ಅಧಿಕಾರಿಗಳಿಂದ ಕನ್ವೇಯರ್‌ ಬೆಲ್ಟ್ ಅಳವಡಿಕೆ ಪರಿಶೀಲನೆ


Team Udayavani, Jul 5, 2019, 5:18 PM IST

05-July-41

ಸಂಡೂರ: ತಾಲೂಕಿನ 3 ಸ್ಥಳಗಳಲ್ಲಿ ರೈಲ್ವೆ ಸೈಡಿಂಗ್ಸ್‌ ಮತ್ತು ವಿವಿಧ ಗಣಿ ಕಂಪನಿಗಳಿಂದ ಕನ್ವೇಯರ್‌ ಬೆಲ್r ಹಾಕಲು ಕೆಎಂಇಆರ್‌ಸಿಎಲ್ ಹಾಗೂ ಜಿಲ್ಲಾಧಿಕಾರಿ ನಕುಲ್ ಅವರೊಂದಿಗೆ ಸ್ಥಳಗಳನ್ನು ಪರಿಶೀಲನೆ ನಡೆಸಿದರು.

ಸಂಡೂರು: ಧೂಳು ಮುಕ್ತ ಮತ್ತು ರಸ್ತೆಗಳ ಒತ್ತಡ ನಿಯಂತ್ರಣಕ್ಕಾಗಿ ತಾಲೂಕಿನ ಎಲ್ಲ ಗಣಿ ಕಂಪನಿಗಳು ಕನ್ವೇಯರ್‌ ಬೆಲ್r ಅಳವಡಿಕೆಗೆ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಕೆಎಂಇಆರ್‌ಸಿಎಲ್ (ಎಂ.ಡಿ.)ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಅಧಿಕಾರಗಳ ತಂಡ ತಾಲೂಕಿನ ವೆಸ್ಕೋ, ಎಂಎಂಎಲ್, ಬಿಕೆಜಿ ಇತರ ಗಣಿ ಕಂಪನಿಗಳ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಿತು.

2006ರಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಇಡೀ ತಾಲೂಕು ಮಾಲಿನ್ಯವಾಗಿ ಸಾರ್ವಜನಿಕರು ಬದುಕಲಾರದಂಥ ದುಸ್ಥಿತಿ ಮತ್ತು ರಸ್ತೆಗಳೇ ಕಳೆದುಹೋದಂಥ ಸ್ಥಿತಿಯನ್ನು ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಭೇಟಿ ನೀಡಿ ವರದಿ ನೀಡಿದ ಮೇಲೆ ಕೋರ್ಟ್‌ ಮಧ್ಯ ಪ್ರವೇಶ ಮಾಡಿ ವಿಶೇಷವಾಗಿ ಪರಿಸರದ ಪುನುರುಜ್ಜೀವನ ಮತ್ತು ಪುನರುತ್ಪತ್ತಿಗಾಗಿ ಕೆಎಂಇಆರ್‌ಸಿಎಲ್ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಅಡಿಯಲ್ಲಿ ಕಾರ್ಯನಿರ್ವಹಿಸಲು ವಿಶೇಷ ಮಾರ್ಗಸೂಚಿಗಳನ್ನು ನೀಡಿತ್ತು.

ಆ ನಿಟ್ಟಿನಲ್ಲಿ 2 ವರ್ಷಗಳಿಂದ ಜಿಂದಾಲ್ ಕಂಪನಿಯು ನಂದಿಹಳ್ಳಿ ರೈಲ್ವೆ ಸೈಡಿಂಗ್‌ನಿಂದ ಜಿಂದಾಲ್ ಫ್ಯಾಕ್ಟರಿಯವರೆಗೆ ಕನ್ವೇಯರ್‌ ಬೆಲ್r ಹಾಕುತ್ತಿದೆ. ಉಳಿದಂತೆ ಬಹಳಷ್ಟು ಕಂಪನಿಗಳು ಕೋರ್ಟ್‌ ಆದೇಶ ಪಾಲಿಸಿಲ್ಲ. ಹಾಗಾಗಿ ಕೆಎಂಇಆರ್‌ಸಿಎಲ್ (ಎಂ.ಡಿ) ಮ್ಯಾನೇಜಿಂಗ್‌ ಡೈರೆಕ್ಟರ್‌ ಪಿ.ಸಿ. ರೈ, ಮೈಸೂರು ಮಿನಿರಲ್ಸ್ ಕಂಪನಿ ಮ್ಯಾನೇಜಿಂಗ್‌ ಡೈರೆಕ್ಟ್ರ್‌ ನವೀನ್‌ ರಾಜ್‌, ಮುಖ್ಯ ಜನರಲ್ ಮ್ಯಾನೇಜರ್‌ ಶಂಕರಲಿಂಗಯ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಡೆಪ್ಯೂಟಿ ಡೈರೆಕ್ಟರ್‌ ಮಹಾವೀರ್‌, ಜಿಲ್ಲಾಧಿಕಾರಿ ನಕುಲ್, ತಹಶೀಲ್ದಾರ್‌ ಸಿದ್ದೇಶ್‌, ವಲಯ ಅರಣ್ಯಾಧಿಕಾರಿ ದಾದಾಖಲಂದರ್‌, ಶಶಿಧರ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.

ನಂತರ ಅಧಿಕಾರಿಗಳು ಎಂಎಂಎಲ್ ಗಣಿ ಕಂಪನಿ, ಬಿಕೆಜಿ, ವೆಸ್ಕೋ, ಜಿಂದಾಲ್ ಇತರ ಗಣಿ ಕಂಪನಿಗಳು ಅದಿರನ್ನು ರೈಲ್ವೆ ಸೈಡಿಂಗ್ಸ್‌ಗೆ ಕನ್ವೇಯರ್‌ ಬೆಲ್r ಮೂಲಕ ಸಾಗಿಸಿ ನಂತರ ಅದನ್ನು ರೈಲ್ವೆ ಯಾರ್ಡ್‌ನಿಂದ ನಿರ್ದಿಷ್ಟ ಕಂಪನಿಗಳಿಗೆ ಕಳುಹಿಸಬೇಕು ಎನ್ನುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಸ್ಥಳ ನಿಗದಿಪಡಿಸಿದರು. ಪ್ರಮುಖವಾಗಿ ಧರ್ಮಾಪುರ ಭಾಗದಲ್ಲಿ ರೈಲ್ವೆ ಯಾರ್ಡ್‌/ಸೈಡಿಂಗ್‌, ಸುಶೀಲಾನಗರದ ಹತ್ತಿರ ರೈಲ್ವೆ ಯಾರ್ಡ್‌/ಸೈಡಿಂಗ್‌, ನಂದಿಹಳ್ಳಿ ಹತ್ತಿರ ರೈಲ್ವೆ ಯಾರ್ಡ್‌/ಸೈಡಿಂಗ್‌ ನಿರ್ಮಾಣ ಮಾಡಬೇಕು, ಅಲ್ಲದೆ ಅಲ್ಲಿಯವರೆಗೆ ವಿವಿಧ ಗಣಿ ಕಂಪನಿಗಳು ಕನ್ವೇಯರ್‌ ಬೆಲ್r ಹಾಕಲು ಅರಣ್ಯ ಪ್ರದೇಶ, ಗಣಿ ಪ್ರದೇಶಗಳ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಸ್ಥಳ ನಿಗದಿಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಗಣಿ ಕಂಪನಿಗಳಾದ ಎಂ.ಎಂ.ಎಲ್, ಜೆಎಸ್‌ಡಬ್ಲೂ, ವೆಸ್ಕೋ, ಎಸ್‌ಕೆಎಂಇ., ಬಿಕೆಜಿ, ವಿಎನ್‌ಕೆ ಇತರ ಕಂಪನಿಗಳ ಅಧಿಕಾರಿಗಳು ತಂಡಕ್ಕೆ ಮಾಹಿತಿ ನೀಡಿದರು. ಅಲ್ಲದೇ ನೀಲನಕ್ಷೆಯನ್ನೂ ಪರಿಶೀಲನೆ ಮಾಡಿದರು.

ಟಾಪ್ ನ್ಯೂಸ್

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.