ಅಪಾಯದಲ್ಲಿ ಕುಂದಾಪುರ ಫ್ಲೈಓವರ್‌!

ಸ್ಥಗಿತವಾದ ಕಾಮಗಾರಿ ಮುಂದುವರಿಸುವ ಸೂಚನೆಯೇ ಇಲ್ಲ ;ಎಸಿ ಆದೇಶವೂ ಪಾಲನೆಯಾಗಿಲ್ಲ

Team Udayavani, Jun 18, 2019, 6:00 AM IST

KUNDAPUR

ಕುಂದಾಪುರ: ತೊಕ್ಕೊಟ್ಟು ಮೇಲ್ಸೇತುವೆ ಉದ್ಘಾಟನೆಯಾಯಿತು. ಪಂಪ್‌ವೆಲ್‌ ಫ್ಲೈಓವರ್‌ ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಅಲ್ಲಿನ ಸಂಸದರೇ ಹೇಳಿದ್ದಾರೆ. ಆದರೆ ನಟ್ಟನಡು ರಸ್ತೆಯಲ್ಲಿ ಕಳೆದ ಏಳು ವರ್ಷಗಳಿಂದ ಎದ್ದುನಿಂತ ಕುಂದಾಪುರ ಫ್ಲೈಓವರ್‌ ಮಾತ್ರ ಇನ್ನೂ ಹಾಗೆಯೇ ಇದೆ. ಇದರ ಉದ್ಘಾಟನೆ ಗಗನಕುಸುಮವಾಗಿದೆ. ಸದ್ಯದ ಮಟ್ಟಿಗೆ ಮೇಲೇಳುವ ಲಕ್ಷಣ ಕಾಣುವುದಿಲ್ಲ. ಸ್ಥಗಿತವಾದ ಕಾಮಗಾರಿ ಕೈಗೊಳ್ಳುವ ಯಾವುದೇ ಸೂಚನೆಗಳಿಲ್ಲ. ಈ ಮಧ್ಯೆ ಊರ ಜನರಿಗೆ ಫ್ಲೈಓವರ್‌ ಅಪಾಯದಲ್ಲಿದೆ ಎಂಬ ಆತಂಕ ಕಾಡತೊಡಗಿದೆ.

ಏನಿದು ಆತಂಕ
ಬಸ್ರೂರು ಮೂರುಕೈಯಲ್ಲಿ ಅಂಡರ್‌ಪಾಸ್‌ ಕಾಮಗಾರಿ ಅರ್ಧಕ್ಕೆ ಸ್ಥಾಗಿತ್ಯವಾಗಿದೆ. ಇದಕ್ಕೆ ಹಾಕಿದ ಕಬ್ಬಿಣದ ಸಲಕರಣೆಗಳು ಹಾಗೆಯೇ ಇವೆ. ಕೆಲವು ಕಡೆ ಕಾಂಕ್ರೀಟ್‌ ಕಾಮಗಾರಿ ಕೂಡಾ ಆಗಿದೆ. ಅರ್ಧರ್ಧ ನಡೆದ ಕಾಮಗಾರಿಗೆ ಅಳವಡಿಸಿದ ಕಬ್ಬಿಣ ಕೂಡಾ ತೆಗೆಯಲಾಗಿಲ್ಲ. ಮಳೆಗೆ ಈ ಕಬ್ಬಿಣ ತುಕ್ಕು ಹಿಡಿದರೆ ಅಂಡರ್‌ಪಾಸ್‌ಗೆ ಅಪಾಯ ಆಗಲಾರದೇ ಎಂಬ ಅನುಮಾನ ಕಾಡತೊಡಗಿದೆ. ಹಾಗೂ ಇದರ ಸುತ್ತಮುತ್ತ ಮಳೆಯ ಕೆಸರು ನೀರು ನಿಲ್ಲುತ್ತದೆ. ಈಗಾಗಲೇ ಸರ್ವಿಸ್‌ ರಸ್ತೆಯಲ್ಲಿ ಓಡಾಡುವ ಹೆದ್ದಾರಿಯ ವಾಹನಗಳು ಈ ಆವರಣದಲ್ಲಿ ಬಿದ್ದು ಹಾನಿ ಸಂಭವಿಸಿದೆ. ಇನ್ನು ನೀರು ತುಂಬಿದ ಗುಂಡಿಗೆ ವಾಹನಗಳು ಬೀಳದಿದ್ದರೆ ಸಾಕು ಎಂದು ಜನ ಪ್ರಾರ್ಥಿಸುತ್ತಿದ್ದಾರೆ.

ರಸ್ತೆ ಕುಸಿಯುವ ಅಪಾಯ
ಎಲ್‌ಐಸಿ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ, ಡಿವೈಎಸ್‌ಪಿ ಕಚೇರಿ, ವಡೇರಹೋಬಳಿ ಕಡೆಗೆ ಹೋಗುವ ರಸ್ತೆ ಇರುವಲ್ಲಿ ಹೆದ್ದಾರಿಗೆ ಫ್ಲೈಓವರ್‌ನಿಂದ ಇಳಿಯುವ ರಸ್ತೆ ನಿರ್ಮಿಸುವ ಸಲುವಾಗಿ ರಾಶಿ ರಾಶಿ ಮಣ್ಣು ತಂದು ಹಾಕಲಾಗಿದೆ. ಇದಕ್ಕೆ ಸೂಕ್ತ ತಡೆ ನಿರ್ಮಿಸಿಲ್ಲ. ಭಾರೀ ಮಳೆಯಾದರೆ ಅಲ್ಲಲ್ಲಿ ಹಾಕಿದ ಅರೆಬರೆ ಕಾಮಗಾರಿಯ ತಡೆಯೇ ಕುಸಿಯುವ ಅಪಾಯವಿದೆ. ಮಣ್ಣಿನ ರಾಶಿಯ ಪಕ್ಕದಲ್ಲಿ ನೀರು ಹಾದು ಹೋಗಲು ಸೂಕ್ತ ಚರಂಡಿ ಮಾಡಿಲ್ಲ. ಈ ಮಣ್ಣು ಪಕ್ಕದ ರಸ್ತೆಗೆ ಬೀಳುವ ಸಾಧ್ಯತೆಯಿದೆ. ಹಾಗಾದಾಗ ಹೆದ್ದಾರಿಯೇ ಆದ ಸರ್ವಿಸ್‌ ರಸ್ತೆಯಲ್ಲಿ ವಾಹನಗಳ ಓಡಾಟ ಅಸಾಧ್ಯ.

ಫ್ಲೈಓವರ್‌
ಶಾಸ್ತ್ರಿ ಸರ್ಕಲ್‌ನಲ್ಲಿ ಫ್ಲೈಓವರ್‌ ಕಾಮಗಾರಿ ಬಾಕಿಯಾಗಿದೆ. ಇದಕ್ಕೆಂದು ತಂದ ಸಲಕರಣೆಗಳನ್ನು ಫ್ಲೈಓವರ್‌ನ ಕೆಳಗೆ ರಾಶಿ ಹಾಕಲಾಗಿದೆ. ಅವು ತುಕ್ಕು ಹಿಡಿದು ಹಾಳಾಗುತ್ತಿವೆ. ಅಲ್ಲಿ ಕೊಳಚೆ ನೀರು ನಿಲ್ಲುವುದು, ಕಬ್ಬಿಣ ಸಲಕರಣೆಗಳ ರಾಶಿಯಲ್ಲಿ ವಾಹನಗಳ್ಳೋ ಮನುಷ್ಯರೋ ಓಡಾಡಿದರೆ ಅಪಾಯ ಸಂಭವಿಸದೇ ಇರಲಾರದು.

ಗುತ್ತಿಗೆ ಸಮಸ್ಯೆ
ನವಯುಗ ಕಂಪೆನಿಗೆ ಗುತ್ತಿಗೆ ದೊರೆತಿದ್ದು ಅವರ ಹಣಕಾಸಿನ ಸಮಸ್ಯೆಯಿಂದಾಗಿ ಕಾಮಗಾರಿ ಕುಂಟುತ್ತಾ ಸಾಗಿದೆ. ಆದರೆ ಟೋಲ್‌ ಸಂಗ್ರಹ ಮಾತ್ರ ನಿಂತಿಲ್ಲ. ಈಗ ಆಂಧ್ರಪ್ರದೇಶದಲ್ಲಿ ನವಯುಗ ಕಂಪೆನಿಯ ಸ್ಥಾಪಕರದ್ದೇ ಸರಕಾರ ಅಸ್ತಿತ್ವಕ್ಕೆ ಬಂದಿದ್ದು ಇನ್ನಾದರೂ ಕಾಮಗಾರಿ ಚುರುಕಾದೀತೇ ಎಂಬ ಆಶಾವಾದ ಜನರದ್ದು.

ಸಂಸದರಿಗಿಲ್ಲ ಆಸಕ್ತಿ
ಚುನಾವಣೆ ಸಂದರ್ಭ ಸಾಕಷ್ಟು ಟ್ರೋಲ್‌ಗೆ, ಟೀಕೆಗೆ ಒಳಗಾದ ಸಂಸದರು ಈ ಕಾಮಗಾರಿಯನ್ನು ಪೂರೈಸಿಕೊಡುವ ನಿಟ್ಟಿನಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಜನರೇ ಯಾವುದಾದರೂ ರೂಪದಲ್ಲಿ ಹೋರಾಟ ಮಾಡದ ಹೊರತು ಇದಕ್ಕೊಂದು ಮುಕ್ತಿ ಸಾಧ್ಯವಿಲ್ಲವೇ ಎಂದಾಗಿದೆ.

ಎಸಿ ಆದೇಶ ಉಲ್ಲಂಘನೆ
ಫ್ಲೈಓವರ್‌ನ್ನು ಮಾ.31ರ ಒಳಗೆ ಪೂರ್ಣಗೊಳಿಸಿ ಎ. 1ರಿಂದ ಸಂಚಾರಕ್ಕೆ ಬಿಟ್ಟುಕೊಡಬೇಕು, ಅಂಡರ್‌ಪಾಸ್‌ ಕಾಮಗಾರಿಯನ್ನು ಎಪ್ರಿಲ್‌ ಅಂತ್ಯದ ಒಳಗೆ ಪೂರೈಸಬೇಕು ಎಂದು ಹಿಂದಿನ ಸಹಾಯಕ ಕಮಿಷನರ್‌ ಭೂಬಾಲನ್‌ ಅವರು ಎಸಿ ಕೋರ್ಟಿನಲ್ಲಿ ಆದೇಶ ನೀಡಿದ್ದರು. ಆದರೆ ಎಸಿಯವರ ಆದೇಶ ಉಲ್ಲಂಘನೆಯಾಗಿದ್ದು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಕೇಸು ಹೋಗಲಿದೆಯೇ ಎನ್ನುವ ಅನುಮಾನ ಹಾಗೆಯೇ ಉಳಿದಿದೆ.

ತಳಪಾಯಕ್ಕೆ ಅಪಾಯ
ಫ್ಲೈಓವರ್‌ಗಾಗಿ ನಿರ್ಮಿಸಿದ ಪಿಲ್ಲರ್‌ನ ಬುಡದಲ್ಲಿ ಮಣ್ಣು ತೆಗೆಯಲಾಗಿದೆ. ಇಲ್ಲಿ ರಸ್ತೆ ನಿರ್ಮಿಸಿ ಫ್ಲೈಓವರ್‌ನಿಂದ ಮುಖ್ಯ ರಸ್ತೆಗೆ ಸಂಪರ್ಕ ಕೊಡುವುದು ಇದರ ಉದ್ದೇಶ. ಆದರೆ ಮಣ್ಣು ತೆಗೆಯುವ ಕಾಮಗಾರಿ ನಡೆದ ಬಳಿಕ ಒಟ್ಟು ಕಾಮಗಾರಿ ಸ್ಥಗಿತಗೊಂಡಿದೆ. ಪರಿಣಾಮ ತೆಗೆದಿಟ್ಟ ಗುಂಡಿ ಹಾಗೆಯೇ ಇದೆ. ಅದರಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತದೆ. ಒಮ್ಮೆ ನಿಂತ ನೀರು ಕೆಲವು ದಿನಗಳಾದರೂ ಖಾಲಿಯಾಗುವುದಿಲ್ಲ. ಇದು ಪಿಲ್ಲರ್‌ನ ಬುಡದಲ್ಲಿ ಮಣ್ಣು ಕುಸಿತವಾಗುವಂತೆ ಮಾಡಿದರೆ ಒಟ್ಟು ಫ್ಲೈಓವರ್‌ ಕುಸಿದು ಬೀಳುವ ಅಪಾಯವಿದೆ.

ಸದ್ಯಕ್ಕಿಲ್ಲ
ಫ್ಲೈಓವರ್‌ ಕಾಮಗಾರಿ ಸದ್ಯಕ್ಕೆ ನಡೆಯುವ ಲಕ್ಷಣ ಕಾಣುತ್ತಿಲ್ಲ. ಮಳೆಗಾಲ ಮುಗಿದ ಬಳಿಕ ನೋಡಬೇಕಷ್ಟೇ.
-ಶೋಭಾ ಕರಂದ್ಲಾಜೆ, ಸಂಸದರು

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್‌ಪಾರ್ಕ್‌ ಸುರಕ್ಷಿತ

Hiliyana: ಮಗನ ಕುಡಿತದ ಚಟದಿಂದ ನೊಂದು ತಂದೆ ಆತ್ಮಹತ್ಯೆ

Hiliyana: ಮಗನ ಕುಡಿತದ ಚಟದಿಂದ ನೊಂದು ತಂದೆ ಆತ್ಮಹತ್ಯೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.