ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಕೋತಿ ಎಂದ ಟಿಎಂಸಿ ನಾಯಕ
ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಬಿಜೆಪಿ , ಟಿಎಂಸಿ ಘರ್ಷಣೆ
Team Udayavani, Jul 6, 2019, 2:54 PM IST
ಅಸನ್ಸೊಲ್: ಇಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಮುಂದುವರಿದಿದ್ದು, ಶನಿವಾರವೂ ಮಾರಾಮಾರಿ ನಡೆದಿದೆ.
ಅಸನ್ಸೊಲ್ ನ ಮಹಾನಗರಪಾಲಿಕೆ ಎದುರು ಬಿಜೆಪಿ ಕಾರ್ಯಕರ್ತರು ಮತ್ತು ಟಿಎಂಸಿ ಕಾರ್ಯಕರ್ತರ ನಡೆವೆ ಘರ್ಷಣೆ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಬಬುಲ್ ಸುಪ್ರಿಯೋ ಕೋತಿ ; ಪಂಜರ ನಮ್ಮ ಬಳಿ ಇದೆ
ಘಟನೆ ಬಳಿಕ ಪ್ರತಿಕ್ರಿಯೆ ನೀಡಿರುವ ಅಸನ್ಸೊಲ್ ಮೇಯರ್ ಮತ್ತು ಟಿಎಂಸಿ ನಾಯಕ ಜೆ ತಿವಾರಿ ಅವರ , ಬಿಜೆಪಿಯವರು ನಮ್ಮ ಮೇಲೆ ದಾಳಿ ನಡೆಸಲು ಮುಂದಾದರು, ಆದರೆ ಅವರಿಗೆ ಪಾಲಿಕೆಯ ಗೇಟ್ ಮುಟ್ಟಲೂ ಸಾಧ್ಯವಾಗಲಿಲ್ಲ. ಬಾಬುಲ್ ಸುಪ್ರಿಯೊ ಬಿಜೆಪಿಯ ಕೋತಿ. ನಮ್ಮಲ್ಲಿ ಆ ಕೋತಿಯನ್ನು ಹಿಡಿದು ಹಾಕಲು ಪಂಜರ ಸಿದ್ದವಾಗಿದೆ. ಅಂತಹ ಕೋತಿಗಳನ್ನು ಹಿಡಿದು ಪಂಜರದಲ್ಲಿಡುವ ಶಕ್ತಿ ನಮ್ಮಲ್ಲಿದೆ ಎಂದು ಹೇಳಿದ್ದಾರೆ.
ಅಸನ್ಸೊಲ್ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಬಾಬುಲ್ ಅವರು ಕೇಂದ್ರ ದ ರಾಜ್ಯ ಖಾತೆ ಸಚಿವರಾಗಿದ್ದು, ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ