‘ಮಾಲಿನ್ಯ ಸಂಸ್ಕರಣೆ,ನಿರ್ಮೂಲನೆ ಅಗತ್ಯ’
Team Udayavani, Jul 4, 2019, 5:55 AM IST
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ನ ಕಜಂಪಾಡಿ ವಾರ್ಡು ಮಟ್ಟದ ಹರಿತ ಕರ್ಮ ಸೇನೆಯ ಉದ್ಘಾಟನಾ ಕಾರ್ಯಕ್ರಮ ಅನಂತ ಕೃಷ್ಣ ಭಟ್ ಶಿರಂತಡ್ಕ ಅವರ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಂ.ಸದಸ್ಯೆ ರೂಪವಾಣಿ ಆರ್.ಭಟ್ ಅವರು ಮಾತನಾಡಿದರು.
ಸ್ವಚ್ಛತೆಗೆ ಪ್ರಾಧಾನ್ಯ ಹಾಗೂ ರೋಗಮುಕ್ತ ಸಮಾಜಕ್ಕಾಗಿ ಮಾಲಿನ್ಯ ಸಂಸ್ಕರಣೆ,ನಿರ್ಮೂಲನೆ ಅಗತ್ಯಎಂದು ರೂಪವಾಣಿ ಆರ್.ಭಟ್ ಅವರಹೇಳಿದರು.
ಸಿಡಿಎಸ್ ಸದಸ್ಯೆ ಹಾಗೂ ಹರಿತ ಕರ್ಮ ಸೇನಾ ಕಾರ್ಯಕರ್ತೆ ಉದಯ ಕುಮಾರಿ ಪ್ರಥಮ ರಸೀದಿ ನೀಡಿದರು.ಸವಿತಾ.ಟಿ,ಆ.ಕಾ.ಕರ್ತೆ ಜಾನಕಿ,ವಾರ್ಡು ಎಡಿಎಸ್ ಅಧ್ಯಕ್ಷೆ ಕೊರತಿ,ಉಪಾಧ್ಯಕ್ಷೆ ಸಂಧ್ಯಾ ಹಾಗೂ ಕುಟುಂಬಶ್ರೀ ಸದಸ್ಯೆಯರು ಉಪಸ್ಥಿತರಿದ್ದರು.
ಮನೆಮನೆಗಳಿಗೆ ಭೇಟಿ
ಹರಿತ ಕರ್ಮ ಸೇನೆಯ ಕಾರ್ಯ ಕರ್ತರು ತಿಂಗಳಿಗೊಮ್ಮೆ ಮನೆಮನೆ ಗಳಿಗೆ ಬೇಟಿ ನೀಡಿ ಪ್ಲಾಸ್ಟಿಕ್ ತ್ಯಾಜ್ಯ,ಅಜೈವ ವಸ್ತುಗಳನ್ನು ಸಂಗ್ರಹಿಸುವರು. ಇದನ್ನು ಪಂ.ಮಟ್ಟದಲ್ಲಿ ಪುನರುತ್ಪಾದನಾ ಘಟಕ ಗಳಿಗೆ ಕಳುಹಿಸಲಾಗುವುದು ಎಂದು ರೂಪವಾಣಿ ಆರ್ ಭಟ್ ಹೇಳಿದರು.ಯೋಜನೆಗೆ ಸಾರ್ವ ಜನಿಕರು ಸಹಕರಿಸುವಂತೆ ಕರೆ ಅವರು ನೀಡಿದರು.