ಭೋಪಾಲ್ನಲ್ಲಿ ದಿಗ್ವಿಜಯ್ ಗೆಲುವಿಗಾಗಿ 5,000 ಸಾಧುಗಳ ಹಠಯೋಗ
ಕೈ ಪಾಳಯಕ್ಕೆ ಜಿಗಿದ ಕಂಪ್ಯೂಟರ್ ಬಾಬಾ ಮತ್ತು ಬೆಂಬಲಿಗರು...!
Team Udayavani, May 7, 2019, 2:02 PM IST
ಭೋಪಾಲ್: ಇಡೀ ದೇಶದ ಗಮನ ಸೆಳೆದಿರುವ ಭೋಪಾಲ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಪ್ರಚಾರದ ಕಾವು ಹೆಚ್ಚುತ್ತಿದ್ದು, ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರ ಗೆಲುವಿಗಾಗಿ ಪ್ರಾರ್ಥಿಸಿ ಸಾವಿರಾರು ಸಾಧುಗಳು ಹಠಯೋಗ ಆರಂಭಿಸಿದ್ದಾರೆ.
ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ಸೈಫಿಯಾ ಮೈದಾನದಲ್ಲಿ ಸಾಧುಗಳು ಹಠ ಯೋಗ, ಹೋಮ ವೃತ ಆರಂಭಿಸಿದ್ದಾರೆ.
ಕಂಪ್ಯೂಟರ್ ಬಾಬಾ (ನಾಮ್ದಿಯೋ ದಾಸ್ ತ್ಯಾಗಿ) ಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಶಿವರಾಜ್ ಸಿಂಗ್ ಚೌಹಾಣ್ ಅವರು ಸಚಿವ ಮಟ್ಟದ ಸ್ಥಾನಮಾನವನ್ನು ನೀಡಿದ್ದರು.
ಇದೀಗ ಬಿಜೆಪಿ ಪಾಳಯ ತೊರೆದು ಕಾಂಗ್ರೆಸ್ಗೆ ಜಿಗಿದಿರುವ ಬಾಬಾ ಬಿಜೆಪಿ ಅಧಿಕಾರಕ್ಕೆ ಬಂದು 5 ವರ್ಷದೊಳಗೆ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿತ್ತು. ರಾಮ ಮಂದಿರ ಆಗಿಲ್ಲ, ಹಾಗಾಗಿ ನಾವು ಮೋದಿ ಪರ ಇಲ್ಲ ಎಂದಿದ್ದಾರೆ.
ಸಾಧುಗಳು ವಿಶೇಷ ಪೂಜೆಯಲ್ಲಿ ದಿಗ್ವಿಜಯ್ ಸಿಂಗ್ ಅವರೂ ಭಾಗಿಯಾಗಿದ್ದರು.
ವರದಿಯಾದಂತೆ ಸಮಾರು 5 ರಿಂದ 7 ಸಾವಿರ ಮಂದಿ ಸಾಧುಗಳು ಮುಂದಿನ ಮೂರು ದಿನಗಳ ಕಾಲ ಪೂಜಾ ವಿಧಿಗಳನ್ನು ನಡೆಸಲಿದ್ದಾರೆ. ಭಜನೆ ಕೀರ್ತನೆಗಳನ್ನು ಹಾಡುತ್ತಾ ದಿಗ್ವಿಜಯ್ ಪರ ಮತಗಳನ್ನು ಕೇಳುವವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Prajwal Revanna ಗೆದ್ದರೆ ಎನ್ಡಿಎಯಿಂದ ಕ್ರಮ: ಆರ್. ಅಶೋಕ್
ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು
ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು: ಚೆಲುವರಾಯಸ್ವಾಮಿ
NEET Exam; ರಾಜ್ಯದಲ್ಲಿ ಸುಗಮವಾಗಿ ನಡೆದ ನೀಟ್ ಪರೀಕ್ಷೆ
IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ