ, ಉಮಾ ಭಾರತಿ ನಿವಾಸದಿಂದ ಹೊರಬಂದ ಅವರು, ತಾವು ಆಗಮಿಸಿದ್ದ ಎಸ್ಯುವಿ ವಾಹನದಲ್ಲಿ ಕುಳಿತ ಕೂಡಲೇ ಅಳಲಾರಂಭಿಸಿದರು. ಕಾರಿನ ಪಕ್ಕದಲ್ಲೇ ಇದ್ದ ಉಮಾಭಾರತಿ, ಪ್ರಜ್ಞಾ ಅವರ ಕಣ್ಣೀರನ್ನು ಒರೆಸಿ ಸಾಂತ್ವನ ಹೇಳಿದರು. ಜತೆಗೆ, ಸಾಧ್ವಿ ಪ್ರಜ್ಞಾ ಅವರ ಗೆಲುವು ನಿಶ್ಚಿತ ಎಂದೂ ಉಮಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ