ಇನ್ನೂ ವಿತರಣೆಯಾಗಿಲ್ಲ ಉಚಿತ ಸೈಕಲ್

ಶಾಲಾರಂಭವಾಗಿ ಒಂದು ತಿಂಗಳು

Team Udayavani, Jul 4, 2019, 5:18 AM IST

bicycle

ಉಡುಪಿ: ಶಾಲೆಗೆ ಸೈಕಲ್ನಲ್ಲೇ ಹೋಗುವ ಕನಸು ಕಂಡಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ತಮಗೆ ಸಿಗುವ ಉಚಿತ ಸೈಕಲ್ ಪಡೆಯಲು ಇನ್ನೂ ಒಂದು ತಿಂಗಳು ಕಾಯಬೇಕಾದ ಪರಿಸ್ಥಿತಿ ಇದೆ.

ಸರಕಾರಿ ಹಾಗೂ ಅನುದಾನಿತ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡಲಾಗುತ್ತಿದ್ದು, ಕಳೆದ ಬಾರಿ ಈ ಹೊತ್ತಿಗೆ ವಿದ್ಯಾರ್ಥಿಗಳು ಸೈಕಲ್ನ ಉಪಯೋಗ ಪಡೆದು ಕೊಂಡಿದ್ದರು.

ಆದರೆ ಈ ಬಾರಿ ಸರಕಾರದಿಂದ ಇನ್ನೂ ಸೈಕಲ್ ಬಂದಿಲ್ಲ. ಈ ತಿಂಗಳಲ್ಲಿ ಬರುವ ನಿರೀಕ್ಷೆ ಇದ್ದು, ಬಿಡಿ ಭಾಗಗಳ ಜೋಡಣೆ ಮುಗಿದ ಅನಂತರ ಸೈಕಲ್ ವಿತರಣೆ ಕಾರ್ಯಕ್ರಮಗಳು ನಡೆಯಲಿದೆ.

ಉಡುಪಿ ಜಿಲ್ಲೆಯಲ್ಲಿ 106 ಸರಕಾರಿ ಶಾಲೆಗಳು 73 ಅನುದಾನಿತ ಪ್ರೌಢಶಾಲೆ ಗಳಿವೆ. ದ.ಕ. ಜಿಲ್ಲೆಯಲ್ಲಿ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳು ಸೇರಿ 1,472 ಶಾಲೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ವರ್ಷ ಶಿಕ್ಷಣ ಇಲಾಖೆಯು ಮಾರ್ಚ್‌ ಅಂತ್ಯಕ್ಕೆಅಗತ್ಯ ಇರುವ ಬೈಸಿಕಲ್ಗಳ ಸಂಖ್ಯೆಯನ್ನು ಸರಕಾರಕ್ಕೆ ಕಳುಹಿಸುತ್ತದೆ. ಅದರಂತೆ ಜೂನ್‌ ಅಂತ್ಯಕ್ಕೆ ಬೈಸಿಕಲ್ಗಳು ವಿದ್ಯಾರ್ಥಿಗಳ ಕೈಸೇರುತ್ತವೆ.

ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ 8,572 ಸೈಕಲ್ಗಳನ್ನು ವಿತರಿಸಲಾಗಿತ್ತು. ಬ್ರಹ್ಮಾವರ 1,801, ಬೈಂದೂರು 1,527, ಕಾರ್ಕಳ 1,713, ಕುಂದಾಪುರ 1,710, ಉಡುಪಿ 1,821 ಸೈಕಲ್ಗಳನ್ನು ವಿತರಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13,715 ಸೈಕಲ್ವಿತರಿಸಲಾಗಿತ್ತು. ಬಂಟ್ವಾಳ 3,699, ಬೆಳ್ತಂಗಡಿ 2,810, ಮಂಗಳೂರು ಉತ್ತರ 823, ಮಂಗಳೂರು ದಕ್ಷಿಣ 1,804, ಮೂಡುಬಿದಿರೆ 889, ಪುತ್ತೂರು 2,862, ಸುಳ್ಯ 828. ಈ ಬಾರಿಯೂ ಇಷ್ಟೇ ಪ್ರಮಾಣದಲ್ಲಿ ಸೈಕಲ್ ಬೇಡಿಕೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಶೀಘ್ರ ಸೈಕಲ್ ಬರಲಿದೆ ಮತ್ತು ವಿತರಣೆ ಮಾಡಲಾಗುತ್ತದೆ ಎಂಬುವುದು ಶಿಕ್ಷಣ ಇಲಾಖೆಯ ಸಮಜಾಯಿಷಿ.

ದುರುಪಯೋಗ ಆರೋಪ
ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಗಮನ ದಲ್ಲಿರಿಸಿಕೊಂಡು ಶಿಕ್ಷಣ ಇಲಾಖೆ ಸೈಕಲ್ ತೂಕವನ್ನು ನಿರ್ಧಾರ ಮಾಡಿದೆ. ಅದೇನಿದ್ದರೂ, ರಾಜ್ಯದ ಬಹುತೇಕ ಕಡೆಗಳಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗಿಂತ ಹೆಚ್ಚು ಅವರ ಪೋಷಕರೇ ಅನ್ಯ ಕಾರ್ಯಗಳಿಗೆ ಆ ಸೈಕಲ್ಗಳನ್ನು ಉಪಯೋಗಿಸುತ್ತಿರುವ ಆರೋಪವೂ ಇದೆ. ಈ ಹಿಂದೆಯೂ ಈ ಆರೋಪ ಇತ್ತು. ಆದರೆ ಇಲ್ಲಿವರೆಗೂ ಅದಕ್ಕೆ ಕಡಿವಾಣ ಬಿದ್ದಂತಿಲ್ಲ. ಕಡಿವಾಣ ಹಾಕುವ ನಿಟ್ಟಿನಲ್ಲಿ ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೀಘ್ರದಲ್ಲೇ ವಿತರಣೆ
ಸೈಕಲ್ ವಿತರಣೆಯಲ್ಲಿ ಈ ಬಾರಿ ಸ್ವಲ್ಪ ವಿಳಂಬವಾಗಿದೆ. ಈ ತಿಂಗಳಲ್ಲಿ ಸೈಕಲ್ ಬರುವ ನಿರೀಕ್ಷೆ ಇದೆ. ಅದರ ಬಿಡಿಭಾಗಗಳ ಜೋಡಣೆಗಳು ನಡೆದು ಆಗಸ್ಟ್‌ ತಿಂಗಳ ಮೊದಲಾದರೂ ವಿತರಣೆ ಮಾಡುವ ಬಗ್ಗೆ ಗಮನಹರಿಸಲಾಗುವುದು.
ಶೇಷಶಯನ ಕಾರಿಂಜ,ಡಿಡಿಪಿಐ, 

-ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

1-asasa

Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ

priyanka-gandhi

Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KARಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Udupi ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಕಾನೂನು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Udupi ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಕಾನೂನು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Udupi: ಕಾಲೇಜಿಗೆಂದು ಹೋದ ಯುವತಿ ನಾಪತ್ತೆ

Udupi: ಕಾಲೇಜಿಗೆಂದು ಹೋದ ಯುವತಿ ನಾಪತ್ತೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

1-wqewqewe

Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.