ಫೇಸ್‌ಬುಕ್‌ ಫೇಸ್‌ ತಂದ ಅದೃಷ್ಟ!

ರತ್ನಮಂಜರಿಯಲ್ಲಿ ರಾಜ್‌ಯೋಗ

Team Udayavani, May 13, 2019, 3:00 AM IST

Rajcharan

ಕೆಲವರು ಹೀರೋ ಆಗಬೇಕು ಅಂತ ಸಾಕಷ್ಟು ತಯಾರಿ ನಡೆಸುತ್ತಾರೆ, ಸಿಕ್ಕ ಸಿಕ್ಕ ಕಡೆ ಆಡಿಷನ್‌ಗೂ ಹೋಗುತ್ತಾರೆ. ಆದರೆ, ಹೀರೋ ಆಗುವ ಅದೃಷ್ಟ ಮಾತ್ರ ಅಷ್ಟಕ್ಕಷ್ಟೆ. ಇನ್ನೂ ಕೆಲವರಿಗೆ ಹೀರೋ ಆಗುವ ಅವಕಾಶ ಹುಡುಕಿಕೊಂಡೇ ಬಂದುಬಿಡುತ್ತೆ. ಆ ಸಾಲಿಗೆ ರಾಜ್‌ಚರಣ್‌ ಕೂಡ ಸೇರುತ್ತಾರೆ. ಯಾರು ಈ ರಾಜ್‌ಚರಣ್‌ ಎಂಬ ಪ್ರಶ್ನೆಗೆ “ರತ್ನಮಂಜರಿ’ ಚಿತ್ರ ತೋರಿಸಬೇಕು.

ಹೌದು, “ರತ್ನಮಂಜರಿ’ ಚಿತ್ರದ ಹೀರೋ ಈ ರಾಜ್‌ಚರಣ್‌. ಇವರಿಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಫೇಸ್‌ಬುಕ್‌ ಮೂಲಕ. ಇವರ ಫೇಸ್‌ಬುಕ್‌ ಪ್ರೊಫೈಲ್‌ ನೋಡಿದ ನಿರ್ದೇಶಕ ಪ್ರಸಿದ್ಧ್ ಅವರು ಡೆನ್ಮಾರ್ಕ್‌ನಿಂದಲೇ ಕಾಲ್‌ ಮಾಡಿ, “ಚಿತ್ರವೊಂದಕ್ಕೆ ಆಡಿಷನ್‌ ಇದೆ, ನೀವು ಬನ್ನಿ, ಆಯ್ಕೆಯಾದರೆ, ನೀವೇ ಹೀರೋ’ ಅಂದರಂತೆ.

ಆದರೆ, ರಾಜ್‌ಚರಣ್‌ಗೆ ಅದೇಕೋ ಅವರ ಮಾತು ಮೊದಲು ನಂಬಿಕೆ ಬರಲಿಲ್ಲವಂತೆ. ಇದೆಲ್ಲೋ ಫೇಕ್‌ ಇರಬೇಕು ಅಂತ ಸುಮ್ಮನಿದ್ದರಂತೆ. ನಾನು ಹೊಸಬ. ನನ್ನ ಫೇಸ್‌ಬುಕ್‌ ಫೇಸ್‌ ನೋಡಿ ಅವಕಾಶ ಎಲ್ಲಿಂದ ಬರಬೇಕು ಅಂತ ಯೋಚಿಸುತ್ತಲೇ ತಮ್ಮ ಪಾಡಿಗೆ ತಾವಿದ್ದರಂತೆ. ಕೊನೆಗೆ ನಿರ್ದೇಶಕ ಪ್ರಸಿದ್ಧ್ ಅವರು ಇಂಡಿಯಾಗೆ ಬಂದ ಕೂಡಲೇ ರಾಜ್‌ಚರಣ್‌ಗೆ ಕಾಲ್‌ ಮಾಡಿ, ಬನ್ನಿ ಅಂದಿದ್ದಾರೆ.

ಆಡಿಷನ್‌ ಕೂಡ ನಡೆಸಿದ್ದಾರೆ. ಆದರೆ, ರಾಜ್‌ಚರಣ್‌ಗೆ ಆಡಿಷನ್‌ ಪಾಸ್‌ ಆಯ್ತಾ ಇಲ್ಲವೋ ಎಂಬ ಗೊಂದಲವಿತ್ತಂತೆ. ಯಾಕೆಂದರೆ, ನಿರ್ದೇಶಕರು, ಎನ್‌ಆರ್‌ಐ ಕನ್ನಡಿಗರು ಸೇರಿ ಮಾಡುತ್ತಿರುವ ಚಿತ್ರವಿದು. ನಿನ್ನನ್ನು ಲಿಸ್ಟ್‌ನಲ್ಲಿ ಇಟ್ಟಿರ್ತೀನಿ. ಯುಎಸ್‌ನಲ್ಲೇ ಹೀರೋ ಹುಡುಕಾಟ ನಡೆಯುತ್ತಿದೆ. ಹಾಗೊಂದು ವೇಳೆ ಸಿಗದೇ ಇದ್ದರೆ ನೀನೇ ಹೀರೋ ಅಂದಿದ್ದರಂತೆ.

ಎರಡು ತಿಂಗಳ ಬಳಿಕ ಪ್ರಸಿದ್ಧ್ ಕಾಲ್‌ ಮಾಡಿ, ನೀನೇ ನಮ್ಮ ಚಿತ್ರಕ್ಕೆ ಹೀರೋ ಅಂದರಂತೆ. ಹಾಗೆ ನಡೆದ ಮಾತುಕತೆ, ಚಿತ್ರವಾಗಿ, ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಮೇ.17 ರಂದು “ರತ್ನಮಂಜರಿ’ ಬಿಡುಗಡೆಗೆ ಸಿದ್ಧವಾಗಿದೆ. ಆ ಕುರಿತು ರಾಜ್‌ಚರಣ್‌ ಹೇಳುವುದಿಷ್ಟು. “ನಾನು ನಾಗತಿಹಳ್ಳಿ ಚಂದ್ರಶೇಖರ್‌ ಅವರ “ಟೆಂಟ್‌ ಸಿನಿಮಾ’ ಶಾಲೆಯ ವಿದ್ಯಾರ್ಥಿ.

ಅಲ್ಲಿ ನಟನೆ ತರಬೇತಿ ಕಲಿತಿದ್ದೇನೆ. “ರತ್ಮಮಂಜರಿ’ ಚಿತ್ರಕ್ಕೆ ವರ್ಕ್‌ಶಾಪ್‌ ನಡೆಸಿದ್ದು, ನೃತ್ಯ ನಿರ್ದೇಶಕ ಮೋಹನ್‌ ಬಳಿಕ ಡ್ಯಾನ್ಸ್‌ ಕಲಿತರೆ, ವಿಕ್ರಮ್‌ ಮಾಸ್ಟರ್‌ ಬಳಿ ಸ್ಟಂಟ್ಸ್‌ ಕಲಿತಿದ್ದೇನೆ. ಇನ್ನು, ರಾಜು ವೈವಿಧ್ಯ ಅವರ ಬಳಿ ನಟನೆ ಬಗ್ಗೆ ಸಾಕಷ್ಟು ವಿಷಯ ತಿಳಿದುಕೊಂಡೆ. ಆ ನಂತರ ಕ್ಯಾಮೆರಾ ಮುಂದೆ ನಿಂತೆ. ಶೇ.60 ರಷ್ಟು ಕೂರ್ಗ್‌ ನಲ್ಲಿ ಚಿತ್ರೀಕರಣ ನಡೆಸಲಾಗಿದೆ.

ನಮ್ಮ ಚಿತ್ರದ ಚಿತ್ರೀಕರಣ ನಡೆದು ಒಂದು ವಾರದಲ್ಲೇ ಕೂರ್ಗ್‌ ಪ್ರಕೃತಿ ವಿಕೋಪದಿಂದ ಹಾಳಾಯಿತು. ಆ ಸುಂದರ ತಾಣ ನಮ್ಮ ಚಿತ್ರದಲ್ಲಿ ಸೆರೆಯಾಗಿದೆ. ಈಗ ಮೊದಲಿನಂತೆ ಆ ಸ್ಥಳವಿಲ್ಲ. ಇನ್ನು, ಇದೊಂದು ನೈಜ ಘಟನೆ ಆಧರಿತ ಚಿತ್ರ. ಅಮೆರಿಕದಲ್ಲಿ ನಡೆದ ಘಟನೆ ಇಟ್ಟುಕೊಂಡು ಚಿತ್ರ ಮಾಡಲಾಗಿದೆ. ನಾನು ಎನ್‌ಆರ್‌ಐ ಕನ್ನಡಿಗನ ಪಾತ್ರ ಮಾಡಿದ್ದೇನೆ.

ಇಲ್ಲೊಂದು ಲವ್‌ಸ್ಟೋರಿ ಇದೆ. ಇಂಡಿಯಾಗೆ ಅವನು ಯಾಕೆ ಬರುತ್ತಾನೆ ಎಂಬುದೇ ಕಥೆ. ಇದು ಮರ್ಡರ್‌ ಮಿಸ್ಟ್ರಿ ಹೊಂದಿದೆ. ಚಿತ್ರದಲ್ಲಿ ಅಖೀಲಾ ಪ್ರಕಾಶ್‌, ಶ್ರದ್ಧಾ ಸಾಲಿಯನ್‌, ಪಲ್ಲವಿರಾಜ್‌ ಮೂವರು ನಾಯಕಿಯರಿದ್ದಾರೆ.

“ರತ್ನಮಂಜರಿ’ ವಿಶೇಷವೆಂದರೆ, ಅಕ್ಕ ಸಮ್ಮೇಳನದಲ್ಲಿ ಆಡಿಯೋ ಬಿಡುಗಡೆಯಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಇದೆ’ ಎನ್ನುವ ರಾಜ್‌ಚರಣ್‌ಗೆ ಚಿತ್ರದ ಮೇಲೆ ಭರವಸೆ ಇದೆ. ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲದೊಂದಿಗೆ ಸದ್ಯ, ಮೂರು ಚಿತ್ರಗಳ ಮಾತುಕತೆಯಲ್ಲಿ ತೊಡಗಿದ್ದಾರಂತೆ. ಅತ್ತ ತೆಲುಗಿನಿಂದಲೂ ಅವಕಾಶ ಬಂದಿದೆ’ ಎನ್ನುತ್ತಾರೆ ಅವರು.

ಟಾಪ್ ನ್ಯೂಸ್

1-weweqwew

CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

12-

Heat Weather: ಹಬೆಯಾಡುತ್ತಿರುವ ವಸುಂಧರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vikasa parva Kannada movie

Kannada Movie; ಸೆನ್ಸಾರ್ ಪಾಸಾದ ‘ವಿಕಾಸ ಪರ್ವ’

Biography of Mother Teresa in web series

Mother Teresa; ವೆಬ್‌ ಸೀರೀಸ್‌ನಲ್ಲಿ ಮದರ್‌ ತೆರೇಸಾ ಜೀವನ ಚರಿತ್ರೆ

Re Release; ಭರ್ಜರಿ ಓಪನಿಂಗ್‌ ಪಡೆದ ಉಪ್ಪಿ ‘ಎ’

Re Release; ಭರ್ಜರಿ ಓಪನಿಂಗ್‌ ಪಡೆದ ಉಪ್ಪಿ ‘ಎ’

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

vijay raghavendra’s swapna mantapa movie

Kannada Cinema; ‘ಸ್ವಪ್ನ ಮಂಟಪ’ದಲ್ಲಿ ವಿಜಯ ರಾಘವೇಂದ್ರ-ರಂಜನಿ; ಬರಗೂರು ನಿರ್ದೇಶನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-weweqwew

CRPF exits;ಮೇ 20 ರಿಂದ ಸಿಐಎಸ್ಎಫ್ ತುಕಡಿಗಳಿಂದ ಸಂಸತ್ತಿಗೆ ಭದ್ರತೆ

1-qweqwe

Kushtagi: ಸಿಡಿಲಿಗೆ ಬಿತ್ತನೆ ಕಾರ್ಯ ನಿರತ ರೈತ ಬಲಿ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

1-aaa

Kaup: ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.