ಹಕ್ಕು ಚಲಾಯಿಸಿದ್ದಕ್ಕೆ ಐದು ಗುಂಡುಗಳು ದೇಹ ಹೊಕ್ಕವು!
Team Udayavani, May 22, 2019, 6:01 AM IST
ಇದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಘಟನೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಮತದಾನದ ವೇಳೆ ಇಲ್ಲಿನ ಗ್ರಾಮವೊಂದರ ಮತಗಟ್ಟೆಯಲ್ಲಿ ಚಲಾವಣೆ ಯಾದ ಮತಗಳು ಕೇವಲ 7. ಆ ಪೈಕಿ 5 ಮತಗಳು ಪಿಡಿಪಿ ಕಾರ್ಯಕರ್ತ ಮೊಹಮ್ಮದ್ ಜಮಾಲ್ ಅವರ ಕುಟುಂಬ ಸದಸ್ಯರದ್ದು. ಆದರೆ, ತಮ್ಮ ಕುಟುಂಬವನ್ನು ಹಕ್ಕು ಚಲಾಯಿಸಲು ಪ್ರೋತ್ಸಾಹಿಸಿ, ಮತಗಟ್ಟೆಗೆ ಕರೆದೊಯ್ದಿದ್ದಕ್ಕೆ ಜಮಾಲ್ಗೆ ಸಿಕ್ಕ ಪ್ರತಿ ಫಲವೇನು ಗೊತ್ತಾ? ಸಾವು!
ಮತದಾನದ ಮಾರನೇ ದಿನವೇ 5 ಗುಂಡುಗಳು ಜಮಾಲ್ರ ದೇಹವನ್ನು ಹೊಕ್ಕಿವೆ. ಮನೆಯೊಳಗೆ ಕೊಠಡಿಯಲ್ಲಿ ಕುಳಿತಿದ್ದ ಅವರನ್ನು ಕಿಟಕಿಯಾಚೆಯಿಂದ ಬಂದು ಹತ್ಯೆಗೈಯಲಾಗಿದೆ. ಇದು ಕಣಿವೆ ರಾಜ್ಯದ ಉಗ್ರರು ನಡೆಸಿದ ದುಷ್ಕೃತ್ಯ. ಮತದಾನಕ್ಕೆ ಬಹಿಷ್ಕಾರ ಹಾಕುವಂತೆ ಉಗ್ರರು ಕರೆ ನೀಡಿದ್ದರು. ಹೀಗಾಗಿ, ಜಮ್ಮು-ಕಾಶ್ಮೀರದ ಈ ಗ್ರಾಮದಲ್ಲಿನ ಬಹುತೇಕ ಮಂದಿ ಹಕ್ಕು ಚಲಾಯಿಸುವ ಧೈರ್ಯ ತೋರಿರಲಿಲ್ಲ. ಆದರೆ, ಜಮಾಲ್ ಕುಟುಂಬದ ಐವರು ಸದಸ್ಯರು ಮತ್ತು ಇತರೆ ಇಬ್ಬರು ಮಾತ್ರ ಅಂದು ಮತದಾನ ಮಾಡಿದ್ದರು. ಈ ಮಾಹಿತಿ ಪಡೆದ ಉಗ್ರರು, ಜಮಾಲ್ರ ಮನೆಗೆ ನುಗ್ಗಿ ಅವರನ್ನು ಕೊಂದು ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ
Belagavi: ಗಡಿ ಹೋರಾಟದಲ್ಲಿ ಯಶಸ್ವಿಯಾಗಲು ಒಂದಾಗಿ: ಮನೋಜ್ ಜರಾಂಗೆ ಪಾಟೀಲ