ಟಿಕ್‌ ಟಾಕ್‌ ನಿಷೇಧದ ಸುತ್ತಮುತ್ತ


Team Udayavani, May 13, 2019, 9:50 AM IST

23

ಆ ದಿನ ನನ್ನ ಗೆಳತಿಯೊಬ್ಬಳು ಚೆನ್ನಾಗಿ ಅಲಂಕಾರ ಮಾಡಿಕೊಂಡು ಬಂದಿದ್ದಳು. ಯಾವತ್ತಿಗಿಂತ ವಿಭಿನ್ನವಾಗಿ ಕಾಣುತ್ತಿದ್ದಳು. ಯಾವುದೋ ಕಾರ್ಯಕ್ರಮಕ್ಕೆ ಹೋಗಲು ತಯಾರಾಗಿದ್ದಾಳೆ ಎಂದುಕೊಂಡು ನಾನು ಅವಳ ಬಳಿ ಕೇಳಿಯೇ ಬಿಟ್ಟೆ. ಅದಕ್ಕೆ ಅವಳ ಉತ್ತರ ಹೀಗಿತ್ತು- “ಹಾಗೇನಿಲ್ಲ, ಇವತ್ತು ಟಿಕ್‌ಟಾಕ್‌ನಲ್ಲಿ ಒಂದು ಚೆನ್ನಾಗಿರೋ ವಿಡಿಯೋ ಮಾಡಿ ಹಾಕೋಣಾಂತ. ಹೀಗೇ ಚೆನ್ನಾಗಿ ಡ್ರೆಸ್‌ ಮಾಡಿ ಅಪ್ರೋಚ್‌ ಮಾಡಿದ್ರೆ ತುಂಬಾ ಲೈಕ್ಸ್‌ , ಕಮೆಂಟ್ಸ… ಬರ್ತದೆ ಕಣೇ’ ಅಂತ. ಅವಳ ಅವಸ್ಥೆ ನೋಡಿ ನಂಗೆ ಮರುಕವಾಯಿತು. ಮನುಷ್ಯ ತಾನು ನಾಲ್ಕು ಜನರ ಮುಂದೆ ಗುರುತಿಸಿಕೊಳ್ಳೋಕೆ ಏನೆಲ್ಲಾ ಕಸರತ್ತು ಮಾಡ್ತಾನೆ !

ಟಿಕ್‌ಟಾಕ್‌ ಅನ್ನೋದು ಚೀನಾ ದೇಶದ ಮೊಬೈಲ್ ಅಪ್ಲಿಕೇಶನ್‌. ಇದರ ಮೂಲಕ ನಾವು ನಮ್ಮ ವಿಡಿಯೋಗಳನ್ನು ಮಾಡಿ ಹಾಕಬಹುದು. ಎಡಿಟ್ ಮಾಡುವ ಅವಕಾಶವೂ ಇದರಲ್ಲಿರುತ್ತದೆ. ಆ ವಿಡೀಯೋಗೆ ತಕ್ಕಂತೆ ಹಾಡು, ಸಂಭಾಷಣೆಗಳನ್ನೂ ಹಾಕಬಹುದು. ನಮಗೆ ಬರುವ ಲೈಕ್‌, ಕಮೆಂಟ್ ಗಳ ಮೇಲೆ ನಮ್ಮ ಜನಪ್ರಿಯತೆ ನಿರ್ಧರಿತವಾಗುತ್ತದೆ. ನಮಗೆ ಇಷ್ಟವಾದಂಥ ವಿಡಿಯೋಗಳನ್ನು ನೋಡಬಹುದು. ಅದೆಷ್ಟೋ ಎಲೆಮರೆಕಾಯಿಯಂತಿದ್ದ ಪ್ರತಿಭೆಗಳು ಈ ಆ್ಯಪ್‌ ಮೂಲಕ ಪರಿಚಯವಾದರು. ಕಾಲ, ಗಡಿ, ದೇಶವನ್ನು ಮೀರಿ ಕೋಟಿಗಟ್ಟಲೆ ಬಳಕೆದಾರರು ಈ ಆ್ಯಪ್‌ನ ಮೋಡಿಗೆ ಮರುಳಾಗಿದ್ದಾರೆ. ತಮ್ಮಲ್ಲಿರುವ ಕೌಶಲವನ್ನು ಹೊರಜಗತ್ತಿಗೆ ಪ್ರದರ್ಶಿಸಲು ಇದು ಕೆಲವರಿಗೆ ಸಹಕಾರಿಯಾದರೂ ಇನ್ನೊಂದು ಕಡೆ ದುರ್ಬಳಕೆಯೂ ಆಗುತ್ತಿದೆ. ಅದೆಷ್ಟೋ ಜನರು ಪ್ರಮುಖವಾಗಿ ಮಹಿಳೆಯರು ಇದರಿಂದಾಗಿ ಕೋರ್ಟಿನ ಮೆಟ್ಟಿಲೇರಿದ್ದೂ ಇದೆ. ಯುವಜನತೆಯ ಅಮೂಲ್ಯವಾದ ಸಮಯ ಇದರ ಮೂಲಕ ಹಾಳಾಗುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೇ ಟಿಕ್‌ಟಾಕ್‌ ಆ್ಯಪ್‌ ಅಶ್ಲೀಲ ದೃಶ್ಯಗಳಿಗೆ ಅನುವು ಮಾಡಿಕೊಡುತ್ತದೆ ಎಂದು ಮದ್ರಾಸ್‌ ಹೈಕೋರ್ಟ್‌ ಅದಕ್ಕೆ ನಿಷೇಧಾಜ್ಞೆ ಹೇರಿತ್ತು. ಇದನ್ನು ಸುಪ್ರೀಂಕೋರ್ಟಿನ ಗಮನಕ್ಕೂ ತಂದು ಈ ಮೂಲಕ ಪ್ಲೇ ಸ್ಟೋರ್‌ ಮತ್ತು ಆ್ಯಪಲ… ಸ್ಟೋರ್‌ಗಳಿಂದ ಟಿಕ್‌ಟಾಕ್‌ನ್ನು ತೆಗೆದು ಹಾಕುವಂತೆ ಆದೇಶಿಸಿತ್ತು. ಯುವಜನತೆಯೇ ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿರುವುದರಿಂದ ಈ ಆದೇಶ ಅವರ ಹೆತ್ತವರನ್ನು ನೆಮ್ಮದಿಯ ಉಸಿರು ಬಿಡುವಂತೆ ಮಾಡಿತ್ತು. ಆದರೆ ಕೋಟ್ ಹೇರಿದ್ದ ನಿಷೇಧಾಜ್ಞೆಯನ್ನು ಅದು ಹಿಂಪಡೆದಿದೆ.

ಟಿಕ್‌ಟಾಕ್‌ ನಿಷೇಧದಿಂದಾಗಿ ದಿನವೊಂದಕ್ಕೆ ಕೋಟಿಗಟ್ಟಲೆ ಇದನ್ನು ನಡೆಸುವ ಕಂಪೆನಿಗೆ ನಷ್ಟವುಂಟಾಗುತ್ತಿತ್ತು ಹಾಗೂ 250 ರಷ್ಟು ನೌಕರರು ತಮ್ಮ ಉದ್ಯೋಗ ನಷ್ಟವಾಗುವ ಭೀತಿಯಲ್ಲಿದ್ದರು. ಭಾರತದಲ್ಲೇ ಈ ಅಪ್ಲಿಕೇಶನ್‌ಗೆ ಅತೀ ಹೆಚ್ಚು ಬಳಕೆದಾರರಿದ್ದು ವಿದೇಶೀ ತಂತ್ರಜ್ಞಾನಕ್ಕೆ ಅತೀ ಹೆಚ್ಚಿನ ಮಾರುಕಟ್ಟೆಯನ್ನು ಒದಗಿಸುತ್ತ ಇದೆ.

ಕಾಲೇಜು ವಿದ್ಯಾರ್ಥಿಗಳಂತೂ ತಮ್ಮ ಸ್ನೇಹಿತರ ಜತೆಗೂಡಿ ವಿಡಿಯೋ ಮಾಡಿ ಹಾಕುವುದರಲ್ಲಿ ಆನಂದವನ್ನು ಪಡೆಯುತ್ತ ಇದ್ದಾರೆ. ಕ್ಲಾಸ್‌ಬಂಕ್‌ ಮಾಡಿ ವಿಡಿಯೋ ಮಾಡುವುದು ನೋಡಿದಾಗ ಇದು ಅದೆಷ್ಟು ಗೀಳಾಗಿ ಪರಿಣಮಿಸಿದೆ ಎನ್ನುವುದನ್ನು ಗಮನಿಸಬಹುದು.

ಪ್ರತಿಯೊಂದು ತಂತ್ರಜ್ಞಾನ, ಆ್ಯಪ್‌ಗ್ಳ ಜ್ಞಾನ, ಅರಿವು ನಮಗಿರಬೇಕು. ಅದು ಇರುವುದೂ ನಮ್ಮ ಬಳಕೆಗಾಗಿಯೇ. ಆದರೆ ಪ್ರತಿಯೊಂದಕ್ಕೆ ಮಿತಿ ಅನ್ನೋದು ಇರುತ್ತದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಪ್ರತಿಯೊಂದು ನಿಮಿಷವೂ ನಮಗೆ ಅಮೂಲ್ಯವಾದದ್ದು. ಸಾಧನೆ ಮಾಡಲು, ನಮ್ಮ ಕ್ರಿಯಾಶೀಲತೆಯನ್ನು ನಾಲ್ಕು ಜನರ ಮುಂದೆ ತೋರಿಸಲು ಬೇರೆ ಅನೇಕ ಮಾರ್ಗಗಳಿವೆ. ರಾತ್ರಿಯಿಡೀ ಕಣ್ಣಿಗೆ ಎಣ್ಣೆ ಬಿಟ್ಟು ತರಗತಿಗೆ ಹೋಗದೆ ಟಿಕ್‌ಟಾಕ್‌ನಲ್ಲಿ ಶಾಮೀಲಾಗುವ ನಾವೆಲ್ಲಾ ಒಂದು ಬಾರಿ ಇದರ ಬಾಧಕಗಳ ಬಗ್ಗೆ ಯೋಚಿಸಿ ನೋಡೋಣ. ಆಗ ನಾವೆಲ್ಲ ಮೊಬೈಲ… ಎಂಬ ಮಾಯಾಪರದೆಯಿಂದ ಹೊರಜಗತ್ತಿಗೆ ಬಂದು ನಿಜವಾದ ಜೀವನವನ್ನು ಅನುಭವಿಸುತ್ತೇವೆ.

ರಶ್ಮಿ ಯಾದವ್‌ ಕೆ. , ಪ್ರಥಮ ಪತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಪದವಿ ಕಾಲೇಜು, ಉಜಿರೆ

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.