ಅತಿಮಾನುಷ ಡಾಂಬರು ರಸ್ತೆ


Team Udayavani, May 23, 2019, 3:35 PM IST

2

ಇಳಿಜಾರಿನಲ್ಲಿ ಗೋಳಾಕಾರದ ವಸ್ತು ಕೆಳಕ್ಕೆ ಚಲಿಸುವುದು ಸಾಮಾನ್ಯ. ಆದರೆ ಕೀನ್ಯಾ ದೇಶಲ್ಲೊಂದು ಜಾಗವಿದೆ. ಅಲ್ಲಿನ ಇಳಿಜಾರಿನಲ್ಲಿ ಬಾಲ್‌ ಅಥವಾ ಯಾವುದೇ ಗೋಳಾಕಾರದ ವಸ್ತುವನ್ನು ಇಟ್ಟರೂ ಇಳಿಮುಖವಾಗಿ ಚಲಿಸದೆ ಮೇಲ್ಮುಖವಾಗಿ ಚಲಿಸುತ್ತದೆ. ವಾಹನಗಳ ಎಂಜಿನ್‌ ಆಫ್ ಮಾಡಿದಾಗ
ಇಳಿಜಾರಿನಲ್ಲಿ ಕೆಳಕ್ಕೆ ಜಾರುವ ಬದಲು ಹಿಮ್ಮುಖವಾಗಿ ಮೇಲ್ಗಡೆ ಚಲಿಸಿದ ಉದಾಹರಣೆಗಳಿವೆ.

ಪೂಜಿಸುತ್ತಿದ್ದ ಜಾಗವಾಗಿತ್ತು ಅನಾದಿ ಕಾಲದಲ್ಲಿ ಈ ಪ್ರದೇಶವನ್ನು ಕಿವುಟಿನಿ ಎಂದು ಕರೆಯಲಾಗುತ್ತಿತ್ತು. ಆಗ ಅಲ್ಲಿ ಡಾಂಬರು ರಸ್ತೆ ಇರಲಿಲ್ಲ. ಈ ವಿಸ್ಮಯವನ್ನು ಸುತ್ತಮುತ್ತಲಿನ ಹಳ್ಳಿಯ ಜನ ತಮ್ಮದೇ ಆದ ರೀತಿಯಲ್ಲಿ
ಬಣ್ಣಿಸುತ್ತಾರೆ. ಬಹಳ ವರ್ಷಗಳ ಹಿಂದೆ ಇಲ್ಲಿನವರು ಈ ಸ್ಥಳದಲ್ಲಿ ತಮ್ಮ ಪೂರ್ವಜರನ್ನು ಒಲಿಸಿಕೊಳ್ಳಲು ಬಲಿ ಕೊಡುತ್ತಿದ್ದರಂತೆ. ಬಲಿಯಿಂದ ಅವರನ್ನು ತೃಪ್ತಿಪಡಿಸಿ, ನಂತರ ಮಳೆ-ಬೆಳೆ ಕೊಡುವಂತೆ ಹಾಗೂ ದುಷ್ಟ ಶಕ್ತಿಗಳನ್ನು ನಾಶಮಾಡುವಂತೆ ಕೋರುತ್ತಿದ್ದರಂತೆ. ಬಲಿ ನೀಡಲು ಬಳಸುತ್ತಿದ್ದ ಬಲಿಪೀಠದಲ್ಲಿ ವಿಶೇಷ ಆಚರಣೆಗಳನ್ನು ನಡೆಸುತ್ತಿದ್ದುದರಿಂದ ಅದನ್ನು ಪವಿತ್ರ ಸ್ಥಳವೆಂದು ಪರಿಗಣಿಸಿ ಪೂಜಿಸುತ್ತಿದ್ದರಂತೆ.

ನಿಗೂಢ ಮನುಷ್ಯರು
ಮ್ಯುಟಿಟುನಿ ಮತ್ತು ಕಿವುಟಿನಿ ಊರುಗಳ ನಂತರ ಸಿಗುವ ಡಾಂಬರು ರಸ್ತೆಯಲ್ಲಿ ಈ ವಿಸ್ಮಯಕಾರಕ ಕಿಟುಲುನಿ ಇದೆ. ಅನೇಕ ತಿರುವುಗಳಿಂದ ಕೂಡಿರುವ, ಸುತ್ತು ಬಳಸಿನ ಈ ದುರ್ಗಮ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ಸಾಹಸವೇ ಸರಿ. ಬೆಟ್ಟ ಅರ್ಧ ಹತ್ತುವವರೆಗೂ ಯಾವುದೇ ರೀತಿಯ ವಿಸ್ಮಯ ಕಾಣುವುದಿಲ್ಲ. ನಂತರ ಈ ಸ್ಥಳಕ್ಕೆ ಗಾಡಿ ಬಂದ ಕೂಡಲೇ ಯಾವುದೇ ವೇಗದಲ್ಲಿ ಚಲಿಸುತ್ತಿದ್ದರೂ ಜಗ್ಗಿದಂತಾಗುತ್ತದೆ ಮತ್ತು ವೇಗ ಸೂಚಕಕ್ಕೂ ತಿಳಿಯದಂತೆ ವೇಗ ಮತ್ತೂ ಹೆಚ್ಚುತ್ತದೆ. ಈ ರಸ್ತೆ ಬಹಳ ವರ್ಷಗಳಿಂದ ಉಪಯೋಗದಲ್ಲಿದ್ದರೂ ಸಹ ಈ ವಿಸ್ಮಯಕಾರಕ ಘಟನೆ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆ ಸ್ಥಳದಲ್ಲಿ ಬಿಳಿ ನಿಲುವಂಗಿ ಧರಿಸಿದ ವಿಚಿತ್ರ ವ್ಯಕ್ತಿಗಳು ಓಡಾಡುವುದನ್ನು ಕಂಡಿರುವುದಾಗಿಯೂ, ಅವರು ಕಂಡಷ್ಟೇ ವೇಗವಾಗಿ ಕಣ್ಮರೆಯಾಗುತ್ತಾರೆ ಎಂಬುದಾಗಿ ಅಲ್ಲಿನ ಹಳ್ಳಿಗರು ಹೇಳುತ್ತಾರೆ. ಆದರೆ ಇಲ್ಲಿಯವರೆಗೆ ಅದಕ್ಕೆ ಪುರಾವೆಗಳು ಸಿಕ್ಕಿಲ್ಲ.

ಅತಿಮಾನುಷ ಶಕ್ತಿಗೆ ಕಾರಣ
ಮಚಕೊಸ್ನಿಂದ ಕಲೊಲೆನಿ ಕಡೆಗೆ ರಸ್ತೆ ಸಂಪರ್ಕ ಕಲ್ಪಿಸುವಾಗ ಅದು ಈ ಬೆಟ್ಟದ ಮುಖಾಂತರ ಹಾದು ಹೋಗಬೇಕಾಗಿ ಬಂತು. ಹಾಗಾಗಿ ವಿಧಿಯಿಲ್ಲದೆ ಸ್ಥಳೀಯರು ತಾವು ನಡೆಸುತ್ತಿದ್ದ ಆಚರಣೆಯನ್ನು ಬೇರೆ ಸ್ಥಳಕ್ಕೆ ಅಂದರೆ ಬೆಟ್ಟದ ಕೆಳಕ್ಕೆ ಸ್ಥಳಾಂತರ ಮಾಡಿಕೊಂಡರಂತೆ. ನೂರಾರು ವರ್ಷಗಳ ಪೂಜೆ ಪುನಸ್ಕಾರಗಳ ಆಚರಣೆಯಿಂದ ಈ ಬಲಿ ಪೀಠವಿದ್ದ ಸ್ಥಳಕ್ಕೆ ಅತಿಮಾನುಶ ಶಕ್ತಿ ಪ್ರಾಪ್ತವಾಯಿತು. ಅದರಿಂದಾಗಿ ವಾಹನಗಳು ತಂತಾನೆ ಏರುಮುಖ
ವಾಗಿ ಚಲಿಸುವುದು ಎಂಬುದು ಹಳ್ಳಿಗರ ವ್ಯಾಖ್ಯಾನ

ಪುರುಷೋತ್ತಮ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.