ಚಹಾ ಮಾರುತ್ತಿದ್ದವ ಈಗ ಮೇಯರ್
Team Udayavani, May 1, 2019, 6:00 AM IST
ಒಂದಾನೊಂದು ಕಾಲದಲ್ಲಿ ದಿಲ್ಲಿಯಲ್ಲಿ ಚಹಾ ಮಾರುತಿದ್ದು, ಅನಂತರ, ಉತ್ತರ ದಿಲ್ಲಿ ಪಾಲಿಕೆಗೆ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದ ಅವತಾರ್ ಸಿಂಗ್, ಅದೇ ಪಾಲಿಕೆಯ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮಹತ್ವದ ಹುದ್ದೆಗೇರಿದ ಮೊದಲ ದಲಿತ ಸಿಕ್ಖ್ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ. ಇವರ ಸಾಧನೆಗೆ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವತಾರ್ ಸಿಂಗ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.