ಸರಕಾರ ಅತಂತ್ರದಲ್ಲೂ ವರ್ಗಾವಣೆಯ ಸುಗ್ಗಿ
Team Udayavani, Jul 17, 2019, 5:57 AM IST
ಬೆಂಗಳೂರು: ರಾಜ್ಯದಲ್ಲಿನ ಅತಂತ್ರ ರಾಜಕೀಯ ಬೆಳವಣಿಗೆಯ ನಡುವೆಯೇ ಸಾರಿಗೆ ಇಲಾಖೆಯಲ್ಲಿ ಮಾತ್ರ ಸಚಿವರು ದಾಖಲೆ ಪ್ರಮಾಣದಲ್ಲಿ ವರ್ಗಾವಣೆ ಮಾಡುತ್ತಿದ್ದಾರೆ!
ಎರಡು ವಾರಗಳಲ್ಲಿ ಈ ಇಲಾಖೆಯೊಂದರಲ್ಲಿ 250ಕ್ಕೂ ಅಧಿಕ ವರ್ಗಾವಣೆಗಳಾಗಿವೆ. ಸರಕಾರ ಅಸ್ಥಿರಗೊಳ್ಳು ತ್ತಿರುವ ಬೆನ್ನಲ್ಲೇ ಸಾರಿಗೆ ಇಲಾಖೆಯಲ್ಲಿ ವರ್ಗಾವಣೆ ಚಟುವಟಿಕೆಗಳು ಗರಿಗೆದರಿದ್ದು, ಈ ಸಂಬಂಧದ ದಾಖಲೆಗಳು “ಉದಯವಾಣಿ’ಗೆ ಲಭ್ಯವಾಗಿವೆ.
11 ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ನಡೆಸದ ಸಾರಿಗೆ ಇಲಾಖೆ, ಕಳೆದ ವರ್ಷವಷ್ಟೇ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಸಿದ್ಧತೆ ನಡೆಸಿತ್ತು. ಇದರಲ್ಲಿ ಇನ್ನಷ್ಟು ಪಾರದರ್ಶಕತೆ ತರಲು ಅಂದು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯ ಉನ್ನತ ಅಧಿಕಾರಿಗಳು ತಯಾರಿ ಕೂಡ ನಡೆಸಿದ್ದರು. ಇದರ ಮೊದಲ ಭಾಗವಾಗಿ ಸುಮಾರು ಒಂದು ಸಾವಿರ ನೌಕರರು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಆಯ್ಕೆಯಾಗಿದ್ದರು. ಅಷ್ಟರಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಿತು. ಇದರ ಬೆನ್ನಲ್ಲೇ ಸಾರಿಗೆ ಇಲಾಖೆಗೆ ನೂತನ ಸಾರಥಿಯಾಗಿ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅಧಿಕಾರದ ಚುಕ್ಕಾಣಿ ಹಿಡಿದರು.
ಈ ಮಧ್ಯೆ ನೂತನ ಸಚಿವರು ಮತ್ತು ಐಎಎಸ್ ಅಧಿಕಾರಿಗಳ ನಡುವೆ ಶುರುವಾದ ಶೀತಲ ಸಮರ ಆ ಅಧಿಕಾರಿಗಳ ಎತ್ತಂಗಡಿಯಲ್ಲಿ ಸಮಾಪ್ತಿಯಾಗಿತ್ತು. ಜತೆಗೆ ಅಂದಿನ ವರ್ಗಾವಣೆ ಪ್ರಕ್ರಿಯೆ ಕೂಡ ಮೂಲೆಗುಂಪಾಗಿತ್ತು.
ಇಲಾಖೆಯಲ್ಲಿ ಕೊನೆಯದಾಗಿ ವರ್ಗಾವಣೆ ಪ್ರಕ್ರಿಯೆ ನಡೆದದ್ದು 2008ರ ಎಪ್ರಿಲ್ನಲ್ಲಿ. ಅನಂತರದಿಂದ ಈವರೆಗೂ ಇಲಾಖೆ ಮೂಲಕ ಅಧಿಕೃತವಾಗಿ ಯಾವುದೇ ವರ್ಗಾವಣೆ ನಡೆದಿರಲಿಲ್ಲ. ಸದ್ಯ ತರಾತುರಿಯಲ್ಲಿ ವರ್ಗಾವಣೆಯಾಗಿರುವ 250 ಸಿಬಂದಿಯ ಪೈಕಿ 70ಕ್ಕೂ ಅಧಿಕ ಮಂದಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ್ದಾರೆ. ಇದರಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಅವರ ಶಿಫಾರಸುಗಳೇ ಅಧಿಕ ಎಂದು ದಾಖಲೆಗಳಲ್ಲಿ ಉಲ್ಲೇಖೀಸಲಾಗಿದೆ.
ಬಿಎಂಟಿಸಿಯಿಂದ ಬೇಡಿಕೆ ಹೆಚ್ಚು
ಬಿಎಂಟಿಸಿ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದಾಗಿ ಇಲ್ಲಿನ ಸಿಬಂದಿ ಲಾಭದಲ್ಲಿ ಮುಂದು ವರಿಯುತ್ತಿರುವ ಕೆಎಸ್ಆರ್ಟಿಸಿ ಮತ್ತು ಈಶಾನ್ಯ ಸಂಸ್ಥೆಗೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ಬಿಎಂಟಿಸಿ ತಮ್ಮ ಸಿಬಂದಿಯ ಪಿಎಫ್, ಎಲ್ಐಸಿ ಮತ್ತು ಮೆಡಿಕಲ್ ಬಿಲ್ಗಳನ್ನು ಪಾವತಿ ಮಾಡಲಾಗದಂಥ ಪರಿಸ್ಥಿತಿಗೆ ಬಂದಿದೆ. ಹಾಗಾಗಿ ಇಲ್ಲಿಂದ ಅತೀ ಹೆಚ್ಚು ವರ್ಗಾವಣೆ ಅರ್ಜಿಗಳು ಬಂದಿವೆ.
ಸಾರಿಗೆ ಇಲಾಖೆಯಲ್ಲಿ ಒಂದು ವಾರದಿಂದ 250ರಿಂದ 300 ಚಾಲಕ, ನಿರ್ವಾಹಕ ಮತ್ತು ಮೆಕ್ಯಾನಿಕ್ಗಳ ವರ್ಗಾವಣೆ ನಡೆದಿದೆ. ಯಾವುದೇ ಪತ್ರಿಕಾ ಪ್ರಕಟನೆ ಹೊರಡಿಸದೆ ಸಚಿವರು ಅಕ್ರಮವಾಗಿ ವರ್ಗಾವಣೆ ದಂಧೆ ನಡೆಸುತಿದ್ದಾರೆ.
-ಯೋಗೇಶ್ , ಆರ್ಟಿಐ ಕಾರ್ಯಕರ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ