ಗಾಂಧೀಜಿ ಬೋಧನೆಗಳು ಬದುಕಿಗೆ ದಾರಿದೀಪ: ರಾಧಾಕೃಷ್ಣನ್‌


Team Udayavani, Jun 16, 2019, 6:10 AM IST

radhakrishna

ಮಂಜೇಶ್ವರ: ಸಮಾಜದಲ್ಲಿ ಅನಾಚಾರಗಳು ಹಾಗೂ ಸ್ವತ್ಛಂದತೆಗಳು ತಾಂಡವವಾಡುತ್ತಿದ್ದು, ಯಾವ ಹಾದಿಯಲ್ಲಾದರೂ ಹಣ ಮತ್ತು ಅಧಿಕಾರವನ್ನು ಕೈವಶಪಡಿಸಬೇಕೆಂಬ ಮನುಷ್ಯನ ಹಪಾಹಪಿ ಹಿಂಸೆ, ದಬ್ಟಾಳಿಕೆ ಹಾಗೂ ದಮನಗಳಿಗೆ ಜನರನ್ನು ಪ್ರೇರೇಪಿಸುತ್ತವೆ. ಕೇವಲ ಬೆರಳೆಣಿಕೆಯಷ್ಟು ಜನರು ಇದರ ಫಲಾನುಭವಿಗಳಾದರೆ, ಕೋಟ್ಯಂತರ ಜನರು ಇದರಿಂದಾಗಿ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಹಿಂಸೆ, ಕೊಲೆ, ಮಾದಕ ವಸ್ತುಗಳ ಬಳಕೆ ಜನರಲ್ಲಿ ಮನುಷ್ಯತ್ವವನ್ನು ಇಲ್ಲವಾಗಿಸುತ್ತವೆ ಎಂದು ಹಿರಿಯ ಗಾಂಧೀವಾದಿ, ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಡಾ| ಎನ್‌.ರಾಧಾಕೃಷ್ಣನ್‌ ಹೇಳಿದರು.

ಹಿಂಸೆ, ಕೊಲೆ, ಮದ್ಯ-ಮಾದಕವಸ್ತಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತರ ಸಂಗಮ ಹಾಗೂ ವಿನೋಭಾ ವೆಂಕಟೇಶ್‌ ರಾವ್‌ ಶಾಂತಿಸೇನಾ ಫೌಂಡೇಶನ್‌ ವಾರ್ಷಿಕ ಅವಲೋಕನ ಸಭೆಯನ್ನು ಗುರುವಾರ ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿಯ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಆರ್‌.ಪಾಟೀಲ್‌ಅವರು ಅಧ್ಯಕ್ಷತೆ ವಹಿಸಿದ್ದರು.

ಶಾಂತಿ ಸ್ಥಾಪನ ದಿನ
1957ರಲ್ಲಿ ಆಚಾರ್ಯ ವಿನೋಭಾವೆ ಅವರಿಂದ ಮಂಜೇಶ್ವರದಲ್ಲಿ ಆರಂಭಿಸಲ್ಪಟ್ಟ ಶಾಂತಿಸೇನೆಯು ಕ್ರಿಯಾತ್ಮಕವಾಗಿ ಮುನ್ನಡೆಯಲು ತೀರ್ಮಾನಿಸಿದೆ. ಹೊಸ ತಲೆಮಾರಿಗೆ ಹಸ್ತಾಂತರಿಸಲ್ಪಟ್ಟ ಗಾಂಧೀಜಿಯವರ ಶಾಂತಿಸೇನಾ ಪರಿಕಲ್ಪನೆಯನ್ನು ರಾಷ್ಟ್ರವ್ಯಾಪಿ ಹರಡುವ ನಿಟ್ಟಿನಲ್ಲಿ ಶಾಂತಿಸೇನೆಯ ಸ್ಥಾಪನಾ ದಿನವಾದ ಆಗಸ್ಟ್‌ 23 ರಂದು ಮಂಜೇಶ್ವರದಲ್ಲಿ ರಾಷ್ಟ್ರೀಯ ಶಾಂತಿಸೇನಾ ದಿನವನ್ನು ಆಚರಿಸಲು ತೀರ್ಮಾನಿಸಿದ್ದು, ದೇಶ-ವಿದೇಶಗಳ ಪ್ರತಿನಿಧಿಗಳು ಭಾಗವ ಹಿಸುವ ನಿರೀಕ್ಷೆದೆಯೆಂದು ಡಾ| ಎನ್‌.ರಾಧಾಕೃಷ್ಣನ್‌ ಹೇಳಿದರು.

ಮುಖ್ಯ ಅತಿಥಿಗಳಾಗಿ ವಿ.ಕೆ.ಮೋಹನನ್‌, ಆರ್‌.ಪಿ.ರವೀಂದ್ರನ್‌, ಫಾದರ್‌ ಸ್ಕರಿಯಾ, ಶಿವನ್‌ ಅರುಣಾಚಲಂ, ರಂಜಿತ್‌ ಸರಕಾರ್‌, ಮಮತಾ ದಿವಾಕರ್‌, ಜೀನ್‌ ಲವೀನಾ ಮೊಂತೇರೋ, ಶಂಶಾದ್‌ ಶುಕೂರ್‌, ಕ್ಯಾಪ್ಟನ್‌ ನಂಬ್ಯಾರ್‌, ಪ್ರೋ.ಮೇರಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿವಾಕರ್‌ ಎಸ್‌ ಜೆ ಸ್ವಾಗತಿಸಿ, ಉಮ್ಮರ್‌ ಬೋರ್ಕಳ ವಂದಿಸಿದರು.

ಮರು ವ್ಯಾಖ್ಯಾನ
ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬದುಕು ಮತ್ತು ಬೋಧನೆಗಳೇ ದಾರಿದೀಪವಾಗಿವೆ. ಈ ನಿಟ್ಟಿನಲ್ಲಿ ಗಾಂಧೀಜಿಯವರನ್ನು ಕಂಡು ಕೇಳರಿಯದ ಹೊಸ ತಲೆಮಾರಿಗೆ ಗಾಂಧೀಜಿಯವರ ಚಿಂತನೆಗಳು ಸೀÌಕೃತವಾಗುವ ರೀತಿಯಲ್ಲಿ ಮರು ವ್ಯಾಖ್ಯಾನಗೊಳಿಸಬೇಕಾದ ಜವಾಬ್ದಾರಿ ನಮಗಿದೆ ಎಂದು ಡಾ| ಎನ್‌.ರಾಧಾಕೃಷ್ಣನ್‌ ಹೇಳಿದರು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.