ಚಿರಂಜೀವಿ ಮಿತ್ರವೃಂದದಿಂದ ಪುಸ್ತಕ, ಲೇಖನ ಸಾಮಗ್ರಿ ವಿತರಣೆ
Team Udayavani, Jun 4, 2019, 6:00 AM IST
ಪೆರ್ಲ: ಕುಂಟಾಲುಮೂಲೆ ಚಿರಂಜೀವಿ ಮಿತ್ರವೃಂದ ಇದರ ಸಹ ಸಂಸ್ಥೆ ಚಿರಂಜೀವಿ ಯಕ್ಷಗಾನ ಕಲಾಸಂಘದ ವಾರ್ಷಿಕ ಆಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ಉಚಿತವಾಗಿ ಬರವಣಿಗೆ ಸಾಮಾಗ್ರಿಗಳನ್ನು ಜೂ.2ರಂದು ವಿತರಿಸಲಾಯಿತು.
ಹನುಮಾನ್ ಕ್ಲಬ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೆರ್ಲ ಎಸ್ಎನ್ಎಚ್ಎಸ್ ಶಾಲಾ ಶಿಕ್ಷಕ ಪ್ರಕಾಶ್ ನೆಲ್ಲಿಕಳಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯೆಯು ವಿದ್ಯಾದೇಗುಲದಿಂದ ಲಭಿಸಿದರೆ ಪ್ರೋತ್ಸಾಹವು ಇಂತಹ ಸಂಘ ಸಂಸ್ಥೆಗಳಿಂದ ಲಭಿಸುತ್ತದೆ .ಯಕ್ಷಗಾನದ ತವರೂರು ಆದ ಈ ನೆಲದಲ್ಲಿ ಪುಟಾಣಿ ಮಕ್ಕಳ ಸಹಿತ ಆಸಕ್ತ ಯುವಕರಿಗೂ ಯಕ್ಷಗಾನ ನಾಟ್ಯ ತರಬೇತಿಯನ್ನು ನೀಡುವ ಸಂಘದ ಕಾರ್ಯವು ಶ್ಲಾಘನೀಯ ಎಂದು ಹೇಳಿದರು.
ಯಕ್ಷಗಾನ ನಾಟ್ಯ ಗುರು ಜಯರಾಮ ಪಾಟಾಳಿ ಪಡುಮಲೆ ಮುಖ್ಯ ಅತಿಥಿಯಾಗಿದ್ದರು.ಅವರು, ಗುರು ಕೇವಲ ನಿಮಿತ್ತ ಮಾತ್ರ.ನಾಟ್ಯ ಕಲಿಯುವ ವಿದ್ಯಾರ್ಥಿಗಳ ಆಸಕ್ತಿ,ಶ್ರದ್ಧೆ ,ಛಲ,ನಿಷ್ಠೆಯು ಅವರನ್ನು ಉನ್ನತಿಗೆ ಕೊಂಡೊಯ್ಯುತ್ತದೆ ಎಂದರು.ನಾರಾಯಣ ಗುರುಸ್ವಾಮಿ ಶುಭ ಹಾರೈಸಿದರು.ಬಾಲಕೃಷ್ಣ ಸ್ವಾಗತಿಸಿ ಪ್ರಸ್ತಾವಿಸಿದರು.ಕೃಷ್ಣ ನೆಲ್ಲಿಕಳಯ ವಂದಿಸಿ,ಗೋಪಾಲಕೃಷ್ಣ ಕಾರೆಕಾಡು ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !