ಬೆಳ್ಮಣ್ ಟೋಲ್ಗೇಟ್ಗೆ ಮತ್ತೆ ಸರ್ವೆ, ಗ್ರಾಮಸ್ಥರಿಂದ ತಡೆ
Team Udayavani, May 28, 2019, 6:10 AM IST
ಬೆಳ್ಮಣ್: ಕಾರ್ಕಳ ಪಡು ಬಿದ್ರಿ ರಾಜ್ಯ ಹೆದ್ದಾರಿ 1ರಲ್ಲಿ ಬೆಳ್ಮಣ್ ಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಟೋಲ್ ನಿರ್ಮಾಣಕ್ಕೆ ಸೋಮವಾರ ಗುಟ್ಟಾಗಿ ಸರ್ವೆ ನಡೆದಿದ್ದು, ಎಚ್ಚೆತ್ತ ಸಾರ್ವಜನಿಕರು ಸರ್ವೇ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿ ಟೋಲ್ ನಿರ್ಮಿಸಲು ಗುತ್ತಿಗೆ ಪಡೆದುಕೊಂಡಿದ್ದ ಮೈಸೂರಿನ ಮಿತ್ರಾ ಇನ್ಫೋ ಸೊಲ್ಯೂಷನ್ ಸಂಸ್ಥೆ ಪ್ರಾಯಶಃ ಹಿಂದೆ ಸರಿದಿದೆ ಎನ್ನಲಾಗಿದ್ದು, ಈಗ ಕುಂದಾಪುರ ಮೂಲದ ಇನ್ನೊಂದು ಖಾಸಗಿ ಏಜನ್ಸಿ ಸೋಮವಾರ ಸರ್ವೆಗೆ ಇಳಿದಿದೆ. ಬೆಳ್ಮಣ್ ಗ್ರಾ. ಪಂ. ಮುಂಭಾಗದಲ್ಲಿರುವ ತಂಗು ದಾಣದಲ್ಲಿ ಇಬ್ಬರು ಯುವಕರು ಸೋಮವಾರ ಬೆಳಗಿನಿಂದ ಸಂಚರಿಸುವ ವಾಹನಗಳ ಲೆಕ್ಕ ದಾಖಲಿಸು ತ್ತಿರುವುದನ್ನು ಗಮನಿಸಿದ ಬೆಳ್ಮಣ್ ಭಾಗದ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು. ಸರ್ವೆ ನಡೆಸುತ್ತಿರುವುದು ಟೋಲ್ ಗೇಟ್ ನಿರ್ಮಾಣಕ್ಕೆ ಎನ್ನುವುದು ಸ್ಪಷ್ಟವಾಗಿ ಪ್ರತಿರೋಧ ಪ್ರಾರಂಭ ವಾಯಿತು.
ಅಥರ್ವ ಎಂಬ ಏಜೆನ್ಸಿಯ ಅಧಿಕಾರಿ ನಮಗೆ ಯಾವುದಕ್ಕೆ ಸರ್ವೆ ಎನ್ನುವುದು ಗೊತ್ತಿಲ್ಲ, ಸಂಸ್ಥೆ ನೀಡಿದ ಕೆಲಸ ಮಾಡುತ್ತಿದ್ದೇವೆ ಎಂದು ಉತ್ತರಿಸಿದ್ದು, ಇದನ್ನು ಗ್ರಾಮಸ್ಥರು ತೀವ್ರವಾಗಿ ಪ್ರತಿರೋಧಿಸಿದರು. ಇದರಿಂದಾಗಿ ಸರ್ವೇ ಮೊಟಕುಗೊಂಡಿದೆ.
ಬೆಳ್ಮಣ್ನಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಯಾವುದೇ ಗುತ್ತಿಗೆದಾರ, ಖಾಸಗಿ ಸಂಸ್ಥೆ ಅಥವಾ ಏಜೆನ್ಸಿ ಬಂದು ಸರ್ವೆ ನಡೆಸುವುದಕ್ಕೂ ಆಸ್ಪದ ನೀಡುವುದಿಲ್ಲ. ಟೋಲ್ ನಿರ್ಮಾಣದ ವಿರುದ್ಧ ಯಾವುದೇ ರೀತಿಯ ಹೋರಾಟಕ್ಕೂ ಸದಾ ಸಿದ್ಧ.
– ನಂದಳಿಕೆ ಸುಹಾಸ್ ಹೆಗ್ಡೆ , ಹೋರಾಟ ಸಮಿತಿಯ ಸಂಚಾಲಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ