ಅಶ್ಲೀಲ ದೃಶ್ಯಕ್ಕೆ ಮಾತ್ರ ನನ್ನ ವಿರೋಧ: ಹುಚ್ಚ ವೆಂಕಟ್
Team Udayavani, Jun 27, 2019, 3:05 AM IST
ಬೆಂಗಳೂರು: ಐ ಲವ್ ಯೂ ಸಿನಿಮಾದ ಅಶ್ಲೀಲ ದೃಶ್ಯಗಳಿಗೆ ಮಾತ್ರ ನನ್ನ ವಿರೋಧವಿದೆ. ಅದರ ಹೊರತು ಚಿತ್ರವನ್ನು ನಾನು ಬೆಂಬಲಿಸುತ್ತೇನೆ. ನಿರ್ದೇಶಕ ಚಂದ್ರು ನನಗೆ ಸಹೋದರ ಸಮಾನರು ಎಂದು ನಟ ಹುಚ್ಚ ವೆಂಕಟ್ ಸ್ಪಷ್ಟಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೆಂಕಟ್, ಸಿನಿಮಾ ಕುರಿತ ನನ್ನ ಅಭಿಪ್ರಾಯವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದಕ್ಕೆ ನಾನು ಹೊಣೆಯಲ್ಲ. ಆದರೆ ಚಿತ್ರದಲ್ಲಿನ ಅಶ್ಲೀಲ ದೃಶ್ಯಗಳು ಮಹಿಳಾ ಸಮುದಾಯವನ್ನು ಅವಮಾನಿಸುವಂತಿವೆ ಎಂದರು.
ಕೆಲವು ದೃಶ್ಯಗಳ ಹೊರತಾಗಿ ಇಡೀ ಸಿನಿಮಾ ಚೆನ್ನಾಗಿರಬಹುದು. ಜನರಿಗೆ ಇಷ್ಟವಾದರೆ ಸಿನಿಮಾ ಯಶಸ್ವಿಯಾಗುತ್ತದೆ. ಟ್ರೇಲರ್ನ ದೃಶ್ಯಗಳನ್ನು ನಂಬದೆ ಇಡೀ ಸಿನಿಮಾ ಕಥೆ, ನಿರೂಪಣೆಯಿಂದಾಗಿ ಚಿತ್ರ ಯಶಸ್ವಿಯಾಗುತ್ತದೆ.
ಚಂದ್ರು ಅವರು ನನ್ನ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು. ಹೆಣ್ಣು ಮಕ್ಕಳ ಮೇಲಿನ ಕಾಳಜಿಯಿಂದಷ್ಟೇ ನಾನು ಹಿಂದೆ ಸಿನಿಮಾಕ್ಕೆ ವಿರೋಧ ಮಾಡಿದ್ದೇನೆ. ಸಿನಿಮಾದಲ್ಲಿನ ಕೆಲವು ದೃಶ್ಯಗಳನ್ನು ತೆಗೆದು ಪ್ರದರ್ಶಿಸಲಿ ಎಂದು ಈಗಲೂ ಹೇಳುತ್ತೇನೆ ಎಂದರು.
ಸಿನಿಮಾಗಳಲ್ಲಿ ಹೆಣ್ಣು ಮಕ್ಕಳಿಗೆ ಅಶ್ಲೀಲವಾಗಿ ತೋರಿಸುವ ಬಗ್ಗೆ ಸೆನ್ಸಾರ್ ಮಂಡಳಿ ಹಾಗೂ ಮಹಿಳಾ ಆಯೋಗ ಎಚ್ಚರಿಕೆ ವಹಿಸಬೇಕು. ಆಶ್ಲೀಲತೆ ಇಲ್ಲದೆಯೇ ಸಿನಿಮಾ ಗೆಲ್ಲಿಸುವಂತಹ ಪ್ರತಿಭಾನ್ವಿತರು ನಮ್ಮ ಚಿತ್ರರಂಗದಲ್ಲಿದ್ದಾರೆ.
ಹಾಗಾಗಿ ಚಿತ್ರರಂಗದ ಎಲ್ಲರಲ್ಲೂ ಮನವಿ ಮಾಡುತ್ತೇನೆ. ಮುಂದಿನ ಸಿನಿಮಾಗಳಲ್ಲಿ ಹೆಣ್ಣು ಮಕ್ಕಳನ್ನು ಆಶ್ಲೀಲವಾಗಿ ತೋರಿಸಬೇಡಿ. ನಾನು ಉಪೇಂದ್ರ ಅವರ ಬಗ್ಗೆ ಎಲ್ಲಿಯೂ ಏನನ್ನೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು: ಕಳೆದ ವರ್ಷ ಪ್ರವಾಹಕ್ಕೆ ತುತ್ತಾಗಿದ್ದ ಕೊಡಗು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವಂತೆ ಅಲ್ಲಿನ ಜನರು ಒತ್ತಾಯ ಮಾಡುತ್ತಿದ್ದಾರೆ.
ಆಭಾಗದಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ ಮೈಸೂರು ಅಥವಾ ಮಂಗಳೂರಿಗೆ ಹೋಗಬೇಕು. ಈ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗಮನಹರಿಸಿ ಆ ಜನರ ಬೇಡಿಕೆ ಈಡೇರಿಸಬೇಕೆಂದು ವೆಂಕಟ್ ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು
ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ
LS Polls: ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳಿಂದ ಮತಗಟ್ಟೆಯಲ್ಲಿ ಮೊದಲ ಮತದಾನ
Tollywood: ಜೂ.ಎನ್ಟಿಆರ್ ʼದೇವರʼ ಚಿತ್ರತಂಡದ ಮೇಲೆ ಜೇನುನೊಣ ದಾಳಿ; ಕೆಲವರಿಗೆ ಗಾಯ