ಭಾಗವತರ ಚರಿತೆಯ ಮೂಲಕ ಯಕ್ಷಗಾನದ ಚರಿತ್ರೆ


Team Udayavani, Jun 2, 2019, 6:00 AM IST

c-5

ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚೆಗೆ “ಶತಸ್ಮತಿ’ ಎಂಬ ಪದ ವಿಶೇಷ ಮಹತ್ವವನ್ನು ಪಡೆದಿದೆ. ಅನೇಕ ಕಲಾವಿದರ ನೂರರ ನೆನಪಿನ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ. ಶತಸ್ಮತಿ ಸಂಪುಟಗಳೂ ಪ್ರಕಟವಾಗಿ ಯಕ್ಷಗಾನದ ಇತಿಹಾಸದ ಅಪೂರ್ವ ದಾಖಲೆ ಎನಿಸುತ್ತಿವೆ. ಇವೆಲ್ಲದರ ನಡುವೆ, ಬಡಗುತಿಟ್ಟು ಯಕ್ಷಗಾನದಲ್ಲಿ ಭಾಗವತಿಕೆಯಲ್ಲಿ ನವ‌ ಮಾರ್ಗಪ್ರವರ್ತಕರೆನಿಸಿದ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು ಮಾತ್ರ ವಿಶೇಷವಾಗಿ ಗಮನಸೆಳೆಯುತ್ತದೆ. ಭಕ್ತಿ¤ಪರಂಪರೆಯ “ಭಾಗವತ’ ಎಂಬ ಪದದ ಅರ್ಥವಂತಿಕೆಗೆ ಅನುಗುಣವಾಗಿ, ಯಕ್ಷಗಾನದ “ಭಾಗವತ’ನ ಉಪಾಧಿಯ ಘನತೆಗೆ ತಕ್ಕುದಾಗಿ ಬದುಕಿದ ನಾರ್ಣಪ್ಪ ಉಪ್ಪೂರರ ನೂರು ವರ್ಷಗಳ ಬದುಕೆಂದರೆ, ಅದರೊಳಗೆ ನೂರಾರು ಕಲಾವಿದರ ಜೀವನಕಥನಗಳೂ ಅಡಕವಾಗಿವೆ. ರಂಗದ ಮೇಲೆ ಕಲಾವಿದರನ್ನು ಸಮರ್ಥವಾಗಿ ನಿರ್ದೇಶಿಸಬಲ್ಲಂಥ “ಗುರು’ತರ ವ್ಯಕ್ತಿತ್ವ ಅವರದು. ಹಾಗಾಗಿಯೇ ಅವರ ಹೆಸರಿನೊಂದಿಗೆ “ಪ್ರಾಚಾರ್ಯ’ ಉಪಾಧಿಯಿದೆ. ಅವರ ಸುಪುತ್ರ ಶ್ರೀಧರ ಉಪ್ಪೂರರೇ ಸಂಪಾದಕತ್ವ ವಹಿಸಿ ಪ್ರಕಟಿಸಿರುವ ಅವರ ಶತಮಾನದ ಸ್ಮರಣ ಸಂಪುಟ ಕೇವಲ ಭಾಗವತರೊಬ್ಬರ ಸಾಧನೆಯ ಕಥನವಾಗದೆ, ಬಡಗುತಿಟ್ಟಿನ ಒಂದು ಕಾಲದ ಐತಿಹಾಸಿಕ ದಾಖಲೆಯಂತಿದೆ. ಅಭಿಮಾನ, ಅಭಿಜ್ಞಾನ, ಆತ್ಮೀಯತೆ, ಅನುಬಂಧ, ಅವಲೋಕ ಎಂಬ ಐದು ವಿಭಾಗಗಳಲ್ಲಿ ಈ ಕೃತಿ ಹರಡಿಕೊಂಡಿದೆ. ಸುಮಾರು 100ಕ್ಕಿಂತ ಅಧಿಕ ಸಹೃದಯ ಲೇಖಕರು, ಕಲಾವಿಮರ್ಶಕರು, ಕಲಾವಿದರು, ಕಲಾಭಿಜ್ಞರು ಭಾಗವತರ ನೆನಪುಗಳನ್ನು ಹಂಚಿ ಕೊಂಡಿದ್ದಾರೆ.

ನಾರ್ಣಪ್ಪ ಉಪ್ಪೂರರದು ಸರ್ವಸಮರ್ಪಣಾಭಾವದ ಬದುಕು. ಯಕ್ಷಗಾನವನ್ನಲ್ಲದೆ ಬೇರೆ ಯೋಚಿಸಿದವರೇ ಅಲ್ಲ. ಹಣಕ್ಕೆ ಬಾಗದ, ಹೆಸರಿಗೆ ಬೀಗದ ಸ್ವಾಭಿಮಾನಿ. ಹಾಗಾಗಿಯೇ ಅವರು ಸತ್ತ ಮೇಲೆಯೂ ಹೀಗೆ ನಮ್ಮ ನಡುವೆ ಬದುಕುತ್ತಿದ್ದಾರೆ.

ಶತಸ್ಮತಿ
(ಭಾಗವತ, ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು)
ಸಂ.: ಡಾ. ಶ್ರೀಧರ ಉಪ್ಪೂರ
ಪ್ರ.: ಮಾರ್ವಿ ನಾರ್ಣಪ್ಪ ಉಪ್ಪೂರ ಜನ್ಮಶತಮಾನೋ ತ್ಸವ ಸಮಿತಿ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ- 576226, ಉಡುಪಿ ಜಿಲ್ಲೆ
ಮೊದಲ ಮುದ್ರಣ: 2019 ಬೆಲೆ: ರೂ. 300

ಶ್ರೀಕೃಷ್ಣ

ಟಾಪ್ ನ್ಯೂಸ್

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.