ಕೊಲ್ಲೂರು: “ಪಿಯಾನೋ ಕೀ’ ಮಾದರಿಯ ಕಿಂಡಿ ಅಣೆಕಟ್ಟು
ರಾಜ್ಯದಲ್ಲೇ ಪ್ರಥಮ ಬಾರಿಗೆ ವಿನೂತನ ಪ್ರಯೋಗ
Team Udayavani, Jul 13, 2019, 5:15 AM IST
ಕೊಲ್ಲೂರು: ನೀರು ಸಂಗ್ರಹಣೆ ಉದ್ದೇಶದಿಂದ ವಿಶಿಷ್ಟ ಪಿಯಾನೋ ಕೀ ಮಾದರಿ ಅಣೆಕಟ್ಟೊಂದನ್ನು ಕೊಲ್ಲೂರಿನ ದಳಿ ಎಂಬಲ್ಲಿ ನಿರ್ಮಿಸಲಾಗುತ್ತಿದೆ.
ಏನಿದು ಪಿಯಾನೋ
ಕೀ ಅಣೆಕಟ್ಟು ?
ಸಂಗೀತ ಉಪಕರಣ ಪಿಯಾನೋ ಕೀ ಮಾದರಿಯಲ್ಲಿರುವ ಈ ಅಣೆಕಟ್ಟು ವಿಶಿಷ್ಟವಾದ ವಿನ್ಯಾಸ ಹೊಂದಿದ್ದು, ನೀರನ್ನು ತಡೆಗಟ್ಟುವುದರೊಂದಿಗೆ ರಭಸವಾಗಿ ಹರಿಯುವುದನ್ನೂ ನಿಯಂತ್ರಿಸುತ್ತದೆ. 2.22 ಕೋಟಿ ರೂ. ವೆಚ್ಚದಲ್ಲಿ ಈ ಅಣೆಕಟ್ಟು ರೂಪುತಳೆಯುತ್ತಿದ್ದು, ಹರಿಯುವ ನೀರನ್ನು ಪರಿಣಾಮಕಾರಿಯಾಗಿ ಬಳಸುವುದಕ್ಕೆ ಪ್ರಯೋಜನಕಾರಿಯಾಗಿದೆ.
ಯಾಕಾಗಿ ಈ ವ್ಯವಸ್ಥೆ?
ಸಾಮಾನ್ಯ ಅಣೆಕಟ್ಟಿನಲ್ಲಿ ನೀರ ಹರಿವಿಗೆ ಅಡ್ಡಲಾಗಿ ಕಾಂಕ್ರೀಟ್ ಗೋಡೆ ಕಟ್ಟಲಾಗುತ್ತದೆ. ಆದರೆ ಇಲ್ಲಿ ಅಡ್ಡಲಾಗಿ ಪಿಯಾನೋ ಕೀ ಮಾದರಿಯಲ್ಲಿ ಕಾಂಕ್ರೀಟ್ ಸ್ಲಾéಬ್ಗಳಿದ್ದು ನೀರಿನ ಮಟ್ಟ ನಿಗದಿತ ಪ್ರಮಾಣದಿಂದ ಹೆಚ್ಚಾದ ಬಳಿಕ ಅದನ್ನು ಹಾದು ಹೋಗುತ್ತದೆ. ಇದರಿಂದ ಅಧಿಕ ಪ್ರಮಾಣದ ನೀರಿನ ಹರಿವಿನ ಸಂದರ್ಭ ಅಣೆಕಟ್ಟೆಯ ಮೇಲೆ ಒತ್ತಡ ಬೀಳದು. ಜತೆಗೆ ಸ್ಥಳೀಯವಾಗಿ ಸಾಕಷ್ಟು ನೀರು ಒದಗಿಸಲೂ ಸಾಕಾಗುತ್ತದೆ.
ಇತರ ಅಣೆಕಟ್ಟುಗಳಿಗೆ ಹೋಲಿಸಿದಲ್ಲಿ ಇದರ ವೆಚ್ಚ, ನಿರ್ವಹಣೆ ವೆಚ್ಚವೂ ಕಡಿಮೆ. 50 ಮೀ. ಉದ್ದ, 4 ಮೀ. ಎತ್ತರಕ್ಕೆ ಈ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಹೆಚ್ಚಿನ ನೀರು ಬದಿಯಲ್ಲಿ ಸೋರಿಕೆಯಾಗಬಾರದೆಂಬ ಉದ್ದೇಶದಿಂದ ಬದಿಯಲ್ಲಿ ಕಿಂಡಿ ಅಣೆಕಟ್ಟಿನ ಮಾದರಿ ಗೇಟ್ಗಳನ್ನು ಹಾಕಲಾಗುವುದು. ಪ್ರಾಯೋಗಿಕವಾಗಿ ರಾಜ್ಯದಲ್ಲೇ ಪ್ರಥಮವಾಗಿ ಮಾಡಲಾಗಿರುವ ಈ ಕಿಂಡಿ ಅಣೆಕಟ್ಟು ಕೊಲ್ಲೂರಿನ ನಿವಾಸಿಗಳಿಗೆ ಉಪಯೋಗ ಆಗಲಿದೆ.
ಮುಂದಿನ ತಿಂಗಳು ಲೋಕಾರ್ಪಣೆ
ಅಣೆಕಟ್ಟು ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಗೇಟ್ ನಿರ್ಮಾಣ ನಡೆಯುತ್ತಿದೆ. ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ಪೋಲಾಗುವುದಿಲ್ಲ
ರಾಜ್ಯದಲ್ಲೇ ಪ್ರಥಮವಾಗಿ ಪ್ರಾಯೋಗಿಕ ನೆಲೆಯಲ್ಲಿ ನಿರ್ಮಿಸಲಾಗುತ್ತಿರುವ ಪಿಯಾನೋ ಕೀ ಕಿಂಡಿ ಅಣೆಕಟ್ಟು ಪೋಲಾಗುವ ನೀರಿನ ಬಳಕೆಗೆ ಉಪಯೋಗಕಾರಿಯಾಗಿದೆ.
–ಆಲ್ವಿನ್,
ಸಹಾಯಕ ಇಂಜಿನಿಯರ್, ಸಣ್ಣ ನಿರಾವರಿ ಇಲಾಖೆ
ಕೃಷಿ ಭೂಮಿಗೆ ನೀರು
ದಡಿ ಆಸು-ಪಾಸಿನ ನಿವಾಸಿಗಳಿಗೆ ನೀರಿನ ಲಭ್ಯತೆಗೆ ಹಾಗೂ ಕೃಷಿ ಭೂಮಿಗೆ ನೀರುಣಿಸುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಲಾಗಿದೆ.
-ಬಿ.ಎಂ. ಸುಕುಮಾರ ಶೆಟ್ಟಿ,
ಶಾಸಕರು, ಬೈಂದೂರು
-ಡಾ| ಸುಧಾಕರ್ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekar;ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಾವ-ಅಳಿಯ ಮುಳುಗಿ ಸಾವು
Kaup: ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ
Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ
ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ
Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!
MUST WATCH
ಹೊಸ ಸೇರ್ಪಡೆ
Ajekar;ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಾವ-ಅಳಿಯ ಮುಳುಗಿ ಸಾವು
IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ
Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ
Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು
Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ