ಜಲದಾಹ ನೀಗಿಸಲು ಪಣ
• ಪುರಸಭಾ ಸದಸ್ಯೆ-ದಂತ ವೈದ್ಯರಿಂದ ಜಲ ದಾನ • ಸ್ವಂತ ಬಾವಿಯಿಂದ ನೀರು ಪೂರೈಕೆ
Team Udayavani, May 23, 2019, 1:47 PM IST
ಅಂಕೋಲಾ: ಬೆಳಂಬಾರದಲ್ಲಿ ದಂತ ವೈದ್ಯ ಜನರಿಗೆ ನೀರು ನೀಡುತ್ತಿರುವುದು.
ಅಂಕೋಲಾ: ತಾಲೂಕಿನಾದ್ಯಂತ ಭೀಕರ ಬರಗಾಲ ಎದುರಾಗಿದೆ. ಈ ವೇಳೆ ಅನೇಕರು ಜಲದಾನ ಮಾಡುವುದರ ಮೂಲಕ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿದ್ದಾರೆ.
ಪಟ್ಟಣ ವ್ಯಾಪ್ತಿಯಲ್ಲಿನ ಹೊನ್ನೆಕೇರಿ ಕನಸೆಗದ್ದೆಯಲ್ಲಿ ನೀರಿನ ಸಮಸ್ಯೆಯಿದ್ದು, ಇಲ್ಲಿ ಪುರಸಭೆ ಸದಸ್ಯೆ ಶಾಂತಲಾ ಅರುಣ ನಾಡಕರ್ಣಿ ತಮ್ಮ ಬಾವಿಯಿಂದ ಪಂಪ್ಸೆಟ್ ಮುಖಾಂತರ ಜನರಿಗೆ ನೀರು ನೀಡುತ್ತಿದ್ದಾರೆ. ಬೆಳಂಬಾರದಲ್ಲಿಯೂ ದಂತ ವೈದ್ಯ ರವಿ ಗೌಡ ನೀರನ್ನು ಸಾರ್ವಜನಿಕರಿಗೆ ಕೊಡುತ್ತಿದ್ದಾರೆ.
ಶಾಂತಲಾ ನಾಡಕರ್ಣಿಯವರು ತಮ್ಮ ಸ್ವಂತ ತೋಟದ ತೆಂಗು ಅಡಿಕೆ ಮರಗಳಿಗೆ ನೀರು ಹಾಕುವುದನ್ನು ನಿಲ್ಲಿಸಿ, ಹೊನ್ನೇಕೆರಿ ಭಾಗದ ಜನರ ಸಮಸ್ಯೆ ಮನಗಂಡು ನೀರು ನೀಡುತ್ತಿದ್ದಾರೆ. ಕಳೆದ 3 ವರ್ಷದಿಂದ ಬೇಸಿಗೆಯಲ್ಲಿ ನೀರಿನ ಕೊರತೆ ಇರುವ ಕಡೆ ನೀರನ್ನು ಪೂರೈಸುತ್ತಿದ್ದಾರೆ.
ಇತ್ತ ಬೆಳಂಬಾರ ಗ್ರಾಮದಲ್ಲಿ ನೀರಿಲ್ಲದೆ ಜನರ ಗೋಳು ಹೇಳತಿರದಾಗಿದ್ದು, ನೀರಿಲ್ಲದೆ ಪರಿತಪಿಸುತ್ತಿರುವ ಜನರಿಗೆ ವೈದ್ಯ ರವಿ ಗೌಡ ತಮ್ಮ ತೋಟದಲ್ಲಿ ಹಾಕಿರುವ ಬೋರ್ವೇಲ್ನಿಂದ ನೀರನ್ನು ನೀಡುತ್ತಿದ್ದಾರೆ. ನಾವು ಈಗಾಗಲೇ ಪ್ರತಿದಿನ ಮಧ್ಯಾಹ್ನದವರೆಗೆ ಸಾಕಷ್ಟು ನೀರನ್ನು ಕೊಡುತ್ತೇವೆ. ಮುಂದೆಯೂ ಪುರಸಭೆ ಟ್ಯಾಂಕರ್ ನೀಡಿದರೆ ಅವಶ್ಯಕವಿರುವ ಅಂಬಾರಕೊಡ್ಲ, ಪುರಲಕ್ಕಿಬೇಣ, ಅಜ್ಜಿಕಟ್ಟಾದ ಹರಿಜನ ಕೇರಿಗೆ ನೀರು ನೀಡಲು ಸಿದ್ಧರಿದ್ದೇವೆ. ದುಡಿಯುವ ಕೈಗಳ ಸಮಯ ಮತ್ತು ಶ್ರಮ ಉಳಿತಾಯ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ ತಿಳಿಸಿದ್ದಾರೆ. ನೀರಿಲ್ಲದೆ ಪರಿತಪಿಸುತ್ತಿರುವ ಜನರಿಗೆ ನೀರನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
•ಅರುಣ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ