ಯುವ ಸಮುದಾಯ ಪರಿಸರ ರಕ್ಷಣೆ ಮಾಡಲಿ: ಜಲಗೇರಿ
Team Udayavani, Jun 6, 2019, 9:52 AM IST
ಗಜೇಂದ್ರಗಡ: ಜಗದಂಬಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನ ಆಚರಿಸಲಾಯಿತು.
ಗಜೇಂದ್ರಗಡ: ಪರಿಸರವನ್ನು ವಿಪತ್ತಿನಿಂದ ಕಾಪಾಡುವುದಕ್ಕಾಗಿ ಯುವ ಸಮೂಹ ಪರಿಸರ ರಕ್ಷಣೆಯ ಹೊಣೆ ಹೊರಬೇಕಾದ ಅಗತ್ಯವಿದ್ದು, ಹಸಿರು ಕಾನನ ಉಳಿವಿಗಾಗಿ ಎಲ್ಲರೂ ಸಸಿ ನೆಡುವ ಸಂಕಲ್ಪ ಮಾಡಬೇಕು ಎಂದು ಪಿಎಸ್ಐ ಆರ್.ವೈ. ಜಲಗೇರಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಬದಲಾವಣೆ ಗಾಳಿ ಬೀಸಬೇಕಾದರೆ ಯುವಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅವರಲ್ಲಿನ ಉತ್ಸಾಹ ಹೊಸ ಅಧ್ಯಾಯ ಬರೆಯಲು ಸಾಧ್ಯ. ಹೀಗಾಗಿ ಯುವ ಶಕ್ತಿ ಒಂದಾಗಿ ಪರಿಸರ ರಕ್ಷಣೆ ಜವಾಬ್ದಾರಿ ಹೊರಬೇಕು ಎಂದರು.
ದೇಶದ ಶ್ರೀಮಂತಿಕೆ ಹೆಚ್ಚಿಸುವ ಅಂಶಗಳಲ್ಲಿ ಅರಣ್ಯವು ಒಂದಾಗಿದೆ. ಅದನ್ನು ಉಳಿಸುವ ಹೊಣೆಗಾರಿಗೆ ಎಲ್ಲರೂ ಹೊರಬೇಕಿದೆ. ಗಣಿಗಾರಿಕೆ, ಕೈಗಾರೀಕರಣ, ನಗರೀಕರಣ, ಮರಭೂಮೀಕರಣ ಹಾಗೂ ಜನಸಂಖ್ಯಾ ಸ್ಫೋಟದಿಂದಾಗಿ ಅರಣ್ಯ ಸಂಪತ್ತು ಕಣ್ಮರೆಯಾಗುತ್ತಿದೆ. ಸಸ್ಯದಲ್ಲಿ ಕಾಣಬಹುದಾದ ಹಲವು ಪ್ರಭೇಧಗಳು ಅವಸಾನದ ಅಂಚಿನಲ್ಲಿವೆ ಎಂದು ಹೇಳಿದರು.
ಅಶೋಕ ದಿವಾಣದ, ರಾಜಾರಾಂ ಕಲಾಲ, ಬಸವರಾಜ ಯಲಿಗಾರ, ಮುತ್ತು ದಿವಾಣದ, ಸುರೇಶ ಮಂತಾ, ನಿಂಗಪ್ಪ ಹಲಬಾಗಿಲ, ಎಸ್.ಎಸ್ ಹೂಗಾರ, ವೈ.ಎಸ್. ಮೇದಾರ, ಪ್ರೇಮಾ ಶಿರಹಟ್ಟಿ, ಬಿ.ಎನ್. ಗುಡ್ಡದ ಇದ್ದರು.
ಜಗದಂಬಾ ಆಂಗ್ಲ ಮಾಧ್ಯಮ ಶಾಲೆ: ಪಟ್ಟಣದ ಶ್ರೀ ಜಗದಂಬಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಗೆ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಚಾಲನೆ ನೀಡಿದರು. ಟಿ.ವಿ. ರಾಯಬಾಗಿ, ಸೂಡಿ ಗ್ರಾಪಂ ಉಪಾಧ್ಯಕ್ಷ ಶಶಿಧರ ವಕ್ಕಲರ, ಭಾಸ್ಕರ ರಾಯಬಾಗಿ, ಕೆ.ಎಸ್. ಪವಾರ, ಜಿ.ಎಚ್. ರಂಗ್ರೇಜಿ, ಬಸವರಾಜ ಕೊಟಗಿ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು
Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ
Lack of Water: ನೀರಿನ ಅಭಾವ… ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಜೆ
Mundargi: ದುರಸ್ತಿ ಸಂದರ್ಭ ವಿದ್ಯುತ್ ಶಾಕ್ ; ಕೂಲಿಕಾರ ಸಾವು
ಮುಂಡರಗಿ-ರಾಜ್ಯ ಸರ್ಕಾರವೂ ಬರ ಪರಿಹಾರ ನೀಡಲಿ: ಶಿವಾನಂದ ಇಟಗಿ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?
ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ
Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ
Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!
ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !