ಕೂಡಿಗೆ: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ
Team Udayavani, Jul 18, 2019, 5:30 AM IST
ಮಡಿಕೇರಿ :ಮುಂಗಾರು ಕೈ ಕೊಟ್ಟು ರೈತರು, ಜನ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾದಾಗ ಕಪ್ಪೆಗಳ ಮದುವೆ ಮೂಲಕ ವರುಣನನ್ನು ಪ್ರಾರ್ಥಿಸುವ ಆಚರಣೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿದೆ.
ಇದಕ್ಕೆ ಪೂರಕವಾಗಿ ಕೊಡಗು ಜಿಲ್ಲೆಯ ಕೂಡಿಗೆ ಗ್ರಾಮದಲ್ಲೂ ಅಪರೂಪದ ಪ್ರಸಂಗವೆಂಬಂತೆ ಕಪ್ಪೆಗಳ ಮದುವೆ ನಡೆಯಿತು. ಜಿಲ್ಲೆಯಲ್ಲಿ ಬರಗಾಲದ ಛಾಯೆ ಎದ್ದು ಕಾಣುತ್ತಿದ್ದು, ಇದರಿಂದ ಕಂಗೆಟ್ಟ ಕೂಡಿಗೆಯ ಮಲ್ಲೇನಹಳ್ಳಿ ಗ್ರಾಮದ ರೈತರು ಮಳೆಗಾಗಿ ಕಪ್ಪೆಗಳ ಮದುವೆಯನ್ನು ಮಾಡಿ ಪ್ರಾರ್ಥಿಸಿದ ಪ್ರಸಂಗ ನಡೆಯಿತು.
ಇಲ್ಲಿನ ಗ್ರಾಮಸ್ಥರು ಸಮೀಪದ ಹಳ್ಳದಿಂದ ಗಂಡು ಮತ್ತು ಹೆಣ್ಣುಕಪ್ಪೆಯನ್ನು ಹಿಡಿದು ತಂದು ರೈತರೊಬ್ಬರ ಜಮೀನ ಮರವೊಂದರ ಕೆಳಭಾಗದಲ್ಲಿ ಚಪ್ಪರ ನಿರ್ಮಿಸಿ ಸಿಂಗರಿಸಿ, ಎರಡು ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಗಿದೆ.
ಕಪ್ಪೆಗಳ ಮದುವೆಗೂ ಊಟದ ವ್ಯವಸ್ಥೆ ಮಾಡ ಲಾಗಿತ್ತು. ಮನುಷ್ಯರ ಮದುವೆಯ ಸಂಪ್ರದಾಯದಂತೆಯೇ ಈ ಕಪ್ಪೆಗಳ ಮದುವೆಯೂ ಮಳೆಗಾಗಿ ನಡೆಯಿತು.
ಕಪ್ಪೆಗಳ ಮದುವೆ ಮಾಡಿದ ನಂತರ ರೈತರು ಮಳೆಗಾಗಿ ಪ್ರಾರ್ಥಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಮಂಜುನಾಥ್, ಗೋವಿಂದ, ಗಿರೀಶ್, ಗಣೇಶ್, ನಾಗರಾಜ್, ಚಿಣ್ಣಪ್ಪ, ಶೋಭ, ಮಂಜಮ್ಮ, ಸುಶೀಲಮ್ಮ ಸೇರಿದಂತೆ ಊರಿನ ರೈತರು, ಗ್ರಾಮಸ್ಥರು ಕಪ್ಪೆಗಳ ಮದುವೆಗೆ ಸಾಕ್ಷಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ