ಹಿರಿಯರ ಆರೈಕೆ ಇರಲಿ ಎಚ್ಚರ
Team Udayavani, May 19, 2019, 9:31 AM IST
ಮನುಷ್ಯ ಮಗುವಾಗುವುದು ಎರಡೇ ಬಾರಿ ಒಂದು ಬಾಲ್ಯಾವಸ್ಥೆಯಲ್ಲಿ ಮತ್ತೂಂದು ವೃದ್ಧಾವಸ್ಥೆಯಲ್ಲಿ . ನಮ್ಮ ಬಾಲ್ಯದ ಆರಂಭದ ಹಂತಗಳು ಹೇಗಿರುತ್ತದೋ ಅದೇ ರೀತಿಯಲ್ಲಿಯೇ ವೃದ್ಧಾಪ್ಯ ಕೂಡ. ತನ್ನಲ್ಲಿರುವ ಎಲ್ಲ ದೈಹಿಕ ಶಕ್ತಿಗಳು ಹಂತ ಹಂತವಾಗಿ ಕಳೆದು ಶರೀರದ ಜತೆಗೆ ಎಲ್ಲವೂ ಕುಬ್ಜವಾಗತೊಡಗುತ್ತದೆ. ಅದೊಂದು ಸಹಜ ಪ್ರಕ್ರಿಯೆ. ಈ ವೇಳೆ ಹಿರಿಜೀವದ ಆರೈಕ ಅತೀ ಅಗತ್ಯ.
ಆರೈಕೆ ಹೀಗಿರಲಿ
ಆರೋಗ್ಯದ ಕಾಳಜಿ ವಹಿಸಿ
ಒಂದು ಸಣ್ಣ ಗಾಯವಾದರೂ ಸಾಕು ಹಿರಿ ಜೀವದ ಮನಸ್ಸು ಆತಂಕದಿಂದ ಕುಗ್ಗಿ ಹೋಗುತ್ತದೆ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಮನೆಮಂದಿಯೇ ವಹಿಸಿದರೆ ಅವರಲ್ಲಿರುವ ಆತಂಕವನ್ನು ದೂರ ಮಾಡಬಹುದು.
ಔಷಧಗಳ ಬಗ್ಗೆ ಎಚ್ಚರ
ಹಿರಿಯರುಗೊಂದಲದಿಂದಾಗಿ ತಪ್ಪಾದ ಔಷಧಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೇ ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದನ್ನು ಮರೆತುಬಿಡಬಹುದು. ಹೀಗಾಗಿ ಮನೆ ಮಂದಿಯೇ ಇದನ್ನು ನೋಡಿಕೊಂಡರೆ ಉತ್ತಮ.
ಏಕಾಂತದಲ್ಲಿರಲು ಅವಕಾಶ ನೀಡದಿರಿ
ಮನೆಯಲ್ಲಿರುವ ಹಿರಿಯರಿಗಾಗಿ ನಿತ್ಯದ ಬದುಕಿನಲ್ಲಿ ಸ್ವಲ್ಪವಾದರೂ ಸಮಯ ಕೊಡಿ. ಅವರ ಆಸಕ್ತಿಯನ್ನು ಕೇಳಿಕೊಳ್ಳಿ. ಅವರಲ್ಲಿ ಜೀವನೋತ್ಸಾಹ ತುಂಬಲು ಪ್ರಯತ್ನಿಸಿ.
ಆಹಾರದ ಬಗ್ಗೆ ಕಾಳಜಿ ವಹಿಸಿ
ವೃದ್ಧಾಪ್ಯದಲ್ಲಿ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳು ಕಾಡುವುದರಿಂದ ಅವರ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಸುಲಭವಾಗಿ ಜೀರ್ಣವಾಗಬಲ್ಲ, ಅಗಿಯಲು ಸಾಧ್ಯವಾಗುವಂಥ ಆಹಾರವನ್ನೇ ನೀಡಬೇಕು. ಹಣ್ಣು, ತರಕಾರಿ ಹೆಚ್ಚು ಸೇವನೆಗೆ ಆದ್ಯತೆ ಕೊಡಬೇಕು.
ಹಿರಿ ಜೀವಕ್ಕೆ ಮುಖ್ಯವಾಗಿ ಬೇಕಿರುವುದು ಮನೆಮಂದಿಯ ಪ್ರೀತಿ, ಆರೈಕೆ. ಅವರು ತಮ್ಮ ಬದುಕಿನ ಕೊನೆಯ ತನಕ ಸಂತೋಷವಾಗಿ ಕಳೆಯಬೇಕೆಂದು ಬಯಸುತ್ತಾರೆ. ಅದಕ್ಕೆ ಅವಕಾಶ ಕಲ್ಪಿಸಿಕೊಡುವುದು ಮನೆಮಂದಿಯ ಕರ್ತವ್ಯವೂ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ram Mandir ಆಯ್ತು ಈಗ ಬಿಜೆಪಿ ಸೀತಾ ದೇಗುಲ ಭರವಸೆ!
ಸುಳ್ಳು ವರದಕ್ಷಿಣೆ ಪ್ರಕರಣ ತಡೆಗೆ ಮದುವೆಯಲ್ಲಿ ದೊರೆತ ಉಡುಗೊರೆ ಪಟ್ಟಿ ಇರಿಸಿಕೊಳ್ಳಿ
Naxal ಶರಣಾದರೆ ಸರಕಾರದಿಂದ ಪ್ರೋತ್ಸಾಹ: ಡಾ| ಬಂಜಗೆರೆ ಜಯಪ್ರಕಾಶ್
India vs South Africa: 48 ವರ್ಷಗಳ ಬಳಿಕ ಚೆನ್ನೈಯಲ್ಲಿ ಮಹಿಳಾ ಟೆಸ್ಟ್ ಪಂದ್ಯ ಆಯೋಜನೆ
Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ